ಬೆಂಗಳೂರು:
ರಾಜ್ಯ ಪೊಲೀಸ್ ಇಲಾಖೆಯ 545 ಸಬ್ಇನ್ಸ್ಪೆಕ್ಟರ್ ಹುದ್ದೆ ನೇಮಕಾತಿ ಪ್ರಕ್ರಿಯೆಯಲ್ಲಿ ಎರಡು ಮಾದರಿಯ ಅಕ್ರಮ ನಡೆದಿರುವುದು ಸಿಐಡಿ ತನಿಖೆಯಲ್ಲಿ ಸಾಬೀತಾಗಿದೆ. ಒಎಂಆರ್ ಶೀಟ್ನಲ್ಲಿ ಅಭ್ಯರ್ಥಿಗಳು ಪ್ರಶ್ನೆಗಳಿಗೆ ಉತ್ತರಿಸದೆ ಖಾಲಿ ಬಿಟ್ಟು ಬಳಿಕ ಬೇರೆಯವರು ಸರಿ ಉತ್ತರ ಭರ್ತಿ ಮಾಡಿರುವುದು ಮತ್ತು ಬ್ಲೂಟೂತ್ ಬಳಸಿ ಎಲ್ಲ ಪ್ರಶ್ನೆಗಳಿಗೆ ಉತ್ತರಿಸಿರುವುದಕ್ಕೆ ಸಂಬಂಧಿಸಿದ ಸಾಕ್ಷ್ಯ ಸಂಗ್ರಹಿಸಿ ಸಿಐಡಿ ಆರೋಪಿಗಳನ್ನು ಹೆಡೆಮುರಿ ಕಟ್ಟುತ್ತಿದೆ.
2020ರಲ್ಲಿ 545 ಎಸ್ಐ (ಸಿವಿಲ್) ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿತ್ತು. ಕರೊನಾ ಕಾರಣ 2021ರ ಅ.2ರಂದು ರಾಜ್ಯದ 92 ಕೇಂದ್ರಗಳಲ್ಲಿ ಲಿಖಿತ ಪರೀೆ ನಡೆಸಲಾಗಿದ್ದು, 54,104 ಅಭ್ಯರ್ಥಿಗಳು ಬರೆದಿದ್ದಾರೆ. 2022ರ ಜ.19ಕ್ಕೆ ತಾತ್ಕಾಲಿಕ ಆಯ್ಕೆಪಟ್ಟಿ ಬಿಡುಗಡೆ ಆಗಿತ್ತು. ಇದಾದ ಮೇಲೆ ಅಕ್ರಮ ನಡೆದಿರುವ ಕುರಿತು ಹಲವು ಊಹಾಪೋಹಗಳು ಹರಿದಾಡುತ್ತಿದ್ದವು.
ಬ್ರೌನ್ ರೈಸ್ ಸೇವನೆ ʼಯಿಂದ ಈ ʻ ಅಘಾತಕಾರಿ ಆರೋಗ್ಯ ಸಮಸ್ಯೆʼಗಳಿಗೆ ಬ್ರೇಕ್ ಹಾಕಿ
ಕೊನೆಗೆ ತಾತ್ಕಾಲಿಕ ಆಯ್ಕೆಪಟ್ಟಿ ತಡೆಹಿಡಿದು ಏ.7ಕ್ಕೆ ಸರ್ಕಾರ ಸಿಐಡಿ ತನಿಖೆಗೆ ವಹಿಸಿತು. ಸಿಐಡಿ ಎಸ್ಪಿ ರಾವೇಂದ್ರ ಹೆಗಡೆ ನೇತೃತ್ವದ ತಂಡ ತನಿಖೆ ನಡೆಸಿದ್ದು, ಪ್ರಸ್ತುತ ಕಲುಬುರಗಿಯ 2 ಪರೀಾ ಕೇಂದ್ರ ಮತ್ತು ಬೆಂಗಳೂರಿನ 7 ಕೇಂದ್ರಗಳಲ್ಲಿ ಅಭ್ಯರ್ಥಿಗಳು ಬ್ಲೂಟೂತ್ ಬಳಸಿ ಹಾಗೂ ಓಎಂಆರ್ ಶೀಟ್ನಲ್ಲಿ ತಿದ್ದುಪಡಿ ಮಾಡಿ ಆಯ್ಕೆ ಆಗಿರುವುದು ಸಾಬೀತಾಗಿದೆ.
