ಸಾಧಕರಿಗೆ ಮುರುಘಾಶ್ರೀ ಪ್ರಶಸ್ತಿ ಪ್ರಧಾನ

ಚಿತ್ರದುರ್ಗ;

     ಮುರುಘಾಮಠದಲ್ಲಿ ನಡೆಯುತ್ತಿರುವ ಶರಣ ಸಂಸ್ಕತಿ ಉತ್ಸವದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಹಲವು ಗಣ್ಯರಿಗೆ ಮುರುಘಾಶ್ರೀ ಪ್ರಶಸ್ತಿ ಪ್ರಧಾನ ಮಾಡಲಾಯಿತು.

       ಕಾರ್ಯಕ್ರಮದಲ್ಲಿ ಮಾತನಾಡಿದ ಡಾ.ಶಿವಮೂರ್ತಿ ಮುರುಘಾ ಶರಣರು ವೈಚಾರಿಕ, ವೈಜ್ಞಾನಿಕ, ಸೈದ್ದಾಂತಿಕ ತಳಹದಿಯ ಮೇಲೆ ಶರಣ ಸಂಸ್ಕತಿ ಉತ್ಸವ ನಡೆದು ಬಂದಿದೆ. ನೆಲ ಮತ್ತು ತಳಮಟ್ಟದ ವಿವಿಧ ಜಾತಿಗೆ ದೀಕ್ಷೆ ನೀಡಿದ ಏಕೈಕ ಮಠ ಮುರುಘಾಮಠ. ಶೂನ್ಯಪೀಠದ ಹೆಸರಿಗೆ ತಕ್ಕಂತೆ ಬಸವಾದಿ ಶರಣರ ವಚನಗಳನ್ನು ಯತಾವತ್ತಾಗಿ ಕಾರ್ಯರೂಪಕ್ಕೆ ತರುತ್ತಿದೆ. ಜಗದ್ಗುರು ಪದವಿ ತೊರೆದು ಶರಣ ಪದವಿಯನ್ನು ಅಲಂಕರಿಸಿದ ಕೀರ್ತಿ ಮಠಕ್ಕೆ ಸಲ್ಲುತ್ತದೆ. ಬಸವತತ್ತ್ವ ಬೋದಿಸುವ ಮಠಗಳಲ್ಲಿ ಇಂದಿಗೂ ಸಹ ರುದ್ರಾಭಿಷೇಕ, ವಿಗ್ರಹ ಆರಾಧನೆ ನಡೆಯುತ್ತಿದೆ. ವಿಗ್ರಹವಿರುವ ಸ್ಥಳದಲ್ಲಿ ವಚನಗಳ ಸಂಗ್ರಹಗಳನ್ನು ಇರಿಸಿ ಗೌರವಿಸಿದ ಕೀರ್ತಿ ಮಠಕ್ಕೆ ಸಲ್ಲುತ್ತದೆ. ಮುರುಘಾಶ್ರೀ ಪ್ರಶಸ್ತಿ ಸಾಧಕರಿಗೊಂದು ಪ್ರೇರಣೆಯಾಗಲಿದೆ ಎಂದು ನುಡಿದರು.

      ಕಾರ್ಯಕ್ರಮದ ಸಮ್ಮುಖ ವಹಿಸಿ ಮಾತನಾಡಿದ ಯಮನಕರಡಿ ಹುಣಸಿಕೊಳ್ಳಮಠದ ಶ್ರೀ ರಾಚೋಟೇಶ್ವರ ಸ್ವಾಮಿಗಳು, ಬದುಕಿನ ವಿವಿಧ ಘಟ್ಟಗಳಲ್ಲಾಗುವ ದುಖಃ ದುಮ್ಮಾನಗಳನ್ನು ದೂರ ಮಾಡಲು ಬಸವಾದಿ ಶರಣರ ವಚನಗಳು ನೆರವಾಗುತ್ತದೆ. ಮಾತನಾಡಿದ ಮೇಲೆ ಯೋಚನೆ ಮಾಡಬಾರದು. ಮಾತನಾಡುವ ಮುಂಚೆ ಮಾಡುವ ವ್ಯಕ್ತಿ ಸಮಾಜದಲ್ಲಿ ಉತ್ತಮ ವ್ಯಕ್ತಿಯಾಗುತ್ತಾನೆ ಎಂದು ಹೇಳಿದರು.
ಮುರುಘಾಶ್ರೀ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ದಿ ಅಡ್ವೆಂಚರರ್ಸ್ ಸಾಹಸ ಶಿಕ್ಷಣ ಶಾಲೆಯ ಶ್ರೀಮತಿ ನೊಮಿಟೋ ಕಾಮದಾರ್, ನಮ್ಮ ಭೂಮಿ ದೇವಾಲಯವಿದ್ದಂತೆ. ಅಲ್ಲಿ ಅನೇಕ ಆಚರಣೆಗಳನ್ನು ಅನುಷ್ಟಾನಗೊಳಿಸಲಾಗುತ್ತದೆ. ಕಾಡು ನಮ್ಮ ಜೀವನದ ಅವಿಭಾಜ್ಯ ಅಂಗ ಅದನ್ನು ಉಳಿಸಲು ಎಲ್ಲರ ಪ್ರಯತ್ನ ಅತ್ಯಗತ್ಯವೆಂದು ನುಡಿದರು.

