ಹರಿಹರ
ಕವನಗಳು ಸಮಾಜ ಮುಖಿ ಚಿಂತನೆ ಹೊಂದಿದ್ದರೆ ಕವಿಗಳ ಕಾರ್ಯ ಸಾರ್ಥಕವಾಗುತ್ತದೆ. ಅದೇ ರೀತಿ ಕವಿಗಳು ಸಾಮಾಜಿಕ ಸಮಸ್ಯೆಗಳನ್ನು ಕವನದ ಮೂಲಕ ಅನಾವರಣಗೊಳಿಸಬೇಕು ಎಂದು ಗೊಟಗೋಡಿಯ ಜಾನಪದ ವಿವಿಯ ಉಪನ್ಯಾಸಕಿ ಶ್ರೀಮತಿ ಶಶಿಕಲಾ ಅಕ್ಕಿ ತಿಳಿಸಿದರು.
ನಗರದ ರಚನಾ ಸಭಾಂಗಣದಲ್ಲಿ ಕಸಾಪ, ಪ್ರಗತಿಪರ ಬರಹಗಾರ ಒಕ್ಕೂಟ, ಸಾಹಿತ್ಯ ಸಂಗಮ, ಕ.ಜಾ.ಪ.ಪ, ಚಿಂತನ ಪ್ರತಿಷ್ಠಾನ ಹಾಗೂ ಸ್ಫೂರ್ತಿ ಪ್ರಕಾಶನ ಇವರ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾಮಟ್ಟದ ದಸರಾ ಕವಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಕವಿಗಳು ಸಮಾಜದ ಆಸ್ತಿಯಿದ್ದಂತೆ. ಆದ್ದರಿಂದ ಕವಿಗಳಿಗೆ ಹೊಣೆಗಾರಿಕೆ ಜಾಸ್ತಿ. ಸತ್ಯವನ್ನು ಜನತೆಗೆ ತಿಳಿಸಬೇಕು. ವಿವಿಧ ಸಂಘಟನೆಗಳು ಸೇರಿ ದಸರಾ ಕವಿ ಗೋಷ್ಠಿ ಹಮ್ಮಿಕೊಂಡಿರುವುದು ಸಂತಸ ತಂದಿದೆ ಎಂದರು.
ಇದೇ ರೀತಿ ಎಲ್ಲರೂ ಸೇರಿ ಸಾಹಿತ್ಯದ ಕಾರ್ಯ ಕೈಗೊಂಡರೆ ಯಶಸ್ಸು ಖಂಡಿತಾ ಸಿಗುತ್ತದೆ ಎಂದು ತಿಳಿಸಿ ತಾವು ನಟಿಸಿದ ಚಲನಚಿತ್ರಗಳ ಮತ್ತು ದಾರವಾಹಿಗಳ ಅಭಿನಯದ ಅನುಭವದ ಸನ್ನಿವೇಶಗಳನ್ನು ವಿವರಿಸಿದರು.
ಡಾ.ಐ.ಎ.ಲೋಕಾಪುರ ಮಾತನಾಡಿ, ತುಂಬಾ ದಿನಗಳ ನಂತರ ನಾವೆಲ್ಲಾ ಸೇರಿದ್ದು ನನಗೆ ಉಲ್ಲಾಸ ತಂದಿದೆ ಎಂದು ಹೇಳಿ ಸುರೇಶ ಗೌಡ ಅವರ ಸಾಧನೆ ಯನ್ನು ಅವರು ಸ್ಮರಿಸಿದರು.ಹರಿಹರ ದಲ್ಲಿ ಸಾಹಿತಿಗಳು ಅನೇಕರಿದ್ದಾರೆ. ಹೆಚ್ಚು ಕವನ ಸಂಕಲನಗಳು ಹೊರಬರಲಿ.ಹರಿಹರದ ಕೀರ್ತಿ ರಾಜ್ಯದಾದ್ಯಂತ ಪಸರಿಸಲಿ ಎಂದರು.
