ತುಮಕೂರು
ನಗರದ ಬಡ್ಡಿ ಹಳ್ಳಿ ಶ್ರೀ ಕೃಷ್ಣ ನಗರ 4ನೇ ಮುಖ್ಯ ರಸ್ತೆ ಯ ಮನೆಯೊಂದರಲ್ಲಿ ಮನೆಯ ಲ್ಲಿ ಯಾರು ಇಲ್ಲದ ವೇಳೆ ಕಳ್ಳರು ತಮ್ಮ ಕೈ ಚಳಕ ತೋರಿದ್ದಾರೆ.
ಬೆಸ್ಕಾಂ ಇಲಾಖೆ ನೌಕರ ಫಯಾಜ್ ಅಹಮದ್ ಅವರು ತಮ್ಮ ಸಂಬಂಧಿಕರ ಮನೆಗೆಂದು ಶನಿವಾರ ಸಂಜೆ ಯೇ ಬೆಂಗಳೂರಿಗೆ ತೆರಳಿದ್ದರು. ಮನೆಯ ಲ್ಲಿ ಯಾರು ಇಲ್ಲದಿರುವುದನ್ನು ಅರಿತ ಕಳ್ಳರು ಮನೆಯ ಮಹಡಿಯಿಂದ ಒಳನುಗ್ಗಿ ಕೆಳಗಿನ ಹಾಗೂ ಮೇಲಿನ ಮನೆಯ ಬಾಗಿಲು ಮೀಟಿ ಒಳನುಗ್ಗಿದ್ದಾರೆ.
ಸೋಮವಾರ ಬೆಳಗ್ಗೆ ಮಾಲೀಕರು ಮನೆಗೆ ಮರಳಿದಾಗ ಕಳ್ಳತನದ ಕೃತ್ಯ ಬಯಲಾಗಿದ್ದು ಕ್ಯಾತ್ಸಂದ್ರ ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾರೆ.
ಮನೆಯಲ್ಲಿ 65ಸಾವಿರ ನಗದು, ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳ್ಳತನವಾಗಿದೆ ಎನ್ನಲಾಗುತ್ತಿದ್ದು , ಘಟನಾ ಸ್ಥಳಕ್ಕೆ ಕ್ಯಾತ್ಸಂದ್ರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಮನೆಯ ಹೊರಭಾಗದ ಗೇಟ್ ಬೀಗ ಹಾಕಿದಂತೆಯೇ ಇದ್ದು ಮೊದಲ ಅಂತಸ್ತಿನ ಮೂಲಕ ಒಳನುಗ್ಗಿ ಕಳ್ಳರು ಮಾಡಿರುವ ಕೃತ್ಯ ನಾಗರಿಕರನ್ನು ಬೆಚ್ಚಿ ಬೀಳಿಸಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