       ಮುರುಘಾಶ್ರೀ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಹಿರಿಯ ಚಲನಚಿತ್ರನಟ ಶ್ರೀ ಶ್ರೀನಾಥ್ ಮಾತನಾಡಿ, ನಾನು ಸಾಧಿಸಿರುವುದು ಕಡಿಮೆ, ಸಾಧಿಸುವುದು ಇನ್ನು ಇದೆ. ಚಿತ್ರರಂಗದ ಬದುಕು ಬೇರೆಯಿದ್ದರು ಸಮಾಜಮುಖಿ ವಿಚಾರಗಳನ್ನು ಜನರಿಗೆ ತಲುಪಿಸಬೇಕು. ಸಾಧಿಸಲು ನಿನಗೆ ಇನ್ನು ವಯಸ್ಸಿದೆ ಎಂದು ಪ್ರೇರಣೆ ನೀಡಿದ ಮುರುಘಾಶರಣನ್ನು ಸ್ಮರಿಸಿದರು.

         ಸಾಹಿತಿ ಡಾ.ಮೂಡ್ನಾ ಕೂಡುಚಿನ್ನಸ್ವಾಮಿ, ಡಾ ಎಸ್.ಎಲ್.ಎನ್.ಸ್ವಾಮಿ, ಲಿಂ. ಶ್ರೀ ಸಿದ್ದು ನ್ಯಾಮಗೌಡ(ಮರಣೋತ್ತರ) ಇವರ ಪುತ್ರಿ ಸುಮಿತ್ರ ನ್ಯಾಮಗೌಡ ಇವರುಗಳಿಗೆ ಶರಣ ಸಂಸ್ಕತಿ ಉತ್ಸವ 2018ರ ಮುರುಘಾಶ್ರೀ ಪ್ರಶಸ್ತಿಯನ್ನು ಪ್ರಧಾನ ಮಾಡಲಾಯಿತು. ಪ್ರಶಸ್ತಿಯು 25 ಸಾವಿರ ರೂಪಾಯಿಗಳ ನಗದು ಹಾಗು ಪ್ರಶಸ್ತಿ ಫಲಕಗಳನ್ನೊಳಗೊಂಡಿದೆ. ಇದೇ ಸಂಧರ್ಭದಲಿ 2019ರ ಶರಣ ಸಂಸ್ಕøತಿ ದಿನಚರಿಯನ್ನು ಡಾ.ಶಿವಮೂರ್ತಿ ಮುರುಘಾಶರಣರು ಬಿಡುಗಡೆ ಮಾಡಿದರು.

         ಕಾರ್ಯಕ್ರಮದಲ್ಲಿ ಶರಣ ಸಂಸ್ಕತಿ ಉತ್ಸವ 2018ರ ಗೌರಾವಧ್ಯಕ್ಷರಾದ ಮಧುರೆ ಹೊಸದುರ್ಗದ ಶ್ರೀಭಗೀರಥ ಪೀಠದ ಜ.ಶ್ರೀ.ಪುರುಷೋತ್ತಮನಂದಪುರಿ ಮಹಾಸ್ವಾಮಿಗಳು, ಅರಕಲಗೂಡುಶ್ರೀ ಚಿಲುಮೆಮಠದ ಶ್ರೀ ಮ.ನಿ.ಪ್ರ. ಜಯದೇವ ಸ್ವಾಮಿಗಳು, ನೆಲಮಂಗಲ ಪವಾಡ ಬಸವಣ್ಣದೇವರಮಠದ ಶ್ರೀ ಮ.ನಿ.ಪ್ರ.ಸಿದ್ಧಲಿಂಗ ಸ್ವಾಮಿಗಳು, ಹರಚರಗುರುಮೂರ್ತಿಗಳು, ಮಾಜಿ ಸಚಿವ ಹೆಚ್.ಆಂಜನೇಯ, ಉತ್ಸವದ ಕಾರ್ಯಾಧ್ಯಕ್ಷ ಪಟೇಲ್ ಶಿವಕುಮಾರ್, ಕಾರ್ಯದರ್ಶಿ ಡಿ.ಎಸ್.ಮಲ್ಲಿಕಾರ್ಜುನ್, ಉಪಸ್ಥಿತರಿದ್ದರು.
ಬಾಗಲಕೋಟೆಯ ಶ್ರೀ ಅಶೋಕ ಬರಗುಂಡಿ ಮತ್ತು ತಂಡದ ಸ್ಫೂರ್ತಿಗೀತೆ, ಎಸ್.ಜೆ.ಎಂ.ದಂತ ಮಹಾವಿದ್ಯಾಲಯ, ಎಸ್.ಜೆ.ಎಂ. ರೆಸಿಡೆನ್ಸಿಯಲ್ ಸ್ಕೂಲ್, ಎಸ್.ಜೆ.ಎಂ. ಫಾರ್ಮಸಿ, ಎಸ್.ಜೆ.ಎಂ.ಪಾಲಿಟೆಕ್ನಿಕ್, ಬಸವೇಶ್ವರ ವೈದ್ಯಕೀಯಮಹಾವಿದ್ಯಾಲಯದ ವಿದ್ಯಾರ್ಥಿಗಳು ಸಾಂಸ್ಕøತಿಕ ಕಾರ್ಯಕ್ರಮ ನಡೆಸಿಕೊಟ್ಟರು.

         ಕಾರ್ಯಕ್ರಮದಲ್ಲಿ ಜಮುರಾ ಕಲಾವಿದರು ಪ್ರಾರ್ಥಿಸಿ, ಡಾ.ಜಿ.ಎನ್.ಮಲ್ಲಿಕಾರ್ಜುನಪ್ಪ ಸ್ವಾಗತಿಸಿ, ಅನುಪಮ ಲಿಂಗಮೂರ್ತಿ ನಿರೂಪಿಸಿ ವಂದಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link