ಸಮಾಜದಲ್ಲಿ ಸಮಾನತೆಗೆ ಆಗ್ರಹಿಸಿ ಸುದ್ಧಿಗೋಷ್ಠಿ

ಹಾವೇರಿ :

       ಸರ್ಕಾರ ಅನೇಕ ಯೋಜನೆಗಳನ್ನು ಅಲೆಮಾರಿ ಸಮುದಾಯಕ್ಕೆ ಜಾರಿಗೆ ತಂದಿದ್ದರೂ ಇನ್ನೂ ರಾಜ್ಯ ಹಾಗೂ ಜಿಲ್ಲೆಯಲ್ಲಿ ಪ್ರತ್ಯೇಕ ಬಡಾವಣೆ, ಮನೆ ಹಾಗೂ ಕೆಲವು ಕುಟುಂಬಗಳಿಗೆ ರೇಷನ್ ಕಾರ್ಡ ಇಲ್ಲದೇ ಕೂಡಿಯುವ ನೀರಿನ ವ್ಯವಸ್ಥೆ, ಶೌಚಾಲಯ ಸೇರಿದಂತೆ ಮೂಲಭೂತ ಸೌಲಭ್ಯ ಇಲ್ಲದಂತಾಗಿದೆ.20ನೇ ಶತಮಾನದಲ್ಲಿ ನಾವು ಪ್ರಾಣಿಗಳಂತೆ ಕನಿಷ್ಟ ಜೀವನ ನಡೆಸುತಿದ್ದೇವೆ ಎಂದು ಜಿಲ್ಲಾ ಅಲೆಮಾರಿ ಸಂಘದ ಜಿಲ್ಲಾಧ್ಯಕ್ಷ ರಾಮಣ್ಣ ಬಾದಗಿ ಹೇಳಿದರು.

    ನಗರದ ಪ್ರವಾಸಿ ಮಂದಿರದಲ್ಲಿ ಸುದ್ಧಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು ಜಿಲ್ಲಾ ಅಲೆಮಾರಿ ಸಂಘವು ಜಿಲ್ಲೆಯ ಎಲ್ಲ ತಾಲೂಕಿನಲ್ಲಿ ಅಲೆಮಾರಿ ಜನಾಂಗದ ಅಭಿವೃದ್ದಿಗೊಸ್ಕರ ಸುಮಾರ ವರ್ಷಗಳಿಂದ ಹೋರಾಟ ನಡೆಸುತ್ತಾ ಬಂದಿದ್ದು, ಅಲೆಮಾರಿ ಜನರಿಗೆ ಅನೇಕ ಸಮಸ್ಯೆಗಳಿಗೆ ಸ್ಪಂದಿಸಿ ಪರಿಹಾರ ಕೊಡಿಸುವ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಸಂಘ ಕ್ರೀಯಾಶೀಲವಾಗಿ ಕೆಲಸ ನಿರ್ವಹಿಸುತ್ತಿದೆ.

    ಜಿಲ್ಲೆಯಲ್ಲಿ ಸುಮಾರು 20760ಜನಸಂಖ್ಯೆ ಇದ್ದು,ನಮ್ಮ ಸಮುದಾಯ ಇರುವ ಜಾಗದಲ್ಲಿ ನಮ್ಮ ಮಕ್ಕಳಿಗೆ ಓದಲಿಕ್ಕೆ ಅಂಗನವಾಡಿ ಸರ್ಕಾರಿ ಶಾಲೆ ಮಕ್ಕಳಿಗೆ ವಿದ್ಯಾರ್ಥಿವೇತನ ಅಂಗವಿಕಲತೆ ಹೊಂದಿದ ಮಕ್ಕಳಿಗೆ ಮಾಷಾಸನ ಯಾವುದೇ ಸೌಲಭ್ಯ ಇಲ್ಲದೆ ನಮ್ಮ ಮಕ್ಕಳು ಬೀದಿಯಲ್ಲಿ ಬಿಸಿಲಿನಲ್ಲಿ ಬಾಲಕಾರ್ಮಿಕರಾಗಿ ಬಿಕ್ಷೇಬೇಡುತಿದ್ದಾರೆ ಸರ್ಕಾರ ಹಿಂದುಳಿದ ಜನಾಂಗಕ್ಕೆ ಅನೇಕ ಯೋಜನೆ ಜಾರಿಗೋಳಿಸುತಿದ್ದು ಅದು ಬರಿ ಉಳ್ಳವರಿಗೆ ಮಾತ್ರ ಸಿಗುತ್ತಿವೆ ಎಂದು ಆಪಾದಿಸಿದರು.

