ಪರಿಸರ ಸಂರಕ್ಷಿಸಿದರೆ ಮಾತ್ರ ಉಳಿಗಾಲ : ಸಂಗನಬಸವ ಶ್ರೀ

ಶಿಗ್ಗಾವಿ :

      ನಮ್ಮ ಜೀವನವಿರುವುದೇ ಪರಿಸರದಲ್ಲಿ ಆ ಪರಿಸರವನ್ನು ನಾವು ಸಂರಕ್ಷಿಸಿದರೆ ಮಾತ್ರ ಉಳಿಗಾಲ ಇಲ್ಲದಿದ್ದರೆ ಎಲ್ಲವೂ ಅಳಿಗಾಲವಾದಿತು ಎಂಬುದನ್ನು ಅರಿತು ಸಸ್ಯ ಶ್ರಾವಣದಂತ ವಿನೂತನ ಕಾರ್ಯಕ್ರಮ ಕೈಗೊಂಡಿದೆ ಎಂದು ವಿರಕ್ತಮಠದ ಸಂಗನಬಸವ ಮಹಾಸ್ವಾಮಿಗಳು ಹೇಳಿದರು.

      ತಾಲೂಕಿನ ಚಿಕ್ಕನೆಲ್ಲೂರ ಗ್ರಾಮದಲ್ಲಿ ಶಿಗ್ಗಾವಿ ವಿರಕ್ತಮಠದ ಸಂಗನಬಸವ ಮಹಾಸ್ವಾಮಿಗಳ ನೇತೃತ್ವದಲ್ಲಿ ಮಠದ ವತಿಯಿಂದ ಪರಿಸರ ಸಂರಕ್ಷಣೆ ಅಭಿಯಾನದ ನಿಮಿತ್ಯೆ “ಸಸ್ಯ ಶ್ರಾವಣ” ಕಾರ್ಯಕ್ರಮದಲ್ಲಿ ಎರಡನೇ ದಿನವಾದ ಮಂಗಳವಾರ ಮಾತನಾಡಿದ ಅವರು ಪ್ರತಿಯೊಂದು ಮರವೂ ಒಂದು ಔಷದಿ ಗುಣವನ್ನು ಹೊಂದಿದೆ ಆ ಔಷದಿ ನಮ್ಮ ದಿನನಿತ್ಯದ ಬಳಕೆಗೆ ಪೂರಕವಾಗಿದೆ ಆದ್ದರಿಂದ ಸಸಿ ನೆಟ್ಟು ನಿಮ್ಮ ಅರೋಗ್ಯವನ್ನು ನೀವು ಕಾಪಾಡಿಕೊಳ್ಳಲು ಸಲಹೆ ನೀಡಿದ ಅವರು ಶ್ರಾವಣ ಮಾಸ ತಮ್ಮೆಲ್ಲರಿಗೂ ಹರುಷತರಲಿ ಎಂದು ಹಾರೈಸಿದರು.

      ಹಡಪದ ಅಪ್ಪಣ್ಣಾ ಸಮಾಜದ ತಾಲೂಕಾಧ್ಯಕ್ಷ ಬಸವರಾಜ ಹಡಪದ ಪ್ರಾಸ್ತಾವಿಕವಾಗಿ ಮಾತನಾಡಿ ಪರಿಸರ ಹಾಗೂ ಸಸ್ಯ ಶ್ರಾವಣ ಎಂಬುದೇ ವಿಶೇಷ, ಪ್ರಕೃತಿ ನಮಗೆ ನೀಡುವ ಉತ್ತಮಗಾಳಿ, ಬೆಳಕು ಮತ್ತು ನೀರು ಮನುಷ್ಯನ ಜೀವನಕ್ಕೆ ಅತ್ಯಮೂಲ್ಯ ಅವುಗಳನ್ನು ಇಂದು ಕಾಪಾಡಿಕೊಳ್ಳುವುದು ಅವಶ್ಯವಾಗಿದೆ ಆ ನಿಟ್ಟಿನಲ್ಲಿ ಸಂಗನಬಸವ ಶ್ರೀಗಳ ಈ ವಿನೂತನ ಕಾರ್ಯ ಮಾದರಿ ಕಾರ್ಯವಾಗಿದೆ ಇದನ್ನು ಯುವ ಸಮೂಹ ಅಳವಡಿಸಿಕೊಂಡು ಪರಿಸರ ಖಾಳಜಿ ಮೆರೆಯಬೇಕು ಎಂದು ಕಿವಿ ಮಾತು ಹೇಳಿದರು.

      ಇದೇ ಸಂದರ್ಭದಲ್ಲಿ ಕಲಾವಿಧ ಬಸವರಾಜ ಗೊಬ್ಬಿ ಹಾಗೂ ತಂಡ ಸಂಗೀತ ಸೇವೆಯ ಮೂಲಕ ಪರಿಸರ ಜಾಗೃತಿ ಮೂಡಿಸಿದರು.
ಗ್ರಾಮದ ಮುಖಂಡರಾದ ರಾಜಣ್ಣ ಗಂಜೀಗಟ್ಟಿ, ಗದಿಗೆಯ್ಯ ಹಿರೇಮಠ, ಶಂಕ್ರಪ್ಪ ಗಂಜೀಗಟ್ಟಿ, ರಾಮಣ್ಣ ಕಳ್ಳಿಮನಿ, ಗುರಪ್ಪ ಕಳ್ಳಿಮನಿ, ಮಾರುತಿ ವೆಂಕಣ್ಣವರ ಹಡಪದ ಸಮಾಜದ ಮುಖಂಡರಾದ ಮುತ್ತುರಾಜ ಕ್ಷೌರದ, ಶಿವಕುಮಾರ ಮಡ್ಲಿಕರ, ಮಾಲತೇಶ ಹಡಪದ, ವೀರೇಶ ಹಡಪದ, ಶರಣಪ್ಪ ಹಡಪದ, ಕಿರಣ ಹಡಪದ ಸೇರಿದಂತೆ ಗ್ರಾಮದ ಮುಖಂಡರು ಹಾಜರಿದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link