ಆಟೋ ಚಾಲಕರಿಗೆ ನಗರ ಪಿಎಸ್‍ಐ ಕಾನೂನು ಅರಿವು ಪಾಠ

ಹಿರಿಯೂರು:

             ನಗರ ಠಾಣೆಗೆ ಹೊಸದಾಗಿ ವರ್ಗಾವಣೆಯಾಗಿ ಬಂದಿರುವ ಪಿಎಸ್‍ವೈ ಮಂಜುನಾಥ್, ಶನಿವಾರ ನಗರದ ಪ್ರಮುಖ ವೃತ್ತಗಳ ಆಟೋ ಚಾಲಕರ ಸಭೆ ನಡೆಸಿ ಕಾನೂನಾತ್ಮಕವಾಗಿ ಆಟೋಚಾಲನೆ ಬಗ್ಗೆ ತಿಳುವಳಿಕೆ ನೀಡಿದರು.

             ಕಡ್ಡಾಯವಾಗಿ ಚಾಲನ ಪರವಾನಿಗೆ ಮತ್ತು ಅಗತ್ಯ ದಾಖಲೆಗಳನ್ನು ಹೊಂದಿರಬೇಕು. ಯೂನಿಪಾರಂ ಕಡ್ಡಾಯವಾಗಿ ಧರಿಸಬೇಕು. ಕುಡಿದು ಆಟೋ ಚಾಲನೆಗೆ ಕಾನೂನು ಕ್ರಮ. ಅನುಮಾನಾಸ್ಪಾದಕ ವೃತ್ತಿಗಳು ಕಂಡು ಬಂದಲ್ಲಿ ಪೋಲೀಸರಿಗೆ ಮಾಹಿತಿ ನೀಡಬೇಕು. ರಸ್ತೆಗಳ ಬದಿಯಲ್ಲಿ ಅಡ್ಡದಿಡ್ಡಿ ವಾಹನಗಳನ್ನು ನಿಲ್ಲಿಸಬಾರದು. ಪ್ರಯಾಣಿಕರ ಜೊತೆಗೆ ಸೌಜನ್ಯದಿಂದ ವರ್ತಿಸಿ. ಪೋಲೀಸ್ ಇಲಾಖೆಯೊಂದಿಗೆ ಅಪಘಾತ ಅಪರಾಧ ಚಟುವಟಿಕೆಗಳ ತಡೆಗೆ ಸಹಕಾರ ನೀಡಬೇಕು.ಅನಗತ್ಯ ದಂಡ ವಿಧಿಸದಂತೆ ಚಾಲನೆ ಮಾಡಿ. ಮಹಿಳೆಯರು, ವೃದ್ಧರು, ವಿದ್ಯಾರ್ಥಿನಿಯರ ಜೊತೆ ಭ್ರಾತೃತ್ವದಿಂದ ನಡೆದುಕೊಳ್ಳಿ. ಆಟೋ ಚಾಲಕರು ಸಮಾಜಕ್ಕೆ ಮಾದರಿಯಾಗಬೇಕು.

Recent Articles

spot_img

Related Stories

Share via
Copy link