ಚಿತ್ರದುರ್ಗ:
ನಗರಸಭೆ ಚುನಾವಣೆಗೆ 23 ನೇ ವಾರ್ಡ್ನಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಐದನೇ ಬಾರಿಗೆ ಸ್ಪರ್ಧಿಸಿರುವ ಮಹಮದ್ ಅಹಮದ್ ಪಾಷ(ಸರ್ದಾರ್) ತಮ್ಮ 66 ನೇ ಹುಟ್ಟುಹಬ್ಬವನ್ನು ಶನಿವಾರ ರಾತ್ರಿ ಪ್ರಸನ್ನ ಚಿತ್ರಮಂದಿರದ ಮುಂಭಾಗ ನೂರಾರು ಅಭಿಮಾನಿಗಳೊಂದಿಗೆ ಕೇಕ್ ಕತ್ತರಿಸುವ ಮೂಲಕ ಅದ್ದೂರಿಯಾಗಿ ಆಚರಿಸಿಕೊಂಡರು.
ಸತತವಾಗಿ ನಾಲ್ಕು ಬಾರಿ ನಗರಸಭೆ ಚುನಾವಣೆಯಲ್ಲಿ ಗೆದ್ದು ಸೋಲಿಲ್ಲದ ಸರದಾರ ಎಂದೆ ಪ್ರಸಿದ್ದಿಯಾಗಿರುವ ಮಹಮದ್ ಅಹಮದ್ ಪಾಷ ಈಗಾಗಲೇ ವಾರ್ಡ್ನಲ್ಲಿ ಬಿರುಸಿನ ಪ್ರಚಾರದ ನಡುವೆಯೂ ಹುಟ್ಟುಹಬ್ಬವನ್ನು ವಿಜೃಂಭಣೆಯಿಂದ ಆಚರಿಸಿಕೊಂಡರು. ಅಭಿಮಾನಿಗಳು ಮೈಸೂರುಪೇಟ ತೊಡಿಸಿ ದೊಡ್ಡ ಹೂಮಾಲೆ ಹಾಕಿ ಬಣ್ಣ ಬಣ್ಣದ ಬಾಣ ಬಿರುಸು ಪಟಾಕಿಗಳನ್ನು ಸಿಡಿಸಿ ಸಂಭ್ರಮಿಸಿದರು.
ಒಂದರ್ಥದಲ್ಲಿ ಹೇಳುವುದಾದರೆ ಪ್ರಸನ್ನ ಚಿತ್ರಮಂದಿರದ ರಸ್ತೆಯೇ ಬಂದ್ಆಗಿತ್ತು ಅಷ್ವೊಂದು ಜನ ನೆರೆದಿದ್ದರು.ನಗರಸಭೆ ಮಾಜಿ ಸದಸ್ಯ ಫಕೃದ್ದಿನ್, ಮುಹೀಬ್, ಚನ್ನಬಸವೇಶ್ವರ ದೇವಸ್ಥಾನ ಕಮಿಟಿಯ ಕುಮಾರ್, ಪರಮೇಶಿ, ತಿಪ್ಪಣ್ಣ, ಬಾಬು, ಬಸಣ್ಣ, ತಿಪ್ಪೇಶಿ, ಸೀನ, ಪ್ರಕಾಶ್, ಜಗದೀಶ್, ಗುಡ್ಲಕ್ ಇಮ್ತಿಯಾಜ್, ಬಾಬ್ಜಾನ್, ಮೊಹಸಿನ್, ಷಫಿ ಇನ್ನು ಮುಂತಾದವರು ಈ ಸಂದರ್ಭದಲ್ಲಿ ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
