ಹರಿಹರ:
ಸೋಮ ವಂಶ ಕ್ಷತ್ರಿಯ ಸಮಾಜ ಇವರ ಸಹಯೋಗದಲ್ಲಿ ಸಹಸ್ರಾರು ಅರ್ಜುನ ಮಹಾರಾಜರ ಜಯಂತಿ ಹಾಗೂ ಸಹಸ್ರಾರ್ಜುನ ನಾಮಫಲಕದ ಉದ್ಘಾಟನೆಯನ್ನು ಶಾಸಕ ಎಸ್.ರಾಮಪ್ಪ ನೆರವೇರಿಸಿದರು.
ನಗರದ ಹರಿಹರೇಶ್ವರ ದೇವಸ್ಥಾನದ ರಸ್ತೆಯಲ್ಲಿ ಬುಧುವಾರ ಸಹಸ್ರಾರ್ಜುನ ನಾಮಫಲಕದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದ ಅವರು ಉತ್ತಮ ಆರೋಗ್ಯಕರ ಸಮಾಜ ನಿರ್ಮಾಣಕ್ಕಾಗಿ ನೂತನ ಅಧ್ಯಕ್ಷರಾದ ಪ್ರಸನ್ನಭೂತೆ ಅವರು ಸಮಾಜ ಕಟ್ಟುವುದಕ್ಕೆ ಶ್ರಮಿಸುತ್ತಿದ್ದಾರೆ ಎಂದರು.
ಶೈಕ್ಷಣಿಕ, ರಾಜಕೀಯ, ಸಾಮಾಜಿಕ ಕ್ಷೇತ್ರಗಳಲ್ಲಿ ಸಾಮಜದ ಅಭಿವೃದ್ಧಿ ಕಾರ್ಯಗಳನ್ನು ಮಡುತ್ತಾ, ಸಣ್ಣ ಸಮಾಜವಾದರು ಒಗ್ಗಟ್ಟಾಗಿ ಸಮಾಜದ ಕಾರ್ಯಕ್ರಮಗಳಲ್ಲಿ ತೊಡಗಿಕೊಂಡು ಬಡ ಮತ್ತು ಮಧ್ಯಮ ವರ್ಗದವರಿಗೆ ಸಹಾಯ ಚಾಚುತ್ತಿರುವುದು ಶ್ಲಾಘಿನೀಯ ಎಂದರು.
ಎಸ್ಎಸ್ಕೆ ಸಮಾಜದ ಅಧ್ಯಕ್ಷ ಎಸ್.ಎಂ.ವಸಂತಭೂತೆ ಮಾತನಾಡ ಸಹಸ್ರಾರ್ಜುನ ಮಹಾರಾಜರ ಜಯಂತಿ ಅಂಗವಾಗಿ ರೋಗಿಗಳಿಗೆ ಹಣ್ಣಹಂಪಲು ವಿತರಣೆ ಸಮಾಜದ ಬಾಂಧವರಿಗೆ ಕ್ರೀಡೆ ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಕಲಾ ತಂಡಗಳ ಮೇಳದೊಂದಿಗೆ ಸಹಸ್ರಾರ್ಜುನ ಮಹಾರಾಜರ ಭಾವಚಿತ್ರ ದೊಂದಿಗೆ ರಾಜಾ ಬೀದಿಗಳಲ್ಲಿ ಮೆರವಣಿಗೆಯನ್ನು ಹಮ್ಮಕೊಳ್ಳಲಾಗಿದೆ ಎಂದು ತಿಳಿಸಿದರು.
ನಮ್ಮ ಸಮಾಜವು ಸಾಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಉದ್ದೇಶವಾಗಿರುತ್ತದೆ. ಸಮಾಜದ ಹಿರಿಯರು ಯುವಕರು ಮಾದರಿ ಸಮಾಜವನ್ನಾಗಿ ಮಾಡುವುದಕ್ಕೆ ಸಲಹೆ ಸಹಕಾರ ನೀಡಬೇಕೆಂದು ಹೇಳಿದರು.
ಈ ಸಂಧರ್ಭದಲ್ಲಿ ನಗರಸಭಾ ಅಧ್ಯಕ್ಷೆ ಸುಜಾತ , ಸದಸ್ಯರಾದ ಶಂಕರಖಟಾವ್ಕರ್, ನಾಗರಾಜ್ ಮೆಹರ್ ವಾಡೆ, ಕಿರಣ್ ಭೂತೆ, ಹಾಗೂ ಕೃಷ್ಣಾಸಾಭೂತೆ, ತೂಕಮಣಿಸಾ ಭೂತೆ, ಪರಶುರಾಮ್ ಕಾಟ್ವೆ, ಮೋಹನ್ ಕಿರೋಜಿ, ವಿಠ್ಠಲ್ ಮೋಹನ್, ಕೃಷ್ಣರಾಜೋಳಿ, ಶ್ರೀಕಾಂತ, ಕಿರೋಜಿಸಾ ಹಂಸಗಾರ್, ದುರ್ಗಾಸಾ ಕಾಟ್ವೆ, ಹನುಮಂತ ಸಾ, ಸಮಾಜದ ಬಾಂಧವರು ಉಪಸ್ಥಿತರಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