ಕಲಬುರಗಿಯ ಪರೀಕ್ಷಾ ಕೇಂದ್ರ ಜ್ಞಾನಜ್ಯೋತಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಪರೀೆ ಬರೆದವರ ಪೈಕಿ ಆಯ್ಕೆಯಾಗಿದ್ದ 11 ಅಭ್ಯರ್ಥಿಗಳ ಒಎಂಆರ್ ಶೀಟ್ಗಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ರವಾನಿಸಲಾಗಿತ್ತು. ಇದರಲ್ಲಿ ಹಲವು ವಿಚಾರ ಕುತೂಹಲ ಕೆರಳಿಸಿದೆ.
ಅದೇ ರೀತಿ ಬೆಂಗಳೂರಿನಲ್ಲಿ ಆಯ್ಕೆಯಾಗಿದ್ದ 172 ಅಭ್ಯರ್ಥಿಗಳಿಗೆ ನೋಟಿಸ್ ಕೊಟ್ಟು ಒಎಂಆರ್ನ ಕಾರ್ಬನ್ ಶೀಟ್ ಮತ್ತು ಪ್ರವೇಶಪತ್ರ ನೀಡುವಂತೆ ಸೂಚಿಸಲಾಗಿತ್ತು. ಈ ಪೈಕಿ ನಾಲ್ವರು ಗೈರಾಗಿದ್ದರು. ಎಲ್ಲರ ಒಎಂಆರ್ ಶೀಟ್ ಮತ್ತು ಕಾರ್ಬನ್ ಶೀಟ್ಗಳನ್ನು ಎಎಸ್ಎಲ್ಗೆ ರವಾನಿಸಿದಾಗ 22 ಅಭ್ಯರ್ಥಿಗಳ ಒಎಂಆರ್ ಶೀಟ್ ತಿರುಚಿರುವುದು ಕಂಡುಬಂದಿದೆ.
ಇದಲ್ಲದೆ, 7 ಪರೀಾ ಕೊಠಡಿಯಲ್ಲಿ ಅಕ್ರಮ ನಡೆದಿರುವುದು ಗೊತ್ತಾಗಿದೆ. ಬೆಂಗಳೂರಿನಲ್ಲಿ ಒಎಂಆರ್ ಶೀಟ್ ತಿರುಚುವುದರ ಮೂಲಕ ಅಕ್ರಮ ಎಸಗಿರುವುದು ಸ್ಪಷ್ಟವಾಗಿದೆ. ಉಳಿದವರ ವಿಚಾರಣೆ ಮತ್ತು ಪರಿಶೀಲನೆ ನಡೆಯುತ್ತಿದ್ದು, ಮತ್ತಷ್ಟು ಅಕ್ರಮ ಬೆಳಕಿಗೆ ಬರುವ ಸಾಧ್ಯತೆ ಇರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಒಎಂಆರ್ ಶೀಟ್ ತಿರುಚುವುದು: ಇದು ಹಳೆಯ ಮಾದರಿ ಅಕ್ರಮ. ಈ ಹಿಂದೆಯೂ ಹಲವು ಬಾರಿ ಒಎಂಆರ್ ಶೀಟ್ ಬದಲಾಯಿಸಿ ಅಥವಾ ತಿದ್ದಿ ಅಕ್ರಮ ಎಸಗಿಸಲಾಗಿತ್ತು ಎಂಬ ಆರೋಪ ಕೇಳಿಬಂದಿವೆ. ಪರೀಾ ಕೊಠಡಿಯಲ್ಲಿ ಅಭ್ಯರ್ಥಿಗಳು, ತಮಗೆ ಗೊತ್ತಿರುವ ಪ್ರಶ್ನೆಗಳಿಗೆ ಅಂದರೆ 150 ಪ್ರಶ್ನೆಗಳಲ್ಲಿ ಕೇವಲ 15 ರಿಂದ 20 ಪ್ರಶ್ನೆಗಳಿಗೆ ಮಾತ್ರ ಉತ್ತರಿಸಿ ಬರುವಂತೆ ಸೂಚಿಸಿರುತ್ತಾರೆ.
