ಗಸ್ತು ಅರಣ್ಯ ಪಾಲಕ ನವೀನ್ ಕುಮಾರ್ ನಿಧನ

ಹುಳಿಯಾರು:

   ಹೋಬಳಿಯ ದಸೂಡಿ ಅರಣ್ಯ ವಲಯದ ಗಸ್ತು ಅರಣ್ಯ ಪಾಲಕ ಎಸ್.ಆರ್. ನವೀನ್ ಕುಮಾರ್ (31) ತೀವ್ರ ಹೃದಯಾಘಾತದಿಂದ ಬುಧವಾರ ನಿಧನರಾಗಿದ್ದಾರೆ.ಬುಧವಾರ ಮುಂಜಾನೆ ಎದೆನೋವು ಕಾಣಿಸಿಕೊಂಡು ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಮೃತರಾಗಿದ್ದಾರೆ. ಮೃತರು ಮೂಲತಃ ಜಾವಗಲ್ ಬಳಿಯ ಸಿಂಗಟಗೆರೆ ಗ್ರಾಮದವರು. ಹಾಸನ ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸಿ ಕಳೆದ ವರ್ಷ ಬುಕ್ಕಾಪಟ್ಟಣ ಅರಣ್ಯ ವಲಯಕ್ಕೆ ವರ್ಗವಾಗಿ ಬಂದಿದ್ದರು. ಮೃತರಿಗೆ ಪತ್ನಿ, 3 ಹಾಗೂ 1 ವರ್ಷದ ಹೆಣ್ಣು ಮಕ್ಕಳು ಇದ್ದಾರೆ.

Recent Articles

spot_img

Related Stories

Share via
Copy link