ಚಿತ್ರದುರ್ಗ
ನಾಡಿನ ಭವಿಷ್ಯವನ್ನು ರೂಪಿಸುವಲ್ಲಿ ಕಲೆ ಸಾಹಿತ್ಯ ಮತ್ತು ಸಂಸ್ಕತಿ ಸಹಾಯಕವಾಗಿದೆ ಎಂದು ಸಾಹಿತಿ ಲೋಕೇಶ್ ಅಗಸನಕಟ್ಟೆ ಅಭೀಪ್ರಾಯಪಟ್ಟಿದ್ದಾರೆ.
ಧಾರವಾಡ ಕಲಾಮಂಡಳ ಹಾಗೂ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದವತಿಯಿಂದ ಜಿಲ್ಲಾ ಪತ್ರಿಕಾಭವನದಲ್ಲಿ ಆಯೋಜಿಸಲಾಗಿದ್ದ ಎರಡು ದಿನದ ದೃಶ್ಯಕಲೆಯ ರಸಗ್ರಹಣ ಕಮ್ಮಟ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಇಂದಿನ ದಿನ ಮಾನದಲ್ಲಿ ಕಲೆ ಮತ್ತು ಸಾಹಿತ್ಯಕ್ಕೆ ಸರಿಯಾದ ಬೆಲೆ ಸಿಗುತ್ತಿಲ್ಲ ಬಹುತೇಕ ಜನತೆ ಬ್ಯಾಂಕ್ ಬ್ಯಾಲೆನ್ಸ್ ಹಿಂದೆ ಓಡುತ್ತಿದ್ದಾರೆ, ಇದರಿಂದ ಈ ಕ್ಷೇತ್ರ ನಿರ್ಲಕ್ಷ್ಯಕ್ಕೆ ಒಳಗಾಗಿದೆ, ಇದರ ನಡುವೆಯೂ ಕೆಲವೊಂದು ಜನತೆ ಕಲೆ ಸಾಹಿತ್ಯ ಸಂಸ್ಕತಿ ಎಂದು ಓಡಾಡುತ್ತಿದ್ದಾರೆ ಇದರಿಂದ ಇದು ಇನ್ನು ನಮ್ಮ ನಡುವೆ ಜೀವಂತವಾಗಿದೆ ಎಂದು ತಿಳಿಸಿ, ಕಲೆ ಮತ್ತು ಸಂಸ್ಕತಿ ಇಲ್ಲದ ನಾಡಿನಲ್ಲಿ ಭವಿಷ್ಯವನ್ನು ರೂಪಿಸಲು ಸಾಧ್ಯವಿಲ್ಲ ಹಿಂದೆ ರಾಜರ ಕಾಲದಲ್ಲಿ ಕಲೆ ಸಾಹಿತ್ಯ, ನಾಟಕಗಳಿಗೆ ಪ್ರೋತ್ಸಾಹ ನೀಡುವುದರ ಮೂಲಕ ಅವುಗಳನ್ನು ಜೀವಂತವಾಗಿ ಇಡುವುದರ ಮೂಲಕ ಕಲಾವಿದರನ್ನು ಸಾಹಿತಿಗಳನ್ನು ಪೋಷಣೆ ಮಾಡಲಾಗುತಿತ್ತು ಎಂದರು.
ಕಲಾವಿದ ಮತ್ತು ಸಾಹಿತಿಗಳಾದವರು ಸಮಾಜ ಮತ್ತು ಸಮುದಾಯದ ಬಗ್ಗೆ ಕಾಳಜಿವಹಿಸಿದಾಗ ಮಾತ್ರ ಉತ್ತಮವಾದ ಚಿತ್ರ ಮೂಡಲು ಸಾಧ್ಯವಿದೆ. ಇದರೊಂದಿಗೆ ಸಂಸ್ಕತಿಯನ್ನು ಬೆಳಸುವ ಹೊಣೆಗಾರಿಕೆಯನ್ನು ಸಹಾ ಹೊಂದಿರುತ್ತಾರೆ. ಕಲೆಯಲ್ಲಿ ತೊಡಗಿದವರ ಜೀವನ ದುಸ್ಥಿತಿಯಲ್ಲಿದೆ ಆದರೆ ಒಂದು ಬಾರಿ ಶಾಸಕನಾದವರ ಜೀವನ ಶ್ರೀಮಂತವಾಗಿದೆ ಇದರಿಂದ ಕಲೆಯ ಬಗ್ಗೆ ನಿರಾಸಕ್ತಿ ಮೂಡಿದೆ. ಕೆಲವರು ಮಾತ್ರ ಇದರ ಬಗ್ಗೆ ಆಸಕ್ತಿಯನ್ನು ವಹಿಸುವುದರ ಮೂಲಕ ಅದನ್ನು ಬೆಳಸುವ ಕಾರ್ಯ ಮಾಡುತ್ತಿದ್ದಾರೆ ಎಂದರು.
