ಮೈಸೂರು:
ಒಂದು ಕಾಲದಲ್ಲಿ ನಾನೂ ಕೂಡ ಸಿಗರೇಟ್ ಚಟಕ್ಕೆ ಬಲಿಯಾಗಿ 40 ಸಿಗರೇಟ್ ಗಳನ್ನು ಸೇದುತ್ತಿದ್ದೆ, ಆದರೆ ಈಗ ಅದರ ವಾಸನೆ ಕಂಡರೂ ಆಗುವುದಿಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.
ಮೈಸೂರಿನಲ್ಲಿ ಇಂದು ಕ್ಯಾನ್ಸರ್ ತಪಾಸಣಾ ಶಿಭಿರವನ್ನು ಉದ್ಘಾಟಿಸಿ ಮಾತನಾಡಿದ ಅವರು, ದಿನಕ್ಕೆ 40 ಸಿಗರೇಟ್ ಸೇದುತ್ತಿದ್ದ ನಾನು ಅದು ಆರೋಗ್ಯಕ್ಕೆ ಮಾರಕ ಎಂದು ತಿಳಿದ ಮೇಲೆ 1987 ರ ಆ. 17 ರಂದು ಅದರಿಂದ ಮುಕ್ತನಾದೆ ಎಂದು ತಿಳಿಸಿದರು.
ಕ್ಯಾನ್ಸರ್ ಒಂದು ಮಾರಕ ರೋಗವಾಗಿದ್ದು, ಈ ರೋಗ ಕೊನೆಯ ಹಂತ ತಲುಪಿದಾಗ ವಿದೇಶಕ್ಕೆ ಹೋದರೂ ವಾಸಿಯಾಗಲ್ಲ. ರೋಗಿ ಗುಣಮುಖವಾಗುವುದು ತುಂಬಾ ಕಷ್ಟ. ಆದ್ದರಿಂದ ಇಂತಹ ಕೆಟ್ಟ ಚಟಗಳನ್ನು ಆದಷ್ಟು ಬೇಗ ಬಿಟ್ಟರೆ ಒಳ್ಳೆಯದು. ಎಂದು ಕೆಟ್ಟ ಚಟಗಳಿಗೆ ಬಲಿಯಾಗುತ್ತಿರುವ ಯುವ ಸಮೂಹಕ್ಕೆ ಸಲಹೆ ನೀಡಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