ಹರಪನಹಳ್ಳಿ
ಬರ ಪರಿಶೀಲನೆಗೆ ಸಲಿದ್ದು, ತಾಲೂಕಿನ ವಿವಿಧೆಡೆ ಸಹ ಪರಿಶೀಲನೆ ಕೈಗೊಳ್ಳಲಿದೆ ಎಂದು ತಹಶೀಲ್ದಾರ ಡಾ.ಎನ್ .ಎನ್ .ಮಧು ಹೇಳಿದ್ದಾರೆ.
ಅವರು ಪಟ್ಟಣದ ತಮ್ಮ ಕಚೇರಿಯಲ್ಲಿ ಸುದ್ದಿಗಾರರಿಗೆ ಮಾಹಿತಿ ನೀಡಿದ್ದು, ಭಾರತ ಸರ್ಕಾರದ ಜಂಟಿ ಕಾರ್ಯದರ್ಶಿ ಅಮಿತಾಬ್ ಗೌತಮ್ ಅವರ ನೇತೃತ್ತದ ತಂಡ ಆಗಮಿಸಲಿದೆ ಎಂದು ಅವರು ತಿಳಿಸಿದರು.
ಈಗಾಗಲೇ ತಾಲೂಕಿನಲ್ಲಿ ಬೆಳೆ ಹಾನಿ ಕುರಿತು ತೋಟಗಾರಿಕೆ, ಕಂದಾಯ, ಕೃಷಿ ಇಲಾಖೆಗಳ ಜಂಟಿ ಸರ್ವೆ ಮಾಡಿ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯ ಸರ್ಕಾರಕ್ಕೆ ಕಳಿಸಿ ಕೊಟ್ಟಿದ್ದೇವೆ ಎಂದರು.
ಕುಡಿಯುವ ನೀರಿನ ಸಮಸ್ಯೆ ಉಲ್ಬಣ ಗೊಂಡಿದ್ದು, ಮಂಗಳವಾರ ಈ ಸಂಬಂಧ ಟಾಸ್ಕ ಪೋರ್ಸ ಕಮಿಟಿ ಸಭೆ ನಡೆಸಿದ್ದೇನೆ, ರಿಬೋರ್ , ಕೈಪಂಪು, ಬೋರ್ ಗಳ ದುರಸ್ತಿ ಹಾಗೂ ಪುನಶ್ಟೇತನ ಕಾರ್ಯ ಕೈಗೊಳ್ಳಲು ವಿಧಾನಸಭಾ ಕ್ಷೇತ್ರವಾರು 50 ಲಕ್ಷ ರು.ಗಳ ಕ್ರಿಯಾ ಯೋಜನೆ ತಯಾರಿಸಿ ಪ್ರಸ್ಥಾವನೆ ಸಲ್ಲಿಸಲು ತೀರ್ಮಾನಿಸಲಾಯಿತು ಎಂದು ಅವರು ಹೇಳಿದರು.
ಅಕ್ರಮ ಕಲ್ಲು ಕ್ವಾರಿ, ಕ್ರಸರ್ ಗಳಿಗೆ ಸಂಬಂಧ ಪಟ್ಟಂತೆ ಲೋಕಾಯುಕ್ತದಲ್ಲಿ ಪ್ರಕರಣಗಳು ಹೆಚ್ಚಾಗಿರುವ ಕಾರಣ, ಸರ್ಕಾರ ಮಾಹಿತಿ ಕೇಳಿರುವ ಪ್ರಕಾರ ಪೊಲೀಸ, ಉಪವಿಭಾಗಾಧಿಕಾರಿ, ಅರಣ್ಯ, ಇಓ, ಗಳ ಜಂಟಿ ಸರ್ವೆಯನ್ನು ನ.19 ರಂದು ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
