ಸ್ಯಾಂಕಿ ಕೆರೆಯಲ್ಲಿ ‘ಕಾವೇರಿ ಆರತಿ’: ಜಲ ರಕ್ಷಣೆ ಬಗ್ಗೆ ಡಿಕೆ ಶಿವಕುಮಾರ್​​ ಪ್ರತಿಜ್ಞಾವಿಧಿ

ಬೆಂಗಳೂರು

    ನಗರದ ಸ್ಯಾಂಕಿ ಕೆರೆ ಆವರಣದಲ್ಲಿ ಇಂದು ‘ಕಾವೇರಿ ಆರತಿ’ ಕಾರ್ಯಕ್ರಮ ನಡೆಯಿತು. ಡಿಸಿಎಂ ಡಿಕೆ ಶಿವಕುಮಾರ್  ತಮ್ಮ ಪತ್ನಿಯೊಂದಿಗೆ ಗಂಗಾ ಮಾತೆಗೆ ಆರತಿ ಬೆಳಗಿದರು. ಈ ವೇಳಿ ಮಾತನಾಡಿದ ಅವರು, ಜಲಮಾತೆಗೆ ಪ್ರಾರ್ಥನೆ ಮಾಡಬೇಕಾದ್ದು ನಮ್ಮೆಲ್ಲರ ಕರ್ತವ್ಯ. ನೀರಿಲ್ಲದೆ ನಾವ್ಯಾರೂ ಬದಕಲು ಸಾಧ್ಯವಿಲ್ಲ, ನೀರಿಂದಲೇ ನಾಗರಿಕತೆ. ನೀರು ಉಳಿಸಿಕೊಳ್ಳಲು, ನೀರು ಸಂರಕ್ಷಣೆ ಮಾಡಲು ಪ್ರಯತ್ನಿಸುತ್ತಿದ್ದೇವೆ.

    ಮುಂದೆ ಕೆಆರ್‌ಎಸ್‌ನಲ್ಲೂ ಕಾವೇರಿ ಆರತಿ ಕಾರ್ಯಕ್ರಮ ನಡೆಸುತ್ತೇವೆ. ವಿಶೇಷವಾಗಿ ಧಾರ್ಮಿಕವಾಗಿ ಕಾವೇರಿ ಮಾತೆಗೆ ಪ್ರಾರ್ಥನೆ ಮಾಡಲಾಗಿದೆ. ಕಾವೇರಿ ನೀರಿನಿಂದ ಜ್ಯೂಸ್‌ ಮಾಡುತ್ತೇವೆ, ಪಾನಕ ಮಾಡುತ್ತೇವೆ. ನೀರನ್ನ ರಕ್ಷಣೆ ಮಾಡಬೇಕು, ಸರಿಯಾದ ರೀತಿ ಜಲ ರಕ್ಷಣೆ ಆಗಬೇಕು. ದೈನಂದಿನ ಚಟುವಟಿಕೆಗಳಲ್ಲಿ ಮಿತವಾಗಿ ನೀರು ಬಳಸಿ, ನೀರು ಉಳಿಸುತ್ತೇನೆ. ಮಳೆ ಕೊಯ್ಲು ವಿಧಾನ ಅನುಸರಿಸಿ ಭವಿಷ್ಯಕ್ಕಾಗಿ ನೀರು ಉಳಿಸುತ್ತೇನೆ ಎಂದು ಕಾರ್ಯಕ್ರಮದ ವೇದಿಕೆಯಿಂದಲೇ ಜಲ ರಕ್ಷಣೆ ಬಗ್ಗೆ ಪ್ರತಿಜ್ಞಾವಿಧಿ ಸ್ವೀಕರಿಸಿದರು.

Recent Articles

spot_img

Related Stories

Share via
Copy link