ರಾಜಕೀಯ ಅವಧಿ ಐದು ವರ್ಷ, ಅಧಿಕಾರಿಗಳ ಅವಧಿ 60 ವರ್ಷ : ಶಾಸಕ ಎಸ್. ರಾಮಪ್ಪ

 ಹರಿಹರ :

      ನಮ್ಮ ರಾಜಕೀಯ ಅವಧಿ ಐದು ವರ್ಷ ಆದರೆ ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆದು, ಉನ್ನತ ಅಧಿಕಾರಿಗಳಾದರೆ ಅವರ ಅವಧಿ 60 ವರ್ಷ, ಇಲ್ಲಿ ಅಧಿಕಾರಿಗಳಾಗಿ ಸಮಾಜ ಸೇವೆ ಮಾಡುವುದೆ ಶ್ರೇಷ್ಠ ಎಂದು ಶಾಸಕ ಎಸ್. ರಾಮಪ್ಪ ಹೇಳಿದರು.

      ನಗರದ ಎಸ್.ಜೆ.ವಿ.ಪಿ ಕಾಲೇಜಿನ ಎಂ.ಬಿ ಗುರುಸಿದ್ಧಸ್ವಾಮಿ ಸಭಾಂಗಣದಲ್ಲಿ ನಡೆದ 2018-19ನೇ ಸಾಲಿನ ಶೈಕ್ಷಣಿಕ ಚಟುವಟಿಕೆಗಳ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದ ಅವರು, ಜನರಿಂದ ಆಯ್ಕೆಯಾಗಿ ಬಂದ ನಮಗೆ ಜನರ ಸೇವೆ ಮಾಡುವ ಅವಧಿ ಇರುವುದು ಕೇವಲ ಐದು ವರ್ಷ ಮಾತ್ರ. ಆದರೆ ವಿಧ್ಯಾರ್ಥಿಗಳು ಕಾಲೇಜಿನಲ್ಲಿ ಉತ್ತಮ ಶಿಕ್ಷಣವನ್ನು ಪಡೆದು, ಉನ್ನತ ಅಧಿಕಾರಿಗಳಾಗಿ 60 ವರ್ಷ ಸಾರ್ವಜನಿಕರ ಸೇವೆ ಮಾಡಬಹುದು ಎಂದು ತಿಳುವಳಿಕೆ ನೀಡಿದರು.

      ಈ ಎಸ್.ಜೆ.ವಿ.ಪಿ ಕಾಲೇಜಿನಲ್ಲಿ ಕಲಿತ ಅನೇಕ ವಿಧ್ಯಾರ್ಥಿಗಳು ಇಂದು ಉನ್ನತ ಉದ್ಯೋಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ನೀವೂ ಸಹ ಕಾಲೇಜಿನಲ್ಲಿ ಶಿಕ್ಷಕರು ಮಾಡುವು ಪಾಠಗಳನ್ನು ಕೇಳಿ, ಪರೀಕ್ಷೆಯಲ್ಲಿ ಹೆಚ್ಚು ಅಂಕಗಳನ್ನು ಪಡೆಯುವುದರ ಮೂಲಕ, ಸಮಾಜದಲ್ಲಿನ ಉನ್ನತ ಅಧಿಕಾರಿಗಳ ಸ್ಥಾನಕ್ಕೆ ಹೋಗಬೇಕು. ಇದರಿಂದ ಕಾಲೇಜು, ತಂದೆ, ತಾಯಿ, ಶಿಕ್ಷಕರಿಗೂ ಒಳ್ಳೆಯ ಹೆಸರು ಬರುತ್ತದೆ ಎಂದರು.

      ವಿಧ್ಯಾರ್ಥಿಗಳಲ್ಲಿ ಸತತ ಪರಿಶ್ರಮ ಇದ್ದರೆಮಾತ್ರ ಪ್ರತಿಫಲ ಸಾಧ್ಯ. ವಿಧ್ಯಾರ್ಥಿಗಳಾದ ನಿಮಗೆ ಜೀವನ ರೂಪಿಸಿಕೊಳ್ಳಲು ಅವಕಾಶ ಇದೆ. ನಾನು ಕಡಿಮೆ ಶಿಕ್ಷಣ ಪಡೆದುಕೊಂಡಿದ್ದೇನೆ, ಅದರಿಂದ ನನಗೆ ಆಗಿರುವ ನೋವು ನನಗೆ ಮಾತ್ರ ಗೊತ್ತು. ಆದರೆ ನಿಮಗೆ ಅವಕಾಶ ಇದೆ. ನೀವು ಉತ್ತಮ ಶಿಕ್ಷಣವನ್ನು ಪಡೆದುಕೊಂಡು ಕಾಲೇಜಿನಿಂದ ಹೊರಹೊಮ್ಮಿ ಎಂದು ವಿಧ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು.

