ರೋಟರಿ ಸಂಸ್ಥೆ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ : ರೋ ಸುರೇಶ್ ಹರಿ

ತಿಪಟೂರು :

      ಕಲ್ಪತರು ನಾಡಿನಲ್ಲಿ ರೋಟರಿ ಸಂಸ್ಥೆಯು ಕಳೆದ 60 ವರ್ಷಗಳಿಂದ ಸಮಾಜಸೇವಾ ಮುಖಿಯಾಗಿ ಕಾರ್ಯನಿರ್ವಹಿಸುತ್ತಿರುವುದು ಶ್ಲಾಘನೀಯವಾಗಿದೆ ಎಂದು ಜಿಲ್ಲಾ ರೋಟರಿ ರಾಜ್ಯಪಾಲ ಸುರೇಶ್ ಹರಿ ಹೇಳಿದರು.

       ನಗರದ ರೋಟರಿ ಭವನದಲ್ಲಿ ಏರ್ಪಡಿಸಿದ್ದ ರೋಟರಿ 2019ರ ದಿನದರ್ಶಿಕೆ ಬಿಡುಗಡೆಮಾಡಿ ಮಾತನಾಡಿದ ಅವರು ರೋಟರಿಗೆ ಉತ್ತಮ ಗೌರವವಿದ್ದು ಇಲ್ಲಿ ಸದಸ್ಯರಾದರೆ ನಾಯಕತ್ವದ ಗುಣಗಳನ್ನು ರೂಡಿಸಿಕೊಳ್ಳಬಹುದು. ರೋಟರಿ ಸಂಸ್ಥೆಯ ಮೂಲಕ ಸಾಮಾಜಿಕವಾಗಿ ಮುನ್ನಡೆಯಬಹುದು. ತಿಪಟೂರು ರೋಟರಿ ಸಂಸ್ಥೆಯು ವಿವಿಧ ಕಾರ್ಯಕ್ರಮಗಳು ಜೊತೆಗೆ ಎಸ್.ಎಸ್.ಎಲ್.ಸಿ ಪಿ.ಯು.ಸಿ. ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡುವುದರ ಮೂಲಕ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ ರೋಟರಿ ಸಂಸ್ಥೆಯು ಪ್ರಾರಂಭವಾಗಿ 113 ವರ್ಷಗಳಾಗಿದ್ದು ಮೊದಲು ಪೋಲೀಯೋ ಲಸಿಕೆ ಹಾಕುವುದರ ಮೂಲಕ ಆರೋಗ್ಯ ಕ್ಷೇತ್ರದಲ್ಲಿ ಸೇವೆಸಲ್ಲಿಸಿದ್ದು ತಾಲ್ಲೂಕಿನಲ್ಲಿ ಡಯಾಲಿಸಿಸ್ ಕೇಂದ್ರ ಸ್ಥಾಪಿಸಲು ಸದಸ್ಯರ ಸಹಕಾರ ಅವಶ್ಯ ಎಂದರು.

       ರೋಟರಿ ಸಂಸ್ಥೆಯ ಅಧ್ಯಕ್ಷ ಶಿವಶಂಕರ್ ಮಾತನಾಡಿ ಕಳೆದ 5 ತಿಂಗಳಿದ ಸಂಸ್ಥೆಮೂಲಕ ಹಲವಾರು ಜನಪರ ಕಾರ್ಯಕ್ರಮಗಳನ್ನು ಆಯೋಜನೆಮಾಡಿದ್ದು ಸಂಘದ ಸದಸ್ಯರು ಉತ್ತಮವಾಗಿ ಸಲಹೆ ಸಹಕಾರ ನಿಡುತ್ತಿದ್ದಾರೆ. ಸ್ವಚ್ಚತಾ ಕಾರ್ಯಕ್ರಮ ಹಾಗೂ ಕೊಡಗು ಸಂತ್ರಸ್ತರಿಗೆ 50 ಸಾವಿರ ಪರಿಹಾರ, ಪಾನಮುಕ್ತ ಕಾರ್ಯಕ್ರಮ, ಸರ್ಕಾರಿ ಶಾಲೆಮಕ್ಕಳಿಗೆ ಕಣ್ಣಿನ ತಪಾಸಣೆ, ರಸ್ತೆ ಓಟದ ಸ್ಪರ್ಧೆ ಸೇರಿದಂತೆ ವಿವಿದ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಯಶಸ್ವಿಯಾಗಿ ಪೂರ್ಣಗೊಳಿಸಲಾಗಿದೆ ಎಂದರು.

       ಕಾರ್ಯಕ್ರಮದಲ್ಲಿ ಜಿಲ್ಲಾ ರೋ ಉಪಾಧ್ಯಕ್ಷ ಅನಿತಾ ಎಸ್ ಹರಿ, ಜಿಲ್ಲಾ ಕಾರ್ಯದರ್ಶಿ ಕಾರ್ತಿಕ್ ರೆಡ್ಡಿ, ಎಂ.ಎಸ್.ಉಮೇಶ್, ವಿಜಯಕುಮಾರಿ, ತಿರುಮುರುಗನ್, ತುರುವೇಕೆರೆ ರೋ ಚೇತನ್ ಬಸವರಾಜು, ಥಾಮಸ್, ಮಲ್ಲೇಶಯ್ಯ, ಚಿಕ್ಕನಾಯಕನಹಳ್ಳಿ ಚಿನ್ನು, ತೋಟದಾರ್ಯ, ನಟರಾಜು, ಇನ್‍ವೀಲ್ ಕ್ಲಬ್ ಅಧ್ಯಕ್ಷೆ ಭಾಗ್ಯ ಮೂರ್ತಿ ಮುಂತಾದವರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link