ಕನಕದಾಸರ ಮುಂಡಿಗೆಗಳಿಗೆ ವಿಶಿಷ್ಟ ಸ್ಥಾನವಿದೆ – ಮುರಳೀಕೃಷ್ಣಪ್ಪ

ತುಮಕೂರು:

       ದಾಸ ಸಾಹಿತ್ಯದಲ್ಲಿ ಕನಕ ದಾಸರು, ಪುರಂದರ ದಾಸರು ಪ್ರಸನ್ನವೆಂಕಟ ದಾಸರು ಮತ್ತು ಭಾಗಣ್ಣ ದಾಸರು ತಮ್ಮ ಕೃತಿಗಳಲ್ಲಿ ಅನುಷಂಗಿಕವಾಗಿ ಮುಂಡಿಗೆಗಳನ್ನು ತಂದಿದ್ದಾರೆ ಇವರುಗಳಲ್ಲಿ ಕನಕದಾಸರ ಮುಂಡಿಗೆಗಳಿಗೆ ವಿಶಿಷ್ಟವಾದ ಮತ್ತು ವಿಶೇಷವಾದ ಸ್ಥಾನವಿದೆ ಎಂದು ಪ್ರಾಚೀನ ಕಾವ್ಯಗಳ ಪ್ರವಚನಕಾರ ಮತ್ತು ಜ್ಞಾನಬುತ್ತಿ ಸತ್ಸಂಗದ ಗೌರವಾಧ್ಯಕ್ಷ ಟಿ.ಮುರಳಿಕೃಷ್ಣಪ್ಪ ಹೇಳಿದ್ದಾರೆ.

     ಅವರು ಕೃಷ್ಣಾನಗರದಲ್ಲಿರುವ ವಿದ್ಯಾವಾಹಿನಿ ಕಾಲೇಜಿನಲ್ಲಿ ನಡೆದ ಜ್ಞಾನಬುತ್ತಿ ಸತ್ಸಂಗ ಕಾರ್ಯಕ್ರಮದಲ್ಲಿ ಕನಕದಾಸರ ಮುಂಡಿಗೆಗಳ ವಿಷಯ ಕುರಿತು ಮಾತನಾಡಿದರು. ಮುಂಡಿಗೆಗಳು ಅಂದರೆ ಒಂದು ಮರದ ದಿಮ್ಮಿ. ಮರದ ಕೊರಡು, ಎತ್ತುವುದಕ್ಕೆ ಸಾಧ್ಯವಾಗದ ಮರದ ತುಂಡನ್ನು ಸಹ ಎತ್ತಬಹುದು. ಶಕ್ತಿ ಸಾಮಥ್ರ್ಯ ಇರುವವರು ಹೇಗೆ ಸುಲಭವಾಗಿ ಎತ್ತುವುದಕ್ಕೆ ಸಾಧ್ಯವೋ ಹಾಗೆಯೇ ಜ್ಞಾನ ಸಾಮಥ್ರ್ಯ ಇರುವವರು ಈ ಮುಂಡಿಗೆಗಳನ್ನು ಎತ್ತಬಹುದು ಎಂದು ತಿಳಿಸಿದರು.

     ಹನ್ನೆರಡನೇ ಶತಮಾನದಲ್ಲಿನ ವಚನ ಸಹಿತ್ಯದಲ್ಲಿನ ಶರಣ-ಶರಣೆಯರ ನಂತರ ಬಂದ ದಾಸ ಶ್ರೇಷ್ಟರು ಸೊಗಸಾದ ಪದ್ಯಗಳನ್ನು ಬರೆದಿದ್ದಾರೆ. ಆದರೆ ಕನ್ನಡ ಸಾಹಿತ್ಯದಲ್ಲಿ ವಿನೂತನವಾದ ಹೊಸತನದ ಪ್ರಯೋಗ ಒಂದೇ ತರಹದ ಕಾವ್ಯ ರಚನೆಯನ್ನು ರಚಿಸಿದರೆ ಓದುಗರಿಗೆ ನೀರಸವಾಗಬಹುದು ಎಂಬ ಕಾರಣದಿಂದ ಗೂಡಾರ್ಥದಲ್ಲಿ ಈ ರೀತಿಯ ಮುಂಡಿಗೆಗಳು ರಚಿತವಾಗಿದೆ ಎಂದರು.

    ಅಲ್ಲಮಪ್ರಭು ವಚನಗಳನ್ನು ಬೆಡಗಿನ ವಚನಗಳೆಂದು ಕರೆಯಬಹುದು. ಅದೇ ರೀತಿಯಲ್ಕಿ ಬೆಡಗಿಗೆ ಪರ್ಯಾಯವಾಗಿ ಕನಕದಾಸರು ಮುಂಡಿಗೆ ರೂಪವನ್ನು ಬಳಸಿದ್ದಾರೆ. ಮುಂಡಿಗೆ ಶಬ್ದ ಸಂಸ್ಕøತದ ಮುಂಡಕದ ತದ್ಬವ ರೂಪ. ಬುದ್ಧಿ ಪ್ರಧಾನವಾದ ರಚನೆಗಳನ್ನು ಮುಂಡಿಗೆ ಎಂದು ಕರೆಯಬಹದುದೆಂದು ಹೇಳಿದರು.