      ಜಿಲ್ಲಾ ಅನುಷ್ಠಾನ ಸಮಿತಿಯಲ್ಲಿ ನಮ್ಮ ಅಲೆಮಾರಿ ಬುಡಕಟ್ಟು ಸಂಘದ 3ಜನ ಪ್ರತಿನಿಧಿಗಳನ್ನು ಸಮಿತಿಗೆ ಆಯ್ಕೆ ಮಾಡಿ ಕಾಟಾಚಾರಕ್ಕೆ ಸಮಿತಿ ರಚನೆ ಮಾಡಿ 2 ವರ್ಷಗತಿಸಿದರೂ ಇದುವರೆಗೂ ಒಂದು ಸಭೆ ಕರೆದಿಲ್ಲ ಇದರ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಸುಮಾರು ಸಾರಿ ಭೇಟಿ ಮಾಡಿ ವಿಚಾರಿಸಿದಾಗ ಮಾಡೋಣ ಎನ್ನುತ್ತಾರೆ.ಆದಷ್ಟು ಬೇಗ ಜಿಲ್ಲಾಧಿಕಾರಿಗಳು ಪ್ರತಿ ತಿಂಗಳು ಸಭೆ ನಡೆಸಿ ಅಲೆಮಾರಿ ಸಮುದಾಯದ ಸಮಸ್ಯೆ ಆಲಿಸಿ ಪರಿಹಾರ ಒದಗಿಸಬೇಕು.

      ಸಂಘದ ವತಿಯಿಂದ ಕಳೆದ ವರ್ಷ ಸ್ವಯಂಉದ್ಯೋಗಕ್ಕೆ ಸುಮಾರು 300ಜನ ಅರ್ಜಿಸಲ್ಲಿಸಿದ್ದರು ಆ ಅರ್ಜಿಗಳು ಇತ್ಯರ್ಥ ಮಾಡದೆ ಅಂಬೇಡ್ಕರ ಅಭಿವೃದ್ದಿ ನಿಗಮದಲ್ಲಿ ಪೆಂಡಿಗ್ ಇಟ್ಟಿದ್ದಾರೆ ಅದನ್ನು ಪರಿಶೀಲಿಸಿ ಅರ್ಹ ಫಲಾನು ಭವಿಗಳಿಗೆ ಸಾಲ ವದಗಿಸಬೇಕು.ಶಾಂತಿನಗರ ಅಂಗನವಾಡಿ ಮಂಜೂರ ಮಾಡಬೇಕು.ಸಮುದಾಯದ ಜನ ಭಿಕ್ಷೆ ಬೇಡುವುದನ್ನು ತಪ್ಪಿಸಿ ಸಮಾಜದಲ್ಲಿ ನಾವು ಎಲ್ಲರಂತೆ ಘನತೆಯಿಂದ ಬದುಕಲು ಅವಕಾಶ ಮಾಡಿಕೊಡಬೇಕು ಇಲ್ಲದಿದ್ದಲ್ಲಿ ಮುಂದಿನ ದಿನದಲ್ಲಿ ನಾವು ಉಗ್ರವಾದ ಹೋರಾಟ ಮಾಡುವುದಾಗಿ ಸಂಘದ ಮೂಲಕ ರಾಮಣ್ಣ ಬಾದಗಿ ಎಚ್ಚರಿಸಿದರು. ನಂತರ ಅಲೆಮಾರಿ ಜನಾಂಗದ ಮುಖಂಡರಾದ ಶ್ರೀಮತಿ ಮುಕ್ತಾಬಾಯಿ ಮಾತನಾಡಿ ಅಲೆಮಾರಿ ಜನರಿಗೆ ಜೀವನ ನಡೆಸಲು ಉದ್ಯೋಗ ಕೊಡಬೇಕು ಮತ್ತು ಸ್ವಯಂ ಉದ್ಯೋಗ ನಡೆಸಲು ಸಾಲ ಸೌಲಭ್ಯದ ವ್ಯವಸ್ಥೆ ಮಾಡಬೇಕು.

    ಅನೇಕ ಜನ ಯುವಕ ಯುವತಿಯರು ಓದಿ ನಿರುದ್ಯೋಗಿಗಳಾಗಿ ಇದ್ದಾರೆ ಅವರಿಗೆ ಉದ್ಯೋಗ ಕೊಡಬೇಕು. ರುದ್ರಭೂಮಿ ವ್ಯವಸ್ಥೆ. ಒಂದು ಗ್ರಾಮದಲ್ಲಿ 20 ಕುಟುಂಬಕ್ಕಿಂತ ಹೆಚ್ಚಿನ ಜನ ಇದ್ದರೆ 2ಎಕರೆ ಜಮೀನು ಒದಗಿಸಿ ಮೂಲಭೂತ ಸೌಲಭ್ಯ ಒದಗಿಸಿ ಕೊಡಬೇಕು ಎಂದು ಅವರು ಒತ್ತಾಯಿಸಿದರು. ಈ ಸಂದರ್ಭದಲ್ಲಿ ಸಾಮಾಜಿಕ ಪರಿವರ್ತನಾ ಜನಾಂದೋಲನ ಜಿಲ್ಲಾ ಸಂಚಾಲಕರಾದ ಹಸೀನಾ ಹೆಡಿಯಾಲ. ಸಮುದಾಯದ ಮುಖಂಡರಾದ ಹನಂತಪ್ಪ ಕ್ಯಾಲಕಂಟಿ.ಶಂಕ್ರಪ್ಪ. ಚಂದ್ರಪ್ಪ ಒಂಟೆತ್ತಿನವರ.ಫಕ್ಕಿರಪ್ಪ ಡಮ್ಮಾಳ.ಆರ್ ಎಫ್ ದಿಸೆ.ರಾಮಕೃಷ್ಣ ಇದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link