ಉತ್ತರ ಪ್ರದೇಶದ ದಲಿತ ಯುವತಿ ಆತ್ಮಕ್ಕೆ ಕ್ಯಾಂಡಲ್ ಹಚ್ಚಿ ಶಾಂತಿಕೋರಿದ ಮಹಿಳಾ ಸಂಘಟನೆಗಳು.

ಚಳ್ಳಕೆರೆ

    ನಗರದ ಜನಪ್ರಿಯ ಸೇವಾ ಕೇಂದ್ರ ಹಾಗೂ ವಿವಿಧ ಮಹಿಳಾ ಸಂಘಟನೆಗಳು ಉತ್ತರ ಪ್ರದೇಶದ ಹತ್ರಾಸ್ ಗ್ರಾಮದಲ್ಲಿ ದುಷ್ಕರ್ಮಿಗಳಿಂದ ಬಲತ್ಕಾರಕ್ಕೆ ಒಳಗಾಗಿ ಕೊಲೆಯಾಗಿ ಮೃತಪಟ್ಟ ದಲಿತ ಯುವತಿಯ ಆತ್ಮಕ್ಕೆ ಶಾಂತಿಕೋರಿ ಇಲ್ಲಿನ ನೆಹರೂ ವೃತ್ತದಲ್ಲಿ ಸಂಜೆ ಕ್ಯಾಂಡಲ್ ಹಚ್ಚಿ ಅವರ ಆತ್ಮಕ್ಕೆ ಶಾಂತಿಯನ್ನು ಕೋರಿದರು.

    ಈ ಸಂದರ್ಭದಲ್ಲಿ ಮಾತನಾಡಿದ ಜನಪ್ರಿಯ ಸೇವಾ ಕೇಂದ್ರದ ಮುಖ್ಯಸ್ಥೆ ಸಿಸ್ಟರ್ ಸಿಲೀಯ ಮಾತನಾಡಿ, ಇಂತಹ ಘಟನೆ ಸಮಾಜದಲ್ಲಿ ಎಂದೂ ನಡೆಯಬಾರದು. ಮಹಿಳಾ ಸಮುದಾಯ ಸದಾಕಾಲ ಸಮಾಜದ ಉನ್ನತ್ತಿಗಾಗಿ ಕಾರ್ಯನಿರ್ವಹಿಸುತ್ತಾ ಬಂದಿದೆ. ಎಲ್ಲರೊಂದಿಗೆ ಪ್ರೀತಿವಿಶ್ವಾಸದಿಂದ ಬೆರೆಯುವ ಮಹಿಳೆಯರ ಮೇಲೆ ಇಂತಹ ದೌರ್ಜನ್ಯ ಎಂದೂ ನಡೆಯಬಾರದು. ಮೃತ ಯುವತಿಯ ದಾರೂಣ್ಯ ಸ್ಥಿತಿ ಮತ್ತೆ ಮರುಕಳಿಸದಂತೆ ಅಲ್ಲಿನ ಸರ್ಕಾರ ಎಚ್ಚರಿಕೆ ವಹಿಸಬೇಕು, ಪೊಲೀಸ್ ಇಲಾಖೆ ಘಟನೆಯಲ್ಲಿ ಭಾಗಿಯಾದ ಕಿಡಿಗೇಡಿಗಳನ್ನು ಬಂಧಿಸಿ ಶಿಕ್ಷೆಗೆ ಒಳಪಡಿಸಬೇಕೆಂದರು.

    ಈ ಕಾರ್ಯಕ್ರಮದಲ್ಲಿ ಮಹಿಳಾ ಸಂಘಟನೆಯ ಜ್ಯೋತಿ, ಶಬಾನ, ಮೀನಾಕ್ಷಿ, ಲಕ್ಷ್ಮಿ, ಸೇವಾ ಕರ್ತರಾದ ಮಧು, ರಾಜಣ್ಣ ಮುಂತಾದವರು ಭಾಗವಹಿಸಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap