ಚಳ್ಳಕೆರೆ
ಈ ತಿಂಗಳ 31ರಂದು ನಡೆಯುವ ನಗರಸಭಾ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದಿಂದ ಒಟ್ಟು 25 ಅಭ್ಯರ್ಥಿಗಳು ವಿವಿಧ ವಾರ್ಡ್ಗಳಲ್ಲಿ ಸ್ಪರ್ಧೆ ನಡೆಸಿದ್ದು, ಚುನಾವಣೆ ಹಿನ್ನೆಲೆಯಲ್ಲಿ ಮತಗಟ್ಟೆ ಯಂತ್ರಗಳಿಗೆ ವಿವಿಧ ಚಿಹ್ನೆಗಳ ಬ್ಯಾಲೇಟನ್ನು ಅಳವಡಿಸಲಿದ್ದು, ಜೆಡಿಎಸ್ ಪಕ್ಷದ ಚಿಹ್ನೆ ಪರಿಪಕ್ವವಾಗಿ ಗೋಚರಿಸುತ್ತಿಲ್ಲವೆಂದು ಜೆಡಿಎಸ್ ಪಕ್ಷದ ತಾಲ್ಲೂಕು ಘಟಕದ ಅಧ್ಯಕ್ಷ ಹಾಗೂ ಅಭ್ಯರ್ಥಿಗಳು ಜಿಲ್ಲಾಧಿಕಾರಿಗಳ ಮುಂದೆ ಆಕ್ಷೇಪ ವ್ಯಕ್ತ ಪಡಿಸಿದರು.
ಚುನಾವಣಾ ಕಾರ್ಯಗಳ ಪರಿಶೀಲನೆಗೆ ಇಲ್ಲಿನ ತಾಲ್ಲೂಕು ಕಚೇರಿಗೆ ಆಗಮಿಸಿದ ಜಿಲ್ಲಾಧಿಕಾರಿಗಳು ಪರಿಶೀಲನೆ ನಂತರ ತುರ್ತಾಗಿ ತೆರಳಬೇಕಿದ್ದು, ಈ ಸಂದರ್ಭದಲ್ಲಿ ಆಗಮಿಸಿದ ಜೆಡಿಎಸ್ ಪಕ್ಷದ ತಾಲ್ಲೂಕು ಅಧ್ಯಕ್ಷರು ಹಾಗೂ ಅಭ್ಯರ್ಥಿಗಳು ಬ್ಯಾಲೇಟ್ನಲ್ಲಿ ಪಕ್ಷದ ಚಿಹ್ನೆ ಸರಿಯಾಗಿ ಮುದ್ರಿತವಾಗಿಲ್ಲವೆಂದು ಆಕ್ಷೇಪ ವ್ಯಕ್ತಪಡಿಸಿ, ನಂತರ ತಹಶೀಲ್ದಾರ್ರವರಿಗೆ ಲಿಖಿತ ಅರ್ಜಿ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಜೆಡಿಎಸ್ ಅಧ್ಯಕ್ಷ ಪಿ.ತಿಪ್ಪೇಸ್ವಾಮಿ, ತಾಲ್ಲೂಕು ಆಡಳಿತ ಎಲೆಕ್ಟ್ರಾನಿಕ್ ಯಂತ್ರಗಳದಲ್ಲಿ ಬ್ಯಾಲೇಟ್ಗಳನ್ನು ಅಳವಡಿಸಿದ್ದು, ಎಲ್ಲಾ ಪಕ್ಷಗಳ ಚಿಹ್ನೆಗಳು ಸ್ವಷ್ಟವಾಗಿ ಕಾಣುತ್ತಿದ್ದು, ಜೆಡಿಎಸ್ ಪಕ್ಷದ ಚಿಹ್ನೆ ಮಾತ್ರ 17ನೇ ವಾರ್ಡ್ನಲ್ಲಿ ಮಾತ್ರ ಸ್ವಷ್ಟವಾಗಿದ್ದು ಉಳಿದ 30 ವಾರ್ಡ್ಗಳಲ್ಲಿ ಜೆಡಿಎಸ್ ಪಕ್ಷದ ಚಿಹ್ನೆ ಸ್ವಷ್ಟವಾಗಿ ಗೋಚರಿಸುತ್ತಿಲ್ಲ. ಚಿಹ್ನೆಯನ್ನು ನೋಡಬೇಕಾದಲ್ಲಿ ಕನ್ನಡಕ ಹಾಕಿಕೊಳ್ಳಬೇಕು. ಇದರಿಂದ ಜೆಡಿಎಸ್ ಪಕ್ಷದಿಂದ ಅಭ್ಯರ್ಥಿಗಳಿಗೆ ಹಾಗೂ ಪಕ್ಷಕ್ಕೆ ತೀರ್ವ ನಿರಾಸೆಯಾಗಿದ್ದು ಸಂಬಂಧಪಟ್ಟ ಅಧಿಕಾರಿಗಳು ಈ ಲೋಪವನ್ನು ಕೂಡಲೇ ಸರಿಪಡಿಸಬೇಕು ಎಂದರು.
ಅಭ್ಯರ್ಥಿಗಳ ಪರವಾಗಿ ಮಾತನಾಡಿದ 9ನೇ ವಾರ್ಡ್ ಅಭ್ಯರ್ಥಿ ವಿ.ವೈ.ಪ್ರಮೋದ್, ಸ್ಥಳೀಯ ಸಂಸ್ಥೆಯ ಚುನಾವಣೆಗಳು ಅತ್ಯಂತ ಸೂಕ್ಷ್ಮತೆಯನ್ನು ಹೊಂದಿರುತ್ತವೆ. ಪ್ರತಿಯೊಬ್ಬ ಅಭ್ಯರ್ಥಿ ಗೆಲುವು ಸಾಧಿಸಿ ಎಲ್ಲಾ ರೀತಿಯ ಪ್ರಯತ್ನಗಳನ್ನು ಮಾಡುತ್ತಾರೆ. ಮತದಾರರ ಮನವಲಿಸಲು ಎಲ್ಲಾ ರೀತಿಯ ತಂತ್ರಗಳನ್ನು ಅಭ್ಯರ್ಥಿ ಅನುಸರಿಸುತ್ತಾರೆ. ಆದರೆ, ಮತಪತ್ರದಲ್ಲಿ ಚಿಹ್ನೆ ಸ್ವಷ್ಟವಾಗಿಗೋಚರಿಸದೇ ಇದ್ದಲ್ಲಿ ಮತದಾರ ಗಲಿಬಿಲಿಗೊಳ್ಳುತ್ತಾನೆ. ಇದು ಎಲ್ಲಾ ಜೆಡಿಎಸ್ ಅಭ್ಯರ್ಥಿಗಳ ಆತಂಕಕ್ಕೆ ಕಾರಣವಾಗಿದೆ ಎಂದರು.
ಈ ಸಂದರ್ಭದಲ್ಲಿ ಅಭ್ಯರ್ಥಿಗಳಾದ ವಿಶುಕುಮಾರ್, ಎಚ್.ಪ್ರಶಾಂತ್ಕುಮಾರ್(ಪಚ್ಚಿ), ಕೆ.ನಾಗರಾಜು, ಶ್ರೀನಿವಾಸ್, ಭದ್ರಿ, ಮಂಜುನಾಥ ಮುಂತಾದವರು ಇದ್ದರು
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
