ಮಡಿಕೇರಿ:
ಕಳೆದ ಎರಡು ವಾರಗಳಿಂದ ಸುರಿದ ಭಾರಿ ಮಳೆಯಿಂದಾಗಿ ಕೆಲಸ ಕಳೆದುಕೊಂಡಿರುವ ಕೂಲಿ ಕಾರ್ಮಿಕರು ಬೀದಿಪಾಲಾಗಿದ್ದಾರೆ. ಸತತ ಮಳೆಯಿಂದಾಗಿ ಕೆಲಸಕ್ಕೆ ಹೋಗದೇ ಇರುವುದರಿಂದ ಜೀವನ ನಡೆಸುವುದೇ ದುಸ್ತರವಾಗಿದೆ.
ಕೆಲಸ ಕಳೆದುಕೊಂಡು ಕಂಗಾಲಾಗಿರುವ ಕಾರ್ಮಿಕರು ನಗರಸಭೆ ಮುಂದೆ ಆಹಾರ ಸಾಮಗ್ರಿಗಾಗಿ ಮಳೆ ನಡುವೆ ಗಂಟೆಗಟ್ಟಲೇ ಸಾಲಿನಲ್ಲಿ ನಿಂತಿರುವ ಪ್ರಸಂಗ ನಡೆದಿದೆ. ಮಳೆ ನಡುವೆ ಮಹಿಳೆಯರು ಮತ್ತು ವೃದ್ದರು ಪರದಾಡುತ್ತಿರುವುದು ಎಂತಹವರ ಮನಸ್ಸನ್ನೂ ಕಲಕುವಂತಿದೆ.