ಚಂಡೀಗಢ: 
ಹಣ ಎಂಥಹವರನ್ನು ಬದಲಾಯಿಸುತ್ತದೆ ಎಂಬುಕ್ಕೆ ಸಾಕ್ಷಯೇ ಈ ಪ್ರಕರಣ ಸ್ವಂತ ಅಕ್ಕನೇ ಹಣಕ್ಕಾಗಿ ತನ್ನ ತಮ್ಮನ ಕುತ್ತಿಗೆ ಹಗ್ಗ ಬಿಗಿದು ಕೊಲೆಗೈದಿರುವ ಘಟನೆ ಫರೀದಾಬಾದ್ ನಗರದಲ್ಲಿ ನಡೆದಿದೆ.
ತ್ರಿಲೋಕಿ ಎಂಬಾತನೇ ಅಕ್ಕನಿಂದ ಕೊಲೆಯಾದ ದುರ್ದೈವಿ. ತ್ರಿಲೋಕಿ 2016 ನವೆಂಬರ್ ನಲ್ಲಿ ನೋಟ್ ಬ್ಯಾನ್ ಆಗುವ ಮೊದಲೇ ಅಕ್ಕನಿಗೆ 7.25 ಲಕ್ಷ ರೂ. ಇಟ್ಟುಕೊಳ್ಳುವಂತೆ ನೀಡಿದ್ದನು ಮತ್ತು ತಾನು ಕೇಳಿದಾಗ ಕೊಡುವಂತೆಯೂ ಹೇಳಿದ್ದ ಎನ್ನಲಾಗಿದೆ .
ಹಣ ಹಿಂದಿರುಗಿ ಕೇಳಿದಾಗ ಸಬೂಬು ಹೇಳ ತೋಡಗಿದ ಅಕ್ಕನಿಂದ ರೋಸಿಹೋದ ತಮ್ಮ ಅಕ್ಕನ ಮನಗೆ ಒಂದು ರಾತ್ರಿ ಕುಡಿದು ಬಂದು ಜಗಳವಾಡಿದ್ದಾನೆ ಇದಾದ ನಂತರ ತಮ್ಮನನ್ನು ಅಕ್ಕ ಕೊಂದು ಆತ್ಮಹತ್ಯೆ ಎಂದು ಬಿಂಬಿಸಿ ಅಂತ್ಯ ಸಂಸ್ಕಾರಕ್ಕೆ ಸಕಲ ಸಿದ್ಧತೆಯನ್ನು ಮಾಡಿಕೊಂಡಿದ್ದಳು ಆದರೆ ಅವರ ಸಂಬಂಧಿಯೊಬ್ಬರು ಕೊಟ್ಟ ದೂರಿನ ಅನ್ವಯ ತನಿಖೆ ನಡೆಸಿದಾಗ ವಿಷಯ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