    ವೇದಾಂತ ಮಾರ್ಗದಲ್ಲೂ ಕೂಡ ಅನೇಕ ಮುಂಡಿಗೆಗಳನ್ನು ಕನಕದಾಸರು ಬರೆದಿದ್ದಾರೆ. ಈ ಮುಂಡಿಗೆಗಳನ್ನು ಅರ್ಥ ಮಾಡಿಕೊಳ್ಳುವ ರೀತಿ ವ್ಯಕ್ತಿಯಿಂದ ವ್ಯಕ್ತಿಗೆ ವ್ಯತ್ಯಯವಾಗಿರುತ್ತದೆ. ಶ್ರೀಕೃಷ್ಣನ ಬಗ್ಗೆ ಪದ್ಯಗಳನ್ನು ರಚಿಸಿದ್ದಾರೆ. ಅವರು ಶುದ್ದಾನು ಶುದ್ದವಾಗಿ ಬಳಸಿದ ಪದಗಳು ವಿವರಾರ್ಥಗಳು ಜ್ಞಾನಾರ್ಥಗಳು, ಜ್ಞಾನಗಳನ್ನು ತಿಳಿದುಕೊಳ್ಳುತ್ತಾ ಹೋದಾಗ ಅರ್ಥವಾಗುತ್ತದೆ ಎಂದು ಹೇಳಿದರು.

    ಅಂಧಕ ನಾನು ಜನ, ಏನಿದೆತ್ತಣ ಜೀವ ಬಯಕೆ, ಏನ ಕಂಡು ಮರುಳಾದ,, ಪಾಠ ಶಾಸನಕ್ಕೊಲಿದು ಬಲಿಚಕ್ರವರ್ತಿ, ಹೀಗೆ ಮುಂಡಿಗೆಗಳನ್ನು ಕನಕದಾಸರು ವಿದ್ವತ್ ಪ್ರತಿಭೆಗೋಸ್ಕರ ಬರೆದಂತಹವುಗಳಲ್ಲ. ಅನೇಕ ಪ್ರಾಚೀನ ಕವೀಶ್ವರರು ಬರೆದಿದ್ದಾರೆ. ಅವರಲ್ಲಿ ನಾನು ಸಹ ಒಂದೆರಡು ಹೆಜ್ಜೆ ಮುಂದೆ ಇಟ್ಟಿದ್ದೇನೆ. ಅವುಗಳೆಲ್ಲ ಆ ಕೇಶವನಿಗೆ ಅರ್ಪಿತ ಎಂದು ತಿಳಿಸಿದರು.

    ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜ್ಞಾನಬುತ್ತಿ ಸತ್ಸಂಗದ ಅಧ್ಯಕ್ಷೆ ಎಂ.ಸಿ.ಲಲಿತ ಮಾತನಾಡಿ ಕನಕದಾಸರ ಮುಂಡಿಗೆಗಳು ಅಮೂರ್ತವಾದ ಸಂಗತಿಗಳನ್ನು ಮೂರ್ತಗೊಳಿಸುತ್ತೇವೆ. ಎಲ್ಲಕ್ಕಿಂತ ಮುಖ್ಯವಾಗಿ ಕನಕದಾಸರ ಮುಂಡಿಗೆಗಳಲ್ಲಿ ಭಾವ ತೀವ್ರತೆ ಗಿಂತ ಬುದ್ದ ತೀವ್ರತೆಯೆ ಪ್ರಧಾನವಾದ ಅಂಶವಾಗಿ ಕಂಡು ಬರುತ್ತದೆ. ಇದನ್ನೆಲ್ಲಾ ಗಮನದಲ್ಲಿಟ್ಟುಕೊಂಡು ಮುರಳಿಕೃಷ್ಣಪ್ಪ ಮಾತನಾಡಿದ್ದಾರೆ ಎಂದರು.

    ಇದೇ ಸಂದರ್ಭದಲ್ಲಿ ವಿಶೇಷ ಉಪನ್ಯಾಸ ನೀಡಿ ಟಿ.ಮುರಳೀಕೃಷ್ಣಪ್ಪ ಅವರನ್ನು ಜ್ಞಾನಬುತ್ತಿ ಸತ್ಸಂಗದ ಸಂಸ್ಥಾಪಕ ಪಿ.ಶಾಂತಿಲಾಲ್ ಸನ್ಮಾನಿಸಿದರು. ಸಿರಿವರ ಶಿವರಾಮಯ್ಯ, ಇಂದಿರಮ್ಮ ಪ್ರಾರ್ಥಿಸಿದರು. ಗೌರವ ಕಾರ್ಯದರ್ಶಿ ಮಿಮಿಕ್ರಿ ಈಶ್ವರಯ್ಯ ಸ್ವಾಗತಿಸಿದರು. ಮಾಜಿ ಕಾರ್ಯದರ್ಶಿ ಟಿ.ಎಸ್.ಸಿದ್ದಗಂಗಮ್ಮ ನಿರೂಪಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link