ಮಧುಗಿರಿ :
ತಾಲ್ಲೂಕಿನ ಕಸಬಾ ಹೋಬಳಿಯ ಗಂಜಲಗುಂಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನರೇಗಾ ಯೋಜನೆಯಡಿಯಲ್ಲಿ ಕಾಮಗಾರಿಗಳನ್ನು ನಡೆಸಲು ಪಿಡಿಓ ಹಾಗೂ ಕೆಲ ಅಧಿಕಾರಿಗಳು ಲಂಚ ಪಡೆಯುತ್ತಿದ್ದಾರೆಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಗ್ರಾಮಸ್ಥ ಶಿವಕುಮಾರ್ ಮಾತನಾಡಿ, ಗಂಜಲಗುಂಟೆ ಗ್ರಾಮ ಪಂಚಾಯತಿಯಲ್ಲಿ ನರೇಗಾ ಯೋಜನೆಯಡಿಯಲ್ಲಿ ಕೃಷಿ ಹೊಂಡಗಳನ್ನು ನಿರ್ಮಾಣ ಮಾಡಲಾಗಿದ್ದು, ಮೆಟೀರಿಯಲ್ ಬಿಲ್ 6900 ರೂ. ಸರ್ಕಾರದಿಂದ ಕೆಲವರಿಗೆ ಆರನೆ ತಾರೀಕು ಮಂಜೂರಾಗಿದ್ದು, ಇದರಲ್ಲಿ 4000 ಸಾವಿರ ರೂ.ಗಳನ್ನು ಮಾತ್ರ ಒಬ್ಬರಿಗೆ ಕೊಟ್ಟಿರುತ್ತಾರೆ. ಇನ್ನೂ ಒಬ್ಬರಿಂದ 2900 ರೂ. ಹಿಡಿದುಕೊಂಡಿರುತ್ತಾರೆ. ಇದರ ಬಗ್ಗೆ ನರೇಗಾ ಫಲಾನುಭವಿಗಳು ಪ್ರಶ್ನಿಸಿದರೆ, ಪಂಚಾಯಿತಿಗೆ ಮುಂದೆ ಏನಕ್ಕೂ ಕೆಲಸಕ್ಕೆ ಬರುವುದಿಲ್ಲವೆ? ಖರ್ಚು-ವೆಚ್ಚ ಬರುತ್ತದೆ ಎಂದು ಅಧಿಕಾರಿಗಳು ಉಡಾಫೆ ಉತ್ತರ ನೀಡಿದ್ದಾರೆ.
ನರೇಗಾ ಕೆಲಸದಲ್ಲಿ ಪಿಡಿಓ ಮಾಡಿದ್ದೆ ರೂಲ್ಸು, ಇವರು ಹೇಳಿದ್ದೆ ಕಥೆ, ಅಲ್ಲದೆ ಪಿಡಿಓ ಗ್ರಾಪಂ ಕಛೇರಿಗೆ ಹೆಚ್ಚು ಬರುವುದೇ ಇಲ್ಲ. ಇವರಿಗೆ ನೀಡಿರುವ ಸರ್ಕಾರಿ ನಂಬರಿಗೆ ಫೋನ್ ಮಾಡೋಣ ಎಂದರೆ ನಮ್ಮ ನಂಬರ್ಗಳನ್ನು ಬ್ಲಾಕ್ ಲಿಸ್ಟ್ಗೆ ಹಾಕಿಕೊಂಡಿದ್ದಾರೆ. ಒಟ್ಟಾರೆ ಗಂಜಲಗುಂಟೆ ಗ್ರಾಪಂನಲ್ಲಿ ಯಾವುದೇ ಕೆಲಸವು ಲಂಚ ಇಲ್ಲದೆ ಆಗುವುದಿಲ್ಲ ಎಂದು ಆರೋಪಿಸಿದ್ದಾರೆ.
ಈ ಸಂದರ್ಭದಲ್ಲಿ ಜಯಕರ್ನಾಟಕ ಜನಪರ ವೇದಿಕೆ ಅಧ್ಯಕ್ಷ ಉಮಾಶಂಕರ್, ಕಾರ್ಯಾಧ್ಯಕ್ಷ ಕೆ.ಪಿ.ರಾಘವೇಂದ್ರ, ಪ್ರಧಾನ ಕಾರ್ಯದರ್ಶಿ ಜಿಮ್ ಜೆಪಿ, ಸಂಘಟನಾ ಕಾರ್ಯದರ್ಶಿ ಇಮ್ರಾನ್, ನಗರಾಧ್ಯಕ್ಷ ಸಚಿನ್.ಎಸ್, ಗ್ರಾಮಸ್ಥರಾದ ದಾಸಣ್ಣ, ಕುಮಾರ್, ಚಿತ್ರಲಿಂಗಯ್ಯ, ಬಾಲಕೃಷ್ಣ, ರಮೇಶ್, ರವಿಕುಮಾರ್, ದೇವರಾಜು ಮತ್ತಿತರರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