      ಪ್ರಸ್ತುತ ದಿನಮಾನಗಳಲ್ಲಿ ಶಿಕ್ಷಣ ಪಡೆಯಲು ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಮುಂದೆ ಬರುತ್ತಿದ್ದಾರೆ. ಶಿಕ್ಷಣ ಕಲಿಯಲು ಅವರಿಗಿರುವ ಆಸಕ್ತಿಯೂ ಸಹ ಹೆಚ್ಚಾಗಿದೆ. ರಾಜ್ಯದಲ್ಲಿ ಅತಿ ಹೆಚ್ಚು ಅಂಕಗಳನ್ನು ಪಡೆಯುತ್ತಿರುವವರೂ ಸಹ ಮಹಿಳೆಯರು. ಇಂದು ಎಲ್ಲಾ ಇಲಾಖೆಯಲ್ಲೂ ಮಹಿಳಾ ಅಧಿಕಾರಿಗಳು ಕಾರ್ಯನಿರ್ವಹಿಸುತ್ತಿದ್ದಾರೆ. ಅದೇ ರೀತಿ ಎಸ್.ಜೆ.ವಿ.ಪಿ ಕಾಲೇಜಿನ ವಿಧ್ಯಾರ್ಥಿನಿಯರು ನಮ್ಮ ನಗರಕ್ಕೆ ಅಧಿಕಾರಿಗಳಾಗಿ ಬನ್ನಿ ಎಂದು ಹೇಳಿದರು.

      ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಎಸ್.ಜೆ.ವಿ.ಪಿ ಕಾಲೇಜಿನ ಪ್ರಾಚಾರ್ಯರಾದ ಪ್ರೊ.ಹದಡಿ ಯಲ್ಲಪ್ಪ, ಮುಖ್ಯತಿಥಿಗಳಾದ ನಗರಸಭೆ ಮಾಜಿ ಅಧ್ಯಕ್ಷ ಕೃಷ್ಣಸಾ ಭೂತೆ, ರೆಡ್ ಕ್ರಾಸ್ ಜಿಲ್ಲಾ ಘಟಕದ ಮುಖ್ಯಸ್ಥರಾದ ಡಾ.ಎ.ಎಂ ಶಿವಕುಮಾರ್, ವಿಶೇಷ ಆಹ್ವಾನಿತರಾದ ಸಂಸ್ಥೆಯ ಉಪಾಧ್ಯಕ್ಷರಾದ ಡಿ.ಎಂ. ಹಾಲಸ್ವಾಮಿ, ಪ್ರೊ. ರೇಣುಕಾ ಸಂಕನಗೌಡರ್ ಕಾರ್ಯಕ್ರವನ್ನು ಉದ್ದೇಶಿಸಿ ಮಾತನಾಡಿದರು.

      ಕಾರ್ಯಕ್ರಮದಲ್ಲಿ ಮೂರ್ಕಲ್ ಜಯಣ್ಣ, ಪ್ರೊ. ಬಿ.ಆರ್.ಪಾಟೀಲ್, ಸಂಸ್ಥೆಯ ಶೈಕ್ಷಣಿಕ ಸಲಹೆಗಾರರಾದ ಪ್ರೊ. ಸಿ.ವಿ.ಪಾಟೀಲ್, ಪ್ರೊ. ಎ.ಬಿ. ರಾಮಚಂದ್ರಪ್ಪ, ಪ್ರೊ. ವೇದಮೂರ್ತಿ ಆರಾಧ್ಯ, ಡಾ.ಎನ್.ಎಚ್. ಶಿವಲಿಂಗಮ್ಮ, ಪ್ರೊ. ಜಿ.ಎಂ. ಮುರಿಗಿಸ್ವಾಮಿ, ಪ್ರೊ. ರಮೇಶ್ ಪರ್ವತಿ, ಡಾ. ಪರಮೇಶ್ವರನಾಯ್ಕ್, ಪ್ರೊ. ಎ.ಎಸ್.ಹಿತ್ತಲಮನಿ, ಎಂ.ಜೆ. ಮಹೇಶ್, ಅಶ್ವಿನಿ ಆರ್, ಬಿ.ಎನ್. ಸಮರ್ಥರಾಮ್, ಎನ್.ಎಲ್ ಗೋವಿಂದಪ್ಪ ಹಾಗೂ ಕಾಲೇಜಿನ ಸಿಬ್ಬಂದಿಗಳು ಉಪಸ್ಥಿತರಿದ್ದರು.

    ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link