ತುಮಕೂರು :
ಹಿಂದುಳಿದ ವರ್ಗಗಳ ಹಾಸ್ಟೆಲ್ಗೆ ಕಳೆದ ವರ್ಷ ಮಂಜೂರು ಮಾಡಿದ್ದ 20,000 ಕ್ವಿಂಟಾಲ್ ಆಹಾರ ದಾಸ್ತಾನು ಹುಳ ಬಿದ್ದು ಹಾಳಾಗಿದ್ದು, ನಿರ್ಲಕ್ಷ್ಯ ವಹಿಸಿದ ಬಿಸಿಎಂ ಜಿಲ್ಲಾಧಿಕಾರಿ ವಿರುದ್ಧ ಕ್ರಮಕ್ಕೆ ಸಚಿವ ಜೆ. ಸಿ. ಮಾಧುಸ್ವಾಮಿ ಸೂಚನೆ ನೀಡಿದರು.
ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆಯುತ್ತಿರುವ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ ಗಂಗಾ ಕಲ್ಯಾಣ ಯೋಜನೆಯಡಿ ಕೊರೆದ ಕೊಳವೆ ಬಾವಿಗಳಿಗೆ ಸಕಾಲಕ್ಕೆ ಪಂಪ್ ಮೋಟಾರು ನೀಡದ ಕುರಿತು, ವಾಲ್ಮೀಕಿ ಅಂಬೇಡ್ಕರ್ ಭವನ ಹಾಗೂ ಹಾಸ್ಟೆಲ್ ಕಟ್ಟಡ ದ ನಿರ್ಮಾಣ ವಿಳಂಬವಾಗಿರುವ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿ ನಾವೆಲ್ಲ ಸತ್ತ ಮೇಲೆ ಕಾಮಗಾರಿ ಮುಗಿಸ್ತೀರಾ ಎಂದು ತರಾಟೆಗೆ ತೆಗೆದುಕೊಂಡರು.
ಸಭೆಯಲ್ಲಿ ಉಸ್ತುವಾರಿ ಕಾರ್ಯದರ್ಶಿ, ಡಿಸಿ, ಎಸ್ಪಿ, ಜಿಪಂ ಸಿಇಒ ಹಾಗೂ ಶಾಸಕರು ಗಳಾದ ಬಿ. ಸಿ. ನಾಗೇಶ್, ಸಿಎಂ. ರಾಜೇಶ್ ಗೌಡ, ಎಚ್.ಡಿ.ರಂಗನಾಥ್, ಡಿ.ಸಿ.ಗೌರಿ ಶಂಕರ್ ಹಾಗೂ ಎಂಎಲ್ಸಿ ತಿಪ್ಪೇಸ್ವಾಮಿ ಜಿಲ್ಲಾ ಮಟ್ಟದ ಅಧಿಕಾರಿಗಳು ಭಾಗಿಯಾಗಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