ರಮೇಶ್ ಜಾರಕಿಹೊಳಿ ವಿರುದ್ಧ 600 ಕೋಟಿ ರೂ. ವಂಚನೆ ಆರೋಪ: ಕಾಂಗ್ರೆಸ್ ಟ್ವೀಟ್
ಅದರಂತೆ, ಅಭ್ಯರ್ಥಿಗಳು ಒಎಂಆರ್ ಶೀಟ್ನಲ್ಲಿ ಉತ್ತರಿಸದೆ ಖಾಲಿ ಬಿಟ್ಟು ಬಂದಿದ್ದಾರೆ. ಪರೀೆ ಸಮಯ ಮುಗಿದ ಮೇಲೆ ನಿಗದಿತ ಅಭ್ಯರ್ಥಿಗಳ ಒಎಂಆರ್ ಶೀಟ್ನ್ನು ಸೀಲ್ ಮಾಡುವ ಮುನ್ನ ಕೊಠಡಿಯಲ್ಲಿಯೇ ಮೇಲ್ವಿಚಾರಕರು ಕುಳಿತು ಸರಿ ಉತ್ತರ ಭರ್ತಿ ಮಾಡಿದ್ದಾರೆ. ಕೆಲ ಪರೀಾ ಕೇಂದ್ರಗಳಲ್ಲಿ ಅಭ್ಯರ್ಥಿಗಳಿಂದಲೇ ಭರ್ತಿ ಮಾಡಿಸಿರುವುದು ಕಂಡುಬಂದಿದೆ.
ನಿಲ್ಲದ ಅಕ್ರಮ ಪೊಲೀಸ್ ನೇಮಕಾತಿಯಲ್ಲಿ ಅಕ್ರಮ ತಡೆಗಟ್ಟಲು ವರ್ಷದಿಂದ ವರ್ಷಕ್ಕೆ ಸುಧಾರಣೆ ತರಲಾಗುತ್ತಿದೆ. ಆದರೂ ಅಕ್ರಮ ನಡೆಯುತ್ತಿರುವುದು ಪೊಲೀಸ್ ಇಲಾಖೆಗೆ ಕಪು$್ಪಚುಕ್ಕೆ ಆಗಿದೆ. ದೈಹಿಕ ಸಹಿಷ್ಣುತೆ ಮತ್ತು ಲಿಖಿತ ಪರೀೆಗೆ ಬದಲಿ ಅಭ್ಯರ್ಥಿಗಳು ಹಾಜರು ಆಗುತ್ತಾರೆ ಎಂಬ ಕಾರಣಕ್ಕೆ ಬಯೋಮೆಟ್ರಿಕ್ ಅಳವಡಿಸಲಾಗಿದೆ.
ಪಾವಗಡ : ಭೀಕರ ರಸ್ತೆ ಅಪಘಾತ ವ್ಯಕ್ತಿಯ ದುರಂತ ಸಾವು, ಮತ್ತೋರ್ವ ವ್ಯಕ್ತಿ ಸ್ಥಿತಿ ಗಂಭೀರ..!
ದೈಹಿಕ ಸಹಿಷ್ಣುತೆ ಪರೀೆ ವೇಳೆ ಬೆರಳಚ್ಚು ನೀಡಿದರೆ ನೇಮಕಾತಿ ನಡೆಯುವವರೆಗೂ ಅನ್ವಯ ಆಗಲಿದೆ. ಇನ್ನೂ ಸಿಸಿ ಕ್ಯಾಮರಾ ಅಳವಡಿಕೆ, ಎಲೆಕ್ಟ್ರಾನಿಕ್ ಡಿವೈಸ್ ಪತ್ತೆಗೆ ಮೆಟಲ್ ಡಿಟೆಕ್ಟರ್ಗಳಿಂದ ಪರೀಶೀಲನೆ ನಡೆಸಲಾಗುತ್ತಿದೆ. ಎಲ್ಲಕ್ಕಿಂತ ಮುಖ್ಯವಾಗಿ ಅಕ್ರಮಕ್ಕೆ ರಾಜಮಾರ್ಗವಾಗಿದ್ದ 10 ಅಂಕಗಳ ಮೌಖಿಕ ಪರೀೆ ಸಹ ರದ್ದು ಮಾಡಲಾಗಿದೆ. ಆದರೂ ನೇಮಕಾತಿಯಲ್ಲಿ ಅಕ್ರಮ ರಾಜಾರೋಷವಾಗಿ ನಡೆಯುತ್ತಿದ್ದು, ಪ್ರತಿಭಾ ವಂತ ಅಭ್ಯರ್ಥಿಗಳಿಗೆ ಅನ್ಯಾಯವಾಗುತ್ತಿದೆ.
