ದಕ್ಷಿಣ ಕನ್ನಡ :
ಉದ್ಯಮಿಯೊಬ್ಬರ 8 ವರ್ಷದ ಪುತ್ರನನ್ನು ಅಪಹರಿಸಿ 17 ಕೋಟಿ ರೂ. ಬೇಡಿಕೆ ಇಟ್ಟಿರುವ ಘಟನೆ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಉಜಿರೆಯಲ್ಲಿ ನಡೆದಿದೆ.
ಅನುಭವ್ ಅಪಹರಣವಾದ ಬಾಲಕ. ಉಜಿರೆ ರಥಬೀದಿ ನಿವಾಸಿ ಬಿಜೋಯ್ ಮತ್ತು ಸರಿಯಾ ಎಂಬುವವರ ಪುತ್ರ ಅನುಭವ್ ಗುರುವಾರ ಸಂಜೆ 6.30 ರ ಸುಮಾರಿಗೆ ಮಾಜಿ ಸೈನಿಕರಾಗಿದ್ದ ತನ್ನ ತಾತ ಶಿವನೊಂದಿಗೆ ಆಟ ವಾಡುತ್ತಿದ್ದಾಗ ಅಪಹರಣವಾಗಿದ್ದಾನೆ ಎನ್ನಲಾಗಿದೆ.
ಬಿಳಿ ಇಂಡಿಕಾ ಕಾರಿನಲ್ಲಿ ನಾಲ್ವರು ಮನೆಮುಂದೆ ಮಗು ಅಪಹರಣ ಆಗುವ 10 ನಿಮಿಷದಿಂದ ನಿಂತಿರುವುದನ್ನು ಮನೆ ಮಂದಿ ಗಮನಿಸಿದ್ದರು. ಬಳಿಕ ಸಂಜೆ 6.30 ರ ಸುಮಾರಿಗೆ ಅಪಹರಿಸಿದ್ದು, 17 ಕೋಟಿ ರೂ. ನೀಡುವಂತೆ ಬೇಡಿಕೆ ಇರಿಸಿದೆ ಎಂದು ಬಾಲಕನ ಅಜ್ಜ ಎ.ಕೆ. ಶಿವನ್ ಬೆಳ್ತಂಗಡಿ ಪೊಲೀಸ್ ಠಾಣೆಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.
ಸದ್ಯ ಈ ಕುರಿತು ಹತ್ತಿರದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಚಾರ್ಮಾಡಿ ಅರಣ್ಯ ಪ್ರದೇಶದಲ್ಲಿ ಅಪಹರಣಕಾರರು ಇರುವ ಶಂಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಚಾರ್ಮಾಡಿ, ಕೊಟ್ಟಿಗೆಹಾರದ ಬಳಿ ಪೊಲೀಸ್ ನಾಕಾಬಂದಿ ಮಾಡಲಾಗಿದ್ದು, ಸದ್ಯ ಎರಡು ಪೊಲೀಸ್ ತಂಡಗಳಿಂದ ಶೋಧ ಕಾರ್ಯಚರಣೆ ನಡೆಯುತ್ತಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
![](https://prajapragathi.com/wp-content/uploads/2020/12/business-man-son-kidnapd.jpg)