ನೆಲಮಂಗಲ :
ದುಷ್ಕರ್ಮಿಗಳು ಬೆಳಗಿನ ಜಾವ ಮೂರ್ತವಿಸರ್ಜನೆ ಮಾಡಿ ದೇವಸ್ಥಾನವನ್ನು ಧ್ವಂಸ ಗೊಳಿಸಿರುವ ಘಟನೆ ಎನ್ಎಚ್ 4 ಹೆದ್ದಾರಿಯ ಶ್ರೀ ಸರ್ಕಲ್ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ನಡೆದಿದೆ.
ಕೋಟಿಗಟ್ಟಲೆ ಹಿಂದುಗಳ ಆರಾಧ್ಯ ದೈವ ಭಜರಂಗಿ ದೇವಸ್ಥಾನದಲ್ಲಿ ಮೂತ್ರ ವಿಸರ್ಜನೆ ಮಾಡಿ ದೇವಾಲಯಕ್ಕೆ ಬೆಂಕಿ ಹಚ್ಚಿ ವಿಗ್ರಹವನ್ನು ಪುಡಿಗೈದು ಹಿಂದೂಗಳ ಭಾವನೆಗಳಿಗೆ ದಕ್ಕೆ ತಂದಿದ್ದು, ಇಡೀ ಹಿಂದೂ ಸಮಾಜವೇ ತಲೆತಗ್ಗಿಸುವಂತಹ ಕೃತ್ಯ ಇಂದು ನೆಲಮಂಗಲದ ಟೋಲ್ ಗೇಟ್ ಬಳಿಯಿರುವ ಎನ್ಎಚ್4 ನಲ್ಲಿ ನಡೆದಿದೆ.
ಸ್ಥಳಕ್ಕೆ ಶ್ರೀರಾಮ ಸೇನೆ ಬೆಂಗಳೂರು ಪದಾಧಿಕಾರಿಗಳು ಭೇಟಿ ನೀಡಿ ನೆಲಮಂಗಲ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದು, ಇದಕ್ಕೆ ಕಾರಣರಾಗಿ ರುವವರನ್ನು ಈ ಕೂಡಲೇ ಬಂಧಿಸುವಂತೆ ಶ್ರೀರಾಮಸೇನೆಯ ರಾಜ್ಯ ಕಾರ್ಯದರ್ಶಿಗಳಾದ ಎಂ ಎಸ್ ಹರೀಶ್ ಒತ್ತಾಯಿಸಿದ್ದಾರೆ ಎನ್ನಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
![](https://prajapragathi.com/wp-content/uploads/2021/02/Circle-anjaneya-nelamangala-temple.jpg)