ದಾವಣಗೆರೆ:
ಪಾಲಿಕೆ ಮತ್ತೆ ವರಹಾಗಳ ವಿರುದ್ಧ ಕಾರ್ಯಾಚರಣೆಗೆ ಇಳಿದಿದ್ದು, ಸೋಮವಾರ ಸುಮಾರು 350ಕ್ಕೂ ಹೆಚ್ಚು ಹಂದಿಗಳನ್ನು ಹಿಡಿದು ನಗರದಿಂದ ಹೊರ ಭಾಗಕ್ಕೆ ಸ್ಥಳಾಂತರಿಸಿದೆ.
ಪೊಲೀಸರ ಸರ್ಪಗಾವಲಿನಲ್ಲಿ ಕಾರ್ಯಾಚರಣೆಗೆ ಇಳಿದ, ಹಂದಿ ಹಿಡಿಯಲು ತಮಿಳು ನಾಡಿನಿಂದ ನಗರಕ್ಕೆ ಆಗಮಿಸಿರುವ 25 ಜನರ ತಂಡ ಪಾಲಿಕೆ ವ್ಯಾಪ್ತಿಯ 4ನೇ ವಾರ್ಡ್ನ ಮಂಡಕ್ಕಿ ಭಟ್ಟಿ, ಶಿವನಗರ, ಭಾಷಾ ನಗರ, ಆಜಾದ ನಗರ, ಅಖ್ತರ್ ರಜಾ ವೃತ್ತ, ರಜಾಕ್ವುಲ್ಲಾ ಮುಸ್ತಾಫ ನಗರಗಳಲ್ಲಿ ಸುಮಾರು 350ಕ್ಕೂ ಹೆಚ್ಚು ಹಂದಿಗಳನ್ನು ಹಿಡಿದು, 2 ಲಾರಿ ಲೋಡ್ಗಳ ಮೂಲಕ ನಗರದಿಂದ ಹೊರಗಡೆ ಕಳುಹಿಸಿದೆ.
ಕಾರ್ಯಾಚರಣೆಯ ಬಗ್ಗೆ ಪ್ರಜಾಪ್ರಗತಿಯೊಂದಿಗೆ ಮಾತನಾಡಿದ ಪಾಲಿಕೆಯ ಆರೋಗ್ಯ ಶಾಖೆಯ ಅಧಿಕಾರಿ ಡಾ.ಚಂದ್ರಶೇಖರ್ ಸುಂಖದ್, ವರಹ ಆಪರೇಷನ್ಗೆ ಹಂದಿ ಹಿಡಿಯಲಿಕ್ಕಾಗಿ ತಮಿಳುನಾಡಿನಿಂದ 25 ಜನರು ಬಂದಿದ್ದು, ಸೋಮವಾರ ಒಂದೇ ದಿನದಲ್ಲಿ ಅಂದಾಜು 350 ಕ್ಕೂ ಹೆಚ್ಚು ಹಂದಿಗಳನ್ನು ಹಿಡಿದು ಸ್ಥಳಾಂತರಿಸಲಾಗಿದೆ. ಮಂಗಳವಾರು ಕಾರ್ಯಾಚರಣೆ ಮುಂದುವರೆಯಲಿದೆ ಎಂದು ಹೇಳಿದರು.
ಕಾರ್ಯಾಚರಣೆಗೆ ದಾವಣಗೆರೆಯ ಆಜಾದ್ ನಗರ ಪೊಲೀಸ್ ಠಾಣೆಯ ಅರಣುಕುಮಾರ್ ನೇತೃತ್ವದಲ್ಲಿ 40ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಗಳು ಕಾರ್ಯಾಚರಣೆಗೆ ಭದ್ರತೆ ನೀಡಿದ್ದರು.ಕಾರ್ಯಾಚರಣೆಯಲ್ಲಿ ಪಾಲಿಕೆಯ ಸಂತೋಷ್ಕುಮಾರ್, ಮದನ್ಕುಮಾರ್, ಅಲ್ತ್ಮಷ್, ಜಯಪ್ರಕಾಶ್ ಮತ್ತಿತರರು ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