ಕಸಾಪ ಅಧ್ಯಕ್ಷ ರೇವಣಸಿದ್ದಪ್ಪ ಅಂಗಡಿ ಮಾತನಾಡಿ, ಹರಿಹರದಲ್ಲಿ ಲಲಿತಮ್ಮ ಅವರ ನೇತೃತ್ವದಲ್ಲಿ ಸಾಹಿತ್ಯ ಚಟುವಟಿಕೆಗಳು ನಡೆಯುತ್ತಿವೆ. ಸಾಹಿತ್ಯ ಕ್ಷೇತ್ರಕ್ಜೆ ಅವರ ಕೊಡುಗೆ ಅಪಾರ. ಸಾಹಿತ್ಯ ಕಾರ್ಯಗಳು ನಿರಂತರ ನಡೆಯಲಿ. ಕಸಾಪ ಸದಾ ಬೆಂಬಲಿಸುತ್ತದೆ ಎಂದರು.
ಸಾಹಿತಿ .ಎಚ್.ಎ.ಭಿಕ್ಷಾವರ್ತಿಮಠ ಮಾತನಾಡಿ, ಕವಿಗಳಿಗೆ ಜವಾಬ್ದಾರಿ ಹೆಚ್ಚು. ಕವಿಗಳು ಜನರಿಗೆ ವಾಸ್ತವ ತಿಳಿಸಬೇಕು. ಕವಿಗಳಿಗೆ, ಸಾಹಿತಿಗಳಿಗೆ ಸತ್ಯವನ್ನು ಹೇಳದಂತೆ ಒತ್ತಡ ಹೇರಲಾಗುತ್ತಿದೆ. ಕವಿಗಳ ಬಾಯಿ ಮುಚ್ಚಿಸುವ ಬೆದರಿಕೆಗೆ ಕವಿಗಳು ಜಗ್ಗಬಾರದು ಎಂದರು. ಕವಿಗಳಿಗೆ ಶಬ್ಧಗಳ ಬಳಕೆ, ಪದಪ್ರಯೋಗದ ಬಗ್ಗೆ ಹೆಚ್ಚಿನ ಅರಿವು ಅಗತ್ಯವಿದೆ. ಆ ಕಾರಣ ಕಾರ್ಯಾಗಾರ ಏರ್ಪಡಿಸಿದರೆ ಅದರ ಖರ್ಚು ವೆಚ್ಚ ಭರಿಸುವ ಭರವಸೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಶ್ರೀಮತಿ ಲಲಿತಮ್ಮ ಡಾ.ಚಂದ್ರಶೇಖರ್ ಮಾತನಾಡಿ, ಇವತ್ತು ಸಾರ್ಥಕ ದಿನ. ಎಷ್ಟೊಂದು ಕವಿಗಳು ಕವನ ವಾಚನ ಮಾಡಿದ್ದಾರೆ. ಅವರಲ್ಲಿ ವಯಸ್ಸಾದವರು ಇದ್ದಾರೆ. ಹರಿಹರ ಸಾಹಿತ್ಯ ಕ್ಷೇತ್ರದಲ್ಲಿ ಮಿಂಚಲಿ. ಇನ್ನೂ ಹೆಚ್ಚು ಸಾಹಿತ್ಯ ಚಟುವಟಿಗಳು ನಿರಂತರ ನಡೆಯುತ್ತಿರಲಿ ಇದೇ ನನ್ನ ಆಶಯ ಎಂದರು.
ಸ್ಫೂರ್ತಿ ಪ್ರಕಾಶನದ ಅಧ್ಯಕ್ಷ ಎಂ.ಬಸವರಾಜ್, ಜಾನಪದ ಕಲಾವಿದ ರಾಮಣ್ಣ, ಕಜಾಪಪ ಅಧ್ಯಕ್ಷ ಬಿ.ಬಿ.ರೇವಣನಾಯ್ಕ, ಮಾಜಿ ಕಸಾಪ ಅಧ್ಯಕ್ಷ ಡಿ.ಎಂ.ಮಂಜುನಾಥಯ್ಯ, ಸಾಹಿತ್ಯ ಸಂಗಮದ ಅಧ್ಯಕ್ಷ ವಿ.ವಿ.ಕೊಟ್ರೇಶಪ್ಪ, ರಿಯಾಜ್ ಅಹಮದ್ , ಎಚ್.ಕೆ.ಕೊಟ್ರಪ್ಪ, ಸವಿತಾ.ಬಿಎನ್, ಸುಬ್ರಹ್ಮಣ್ಯ ನಾಡಿಗೇರ್ ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
