ಬಳ್ಳಾರಿ
ಜಮೀನುಗಳಲ್ಲಿ ಅಥವಾ ಖಾಲಿ ಜಾಗಗಳಲ್ಲಿ ನೀರಿನ ಪಾಯಿಂಟ್ ನೋಡಿ ಬೋರ್ವೆಲ್ ಹಾಕುವುದನ್ನ ನಾವೆಲ್ಲ ನೋಡಿದ್ದೆವೆ. ಆದರೆ ಇಲ್ಲೊಂದು ಕಡೆ ನದಿ ಒಡಲಿನಲ್ಲೇ ಬೋರವೆಲ್ ಕೊರಸಿ ಊರಿಗಳಿಗೆ ನೀರು ಸರಬರಾಜು ಮಾಡುತ್ತಿದ್ದಾರೆ. ಬೇಸಿಗೆ ಆರಂಭದಲ್ಲಿಯೇ ಗಣಿನಾಡು ಬಳ್ಳಾರಿಯಲ್ಲಿ ನೀರಿನ ಅಭಾವ ಶುರುವಾಗಿದೆ. ಹೀಗಾಗಿ ವೇದಾವತಿ ನದಿಯ ಉದ್ದಕ್ಕೂ ಬೋರವೆಲ್ ಕೊರಸಿ ತಮ್ಮ ಗ್ರಾಮಗಳಿಗೆ, ಕೃಷಿ ಜಮೀನುಗಳಿಗೆ ನೀರು ಸರಬರಾಜು ಸಪ್ಲೈ ಮಾಡುತ್ತಿದ್ದಾರೆ. ಈ ಕುರಿತು ಒಂದು ವರದಿ ಇಲ್ಲಿದೆ ನೋಡಿ.
ಬೇಸಿಗೆ ಆರಂಭದಲ್ಲಿಯೇ ಗಣಿನಾಡು ಬಳ್ಳಾರಿಯಲ್ಲಿ ನೀರಿನ ಅಭಾವ ಶುರುವಾಗಿದೆ. ಅಂತರ್ಜಲ ಮಟ್ಟ ಕುಸಿತ ಹಿನ್ನೆಲೆ ಜಮೀನುಗಳಲ್ಲಿ ಹಾಗೂ ಖಾಲಿ ಜಾಗೆಗಳಲ್ಲಿದ್ದ ಬೋರವೆಲ್ಗಳು ಭತ್ತಿ ಹೋಗಿವೆ. ಹೀಗಾಗಿ ವೇದಾವತಿ ನದಿ ಒಡಲಲ್ಲೇ ಜನರು ಬೋರವೆಲ್ ಕೊರೆಸುತ್ತಿದ್ದಾರೆ. ರೂಪನಗುಡಿ ಹಾಗೂ ಕಮ್ಮರಚೇಡ್ ಗ್ರಾಮಗಳಿಗೆ ವೇದಾವತಿ ನದಿಯಲ್ಲಿ ಕೊರೆಸಿದ ಬೋರ್ಗಳಿಂದ ನೀರು ಸಪ್ಲೈ ಆಗುತ್ತಿದೆ.
ಇನ್ನು ಆ ಬೋರಗಳಲ್ಲಿ ಸದ್ಯಕ್ಕೆ ಮೂರು ಇಂಚು ನೀರು ಬಿದ್ದಿದ್ದು ಅದೇ ನೀರನ್ನ ಗ್ರಾಮಗಳಿಗೆ ಸಪ್ಲೈ ಮಾಡಲಾಗುತ್ತಿದೆ. ಆದರೆ ಆ ನೀರು ಜನಕ್ಕೆ, ಜಾನುವಾರಿಗೆ ಸಾಲುತ್ತಿಲ್ಲ. ರೂಪನಗುಡಿ ಗ್ರಾಮದಲ್ಲಿ 7000 ಜನ ಸಂಖ್ಯೆ ಇದೆ, ಕಮ್ಮರಚೇಡ್ ಗ್ರಾಮದಲ್ಲಿ 4000 ಕ್ಕೂ ಅಧಿಕ ಜನ ಸಂಖ್ಯೆ ಇದೆ. ಹೀಗಾಗಿ ಎರಡು ಬೋರಗಳ ಮೂಲಕ ನಿರಂತರ ನೀರನ್ನ ಹರಿಸಲಾಗುತ್ತಿದೆ. ಇಷ್ಟಿದ್ದರೂ ನೀರಿನ ಅಭಾವ ಇದೆ. ಹೀಗಾಗಿ ಬೇಸಿಗೆ ಮುಗಿಯೋವರಗೆ ಏನ ಗತಿ ಅನ್ನೊದು ಜನರ ಆತಂಕವಾಗಿದೆ