ತನಿಖೆಯಲ್ಲಿ ಬೆಳಕಿಗೆ ಬಂದಿದ್ದು
# ಪರೀೆ ಬರೆದು ಆಯ್ಕೆಯಾಗಿದ್ದ 11 ಅಭ್ಯರ್ಥಿಗಳಲ್ಲಿ ನಾಲ್ವರ ಒಎಂಆರ್ ಶೀಟ್ಗೂ, ಕಾರ್ಬನ್ ಒಎಂಆರ್ ಶೀಟ್ಗೂ ವ್ಯತ್ಯಾಸ ಕಂಡುಬಂದಿದೆ
# 3 ಅಭ್ಯರ್ಥಿಗಳು ಪರೀಕ್ಷಾ ಸಮಯದಲ್ಲಿ ಬ್ಲೂಟೂತ್ ಬಳಸಿರುವುದು ದೃಢಪಟ್ಟಿದೆ.
# ಜ್ಞಾನಜ್ಯೋತಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ 8 ಅಭ್ಯರ್ಥಿಗಳು ಅಕ್ರಮ ಎಸಗಿದ್ದಾರೆ. ಇವರಿಗೆ ಸಹಾಯ ಮಾಡಿದ ಪರಿವೀಕ್ಷಕರು, ಸಂಚುಕೋರರನ್ನು ಪತ್ತೆಹಚ್ಚಲಾಗಿದೆ.
ಪಿಎಸ್ಐ ನೇಮಕಾತಿ ಪರೀಕ್ಷೆ ಅಕ್ರಮವನ್ನು ಪೊಲೀಸರೇ ಬಯಲಿಗೆ ತಂದಿದ್ದಾರೆ: ಹೊಸಬಾಂಬ್ ಸಿಡಿಸಿದ ಹೆಚ್ ಡಿ ಕುಮಾರಸ್ವಾಮಿ!
ಬ್ಲೂಟೂತ್ನಲ್ಲಿ ಉತ್ತರ
ಲಿಖಿತ ಪರೀೆಯಲ್ಲಿ ಅಕ್ರಮ ಎಸಗುವ ಸಲುವಾಗಿಯೇ ಪರೀಕ್ಷಾ ಕೊಠಡಿ ನಿಗದಿ ಮಾಡಿ ತಮಗೆ ಬೇಕಾದ ಮೇಲ್ವಿಚಾರಕರನ್ನು ನೇಮಿಸಲಾಗುತ್ತದೆ. ಯಾಕೆಂದರೆ ಕೊಠಡಿ ಪ್ರವೇಶಕ್ಕೂ ಮೊದಲು ಲೋಹ ಶೋಧಕದಿಂದ ಅಭ್ಯರ್ಥಿಗಳನ್ನು ತಪಾಸಣೆ ನಡೆಸಿದಾಗ ಮೊಬೈಲ್, ಬ್ಲೂಟೂತ್ ಇನ್ನಿತರ ಎಲೆಕ್ಟ್ರಾನಿಕ್ಸ್ ಡಿವೈಸ್ಗಳು ಪತ್ತೆ ಆಗುತ್ತವೆ.
SSLC ಫಲಿತಾಂಶದ ಬಗ್ಗೆ ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಮುಖ್ಯ ಮಾಹಿತಿ
ಅದಕ್ಕಾಗಿ ತಮಗೆ ಬೇಕಾದ ಮೇಲ್ವಿಚಾರಕರನ್ನು ನೇಮಿಸಿ ಬ್ಲೂಟೂತ್ ಬಳಸಲು ಅವಕಾಶ ಕಲ್ಪಿಸಿದ್ದಾರೆ. ಸಣ್ಣ ಗಾತ್ರದ ಬ್ಲೂಟೂತ್ ಕಿವಿಯಲ್ಲಿ ಇಟ್ಟುಕೊಂಡಾಗ ಸಮೀಪದ ಹೋಟೆಲ್ ಅಥವಾ ಪರಿಚಿತರ ಮನೆಯಲ್ಲಿ ಕುಳಿತ ದಲ್ಲಾಳಿಗಳು ಪ್ರತಿ ಪ್ರಶ್ನೆಗೂ ಉತ್ತರ ಹೇಳಿ ಬರೆಸಿದ್ದಾರೆ. ಇದಕ್ಕಾಗಿ ಕೋಡ್ವರ್ಡ್ ಮತ್ತು ಸಿಗ್ನಲ್ ಪಾಲಿಸಿದ್ದಾರೆ. ಈ ಮೂಲಕ ಮೂವರು ಆಯ್ಕೆ ಆಗಿರುವುದು ಸಿಐಡಿ ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
