ಆಯ್ದ 70 ಅಂಗನವಾಡಿ ಕೇಂದ್ರಗಳ ಸಹಾಯಕಿಯರಿಗೆ 2 ದಿನಗಳ ತರಬೇತಿ ಕಾರ್ಯಕ್ರಮ

ನಾಯಕನಹಟ್ಟಿ

    ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಇಂಡಿಯಾ ಲಿಟರೆಸಿ ಪ್ರಾಜೆಕ್ಟ್ ಸಂಸ್ಥೆಯ ಸಹಭಾಗಿತ್ವದಲ್ಲಿ ಶಾಲಾ ಪೂರ್ವ ಶಿಕ್ಷಣ ಚಟುವಟಿಕೆ ಮತ್ತು ಮಕ್ಕಳ ಶುಚಿತ್ವ ಕುರಿತು ಆಯ್ದ 70 ಅಂಗನವಾಡಿ ಕೇಂದ್ರಗಳ ಸಹಾಯಕಿಯರಿಗೆ 2 ದಿನಗಳ ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.   ಕಾರ್ಯಕ್ರಮದ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದ ಶ್ರೀ ಮಂಜುನಾಥ ಬೆಸ್ತರ, ಯೋಜನೆ ವ್ಯವಸ್ಥಾಪಕರು ಐ.ಎಲ್.ಪಿ.ಯವರು, ಕರ್ನಾಟಕ ಮಾದರಿ ಶಾಲೆಗಳ ಮಾರ್ಗದರ್ಶಿ ಕಾರ್ಯಕ್ರಮದ ಭಾಗವಾಗಿ ಶಾಲಾ ಪೂರ್ವ ಶಿಕ್ಷಣ(ಅಂಗನವಾಡಿ ಕೇಂದ್ರಗಳ) ಬಲವರ್ಧನೆ ‌ಮತ್ತು ಕನಿಷ್ಠ ಮೂಲಭೂತ ಸೌಲಭ್ಯಗಳನ್ನು ಒದಗಿಸುವುದು, ಜೊತೆಗೆ ಅಂಗನವಾಡಿ ಕಾರ್ಯಕರ್ತೆಯರಿಗೆ, ಸೂಪರವೈಸರ್ ಗಳಿಗೆ ಹಾಗೂ ಸಹಾಯಕಿಯರಿಗೆ ವೃತ್ತಿಪರ ಅಭಿವೃದ್ಧಿ ತರಬೇತಿ ನೀಡುವ ಮೂಲಕ ಕೇಂದ್ರಗಳ ಸಶಕ್ತೀಕರಣ ಮಾಡುವ ಗುರಿ ಹೊಂದಿದೆ ಎಂದು ತಿಳಿಸಿದರು.

   ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದ ಶಿಶು ಅಭಿವೃದ್ಧಿ ಅಧಿಕಾರಿಗಳಾದ ಶ್ರೀ ರಾಜುನಾಯ್ಕ ರವರು ಶಾಲಾ ಪೂರ್ವ ಶಿಕ್ಷಣದ ಮಹತ್ವ ಹಾಗೂ ಇಂದಿನ‌ ಸ್ಪರ್ಧಾತ್ಮಕ ಸಮಾಜದಲ್ಲಿ ನಾವೆಲ್ಲರೂ ಒಟ್ಟಾಗಿ ಮಕ್ಕಳ ಶಾಲಾ ಪೂರ್ವ ಶಿಕ್ಷಣ ಬಲವರ್ಧನೆಗೆ ಶ್ರಮಿಸೋಣ, ಅಂಗನವಾಡಿ ಕೇಂದ್ರಗಳಲ್ಲಿ ಶಾಲಾ ಪೂರ್ವ ಶಿಕ್ಷಣ ಮಕ್ಕಳಿಗೆ ಅತಿ ಮುಖ್ಯವಾಗಿದೆ ಪ್ರಸ್ತುತ ದಿನಗಳಲ್ಲಿ ಮಕ್ಕಳ ಶುಚಿತ್ವ ಹಾರೈಕೆ ಶಿಕ್ಷಣಗಳಲ್ಲಿ ಸಹಾಯಕಿಯರ ಕೆಲಸ ಮಹತ್ತರವಾದಂತಹ ಪಾತ್ರವಹಿಸುತ್ತದೆ ಎಂದು ತಿಳಿಸಿದರು.

   ಶ್ರಿಯುತ ಮಲ್ಲಿಕಾರ್ಜುನ ತರಬೇತಿದಾರರು ಮಾತಾಡಿ ವಿಷಯಗಳನ್ನು ಮಕ್ಕಳಿಗೆ ತಿಳಿಸಿ ನಿಮ್ಮ ಕೇಂದ್ರಗಳನ್ನ ಮಾದರಿ ಕೇಂದ್ರಗಳಾಗಿ ರೂಪಿಸಿ ಎಂದು ಸಲಹೆ ನೀಡಿದರು.ಇಂಡಿಯಾ ಲಿಟರಸಿ ಪ್ರಾಜೆಕ್ಟ್ ನವರು ಆಯ್ಕೆಯಾದ 70 ಕೇಂದ್ರಗಳಿಗೆ ನೂರಕ್ಕೂ ಹೆಚ್ಚು ವಿಧದ ಆಟಿಕೆ ಸಾಮಗ್ರಿಗಳನ್ನು ಒಳಗೊಂಡ ಕಲಿಕೋಪಕರಣಗಳ ಕಿಟ್ ಅನಾವರಣಗೊಳಿಸಿ ಅವುಗಳ ಉಪಯೋಗಗಳ ಬಗ್ಗೆ ತಿಳಿಸಿ ಉತ್ತಮ ಕಲಿಕಾ ಸಾಮಗ್ರಿಗಳು ಎಂದು ಪ್ರಶಂಶಿಸಿದರು. ಐಎಲ್‌ಪಿ ತಂಡದ ಸದಸ್ಯರಾದ. ಶ್ರೀ ಮರಿಪಾಲಯ್ಯ, ಗೌರಿ, ಮಾರುತಿ, ಮಂಜುನಾಥ ಎಂ. ಮಂಗಳಮ್ಮರವರು ಭಾಗಿಯಾಗಿದ್ದರು

Recent Articles

spot_img

Related Stories

Share via
Copy link