ಸಾಹಿತಿಯಾದರು ಪದಗಳಿಗೆ ಹಾಗೂ ಕಲಾವಿದರಾದವರು ಕುಂಚದ ಮೂಲಕ ಬಣ್ಣದಿಂದ ಹಾಳೆಯ ಮೇಲೆ ಚೈತ್ಯನ್ವನ್ನು ತುಂಬಿದಾಗ ಮಾತ್ರ ಅದು ಪದ್ಯ ಅಥವಾ ಉತ್ತಮ ಚಿತ್ರವಾಗಲು ಸಹಾಯವಾಗಲಿದೆ ಇಲ್ಲವಾದಲ್ಲಿ ಅದು ಏನು ಇಲ್ಲದ ಜಡ ವಸ್ತುವಾಗಲಿದೆ ಎಂದ ಅಗಸನಕಟ್ಟೆ, ಕಲಾವಿದನ ಚಿತ್ರವನ್ನು ಸರಿಯಾದ ರೀತಿಯಲ್ಲಿ ಆಸ್ವಾದಿಸಿದಾಗ ಮಾತ್ರ ನಿಮ್ಮಿಂದ ಉತ್ತಮವಾದ ಚಿತ್ರ ಮೂಡಲು ಸಾಧ್ಯವಿದೆ ಎರಡು ದಿನದ ಈ ಶಿಬಿರದಲ್ಲಿ ತಿಳಿಸಿದ್ದನ್ನು ಸರಿಯಾದ ರೀತಿಯಲ್ಲಿ ಮನನಮಾಡಿಕೊಂಡು ಅದನ್ನು ಮುಂದಿನ ನಿಮ್ಮ ಭವಿಷ್ಯದಲ್ಲಿ ಅಳವಡಿಕೆ ಮಾಡಿಕೊಳ್ಳುವಂತೆ ಕರೆ ನೀಡಿದರು.
ಕಾರ್ಯಕ್ರಮದ ದಿವ್ಯಸಾನಿಧ್ಯವನ್ನು ವಹಿಸಿದ್ದ ಡಾ.ಶಿವಮೂರ್ತಿ ಮುರುಘಾ ಶರಣರು ಮಾತನಾಡಿ ಯಾವುದೇ ಕಲಾವಿದನ ಚಿತ್ರವನ್ನು ಆಸ್ವಾದಿಸುವ ಗುಣವನ್ನು ಕಲಾ ಪೋಷಕರು ಹೊಂದಿರಬೇಕು ಆದರೆ ಇತ್ತಿಚಿನ ದಿನಮಾನದಲ್ಲಿ ವಿಚಿತ್ರವಾದ ಸ್ವಭಾವ ಕಂಡು ಬಂದಿದೆವ ಅದು ಎಂದರೆ ಏನೆ ಕಂಡರು ಸಹಾ ತಮ್ಮ ಪೋನ್ನಲ್ಲಿ ಪೋಟೋವನ್ನು ತೆಗೆಯುವುದು, ಕಲೆಯನ್ನು ಆಸ್ವಾಧಿಸುವ ಗುಣವನ್ನು ಹೊಂದಿರಬೇಕು ನಂತರ ಪೋಟೋ ಎಂದು ತಾವು ಇತ್ತೀಚೇಗೆ ಭೇಟಿ ನೀಡಿದ ಮೋನಾಲಿಸದ ಚಿತ್ರಣವನ್ನು ವಿವರಿಸಿದರು.
ಚಿತ್ರವನ್ನು ನಿರ್ಮಾಣ ಮಾಡುವ ಕಲಾವಿದನಿಗೆ ಅದರ ಬಗ್ಗೆ ಮಾಹಿತಿ ಇದ್ದಾಗ ಚಿತ್ರ ಮತ್ತಷ್ಟು ಉತ್ತಮವಾಗಿ ಮೂಡಿಬರಲು ಸಾಧ್ಯವಿದೆ. ಇದರಿಂದ ಕಲಾವಿದರಾದವರು ತಾವು ತಯಾರಿಸುವ ಚಿತ್ರದ ಬಗ್ಗೆ ಮಾಹಿತಿಯನ್ನು ಪಡೆಯುವುದ ನಂತರ ಚಿತ್ರವನ್ನು ರಚನೆ ಮಾಡಿದರೆ ಉತ್ತಮವಾದ ಕಲೆ ಮೂಡಿಬರುತ್ತದೆ ಎಂದು ತಿಳಿಸಿ, ಶರಣ ಸಂಸ್ಕತಿ ಉತ್ಸವದಲ್ಲಿ ಚಿತ್ರಕಲಾ ಪ್ರದರ್ಶನವನ್ನು ನಡೆಸುತ್ತಾ ಬಂದಿದೆ. ನಿಮ್ಮ ಚಿತ್ರಗಳನ್ನು ಸಹಾ ಪ್ರದರ್ಶನ ಮಾಡಬಹುದು ಆಗ ಈ ರೀತಿಯಾದ ಕಮ್ಮಟವನ್ನು ಸಹಾ ನಡೆಸುವಂತೆ ಶರಣರು ಸೂಚಿಸಿದರು.ಕಾರ್ಯಕ್ರಮದಲ್ಲಿ ಕಲಾಮಂಡಳಿ ಕಾರ್ಯದರ್ಶಿ ಮಧು ದೇಸಾಯಿ, ಕಾರ್ಯನಿರತ ಪತ್ರಕರ್ತರ ಸಂಘದ ಜಿಲಾಧ್ಯಕ್ಷ ಲಕ್ಷ್ಮಣ್ ಭಾಗವಹಿಸಿದ್ದರು
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
