ನ.25 ರವರೆಗೆ ನಾಲೆಯಲ್ಲಿ ನೀರು ಹರಿಸುವಂತೆ ರೈತ ಸಂಘದ ಪ್ರತಿಭಟನೆ

ಮಲೇಬೆನ್ನುರು :

       ದಾವಣಗೆರೆ ಜಿಲ್ಲೆಯ ಭದ್ರ ಅಚ್ಚುಕಟ್ಟಿನ ಭತ್ತದ ಬೆಳೆ ದುಂಡು ಹಾಗೂ ಕಾಳು ಕಟ್ಟುವ ಹಂತದಲ್ಲಿದ್ದು, ನ.25 ರವರೆಗೆ ನಾಲೆಯಲ್ಲಿ ನೀರು ಹರಿಸುವಂತೆ ರೈತ ಸಂಘದ ಕಾರ್ಯಕರ್ತರು ಸೋಮವಾರ ಮಲೇಬೆನ್ನೂರಿನ ನೀರಾವರಿ ನಿಗಮ ಕಚೇರಿ ಅವರಣದಲ್ಲಿ ಪ್ರತಿಭಟನೆ ನಡೆಸಿದರು.

         ಭದ್ರ ಕೊನೆ ಭಾಗದ ಅಚ್ಚುಕಟ್ಟಿನಲ್ಲಿ ಕಳೆದೆ ನಾಲ್ಕು ಬೆಳೆ ನೀರಿಲ್ಲದೆ, ಭತ್ತ ಬೆಲೆಯಲಾಗದೆ ಕಂಗಾಲಾಗಿದ್ದೆವೆ. ಈ ಸಲ ದೇವರ ಕೃಪೆಯಿಂದ ಭದ್ರ ಜಲಾಶಯ ಭರ್ತಿಯಾಗಿದ್ದು ಈ ಬಾರಿಯಾದರು ಬೆಲೆ ಸಂಪೂರ್ಣ ಕೈಗೆ ಬರುವವರೆಗೆ ನೀರು ಕೊಡಬೇಕು. ಈ ಹಂತದಲ್ಲಿ ನಾಲೆಯಲ್ಲಿ ನೀರು ಬಂದ್ ಮಾಡಿದರೆ,ಭತ್ತದ ಬೆಳೆ ಒಣಗಿ ನಾಶವಾಗುವ ಸಾದ್ಯತೆಯಿದೆ. ಯಾವುದೇ ಕಾರಣಕ್ಕೂ ಈ ಹಂತದಲ್ಲಿ ನೀರು ಬಂದ್ ಮಾಡದೆ ನ.25ರವರೆಗೆ ನಿರು ಮುಂದುವರೆಸಬೆಕೆಂದು ರೈತರು ಆಗ್ರಹಿಸಿ ಪ್ರಭಾರಿ ಇಇ ಗವೀಸಿದ್ದೇಶ್ವರ್ ರವರಿಗೆ ಮನವಿ ಸಲ್ಲಿಸಿದರು.

        ಪ್ರತಿಭಟನೆಯಲ್ಲಿ ಜಿ.ಪ್ರಭುಗೌಡ, ಭಾನುವಳ್ಳಿ ಕೊಟ್ರೇಶ್,ನಂದ್ಯಪ್ಪ,ನಾಗರಾಜ್,ಹಾಲಿವಾಣದ ಅಂಜಿನಪ್ಪ . ಎಂಬಿ.ಪಾಟೀಲ್ ,ದೊಗ್ಗಳ್ಳಿ ಮಹೇಶ್ವರಪ್ಪ,ಶಂಭುಲಿಂಗಪ್ಪ,ಮಹೇಮದ್ರಪ್ಪ,ಕುಂಬಳೂರು ಅಂಜಿನಪ್ಪ,ರುದ್ರಗೌಡ,ಮಾಲತೇಶ್,ಸಿದ್ದನಗೌಡ,ನಾಗರಾಜಪ್ಪ ಇತರರು ಪಾಲ್ಗೋಂಡಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap