ತುಮಕೂರು:
ಸಿದ್ಧಗಂಗಾ ಶ್ರೀಗಳು ಈಗ ಚೇತರಿಸಿಕೊಂಡಿದ್ದಾರೆ, ಅವರ ಬಗ್ಗೆ ಆತಂಕಗೊಳ್ಳುವುದು ಬೇಡ ಎಂದು ಉಪಮುಖ್ಯಮಂತ್ರಿ ಜಿ.ಪರಮೇಶ್ವರ್ ಹೇಳಿದರು.
ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರು ಮಠಕ್ಕೆ ಭೇಟಿ ನೀಡಿ ಶ್ರೀಗಳ ಆರೋಗ್ಯ ವಿಚಾರಿಸಿ ಮಾತನಾಡಿದ ಅವರು, ಶ್ರೀಗಳು ಈಗ ಸಂಪೂರ್ಣ ವಾಗಿ ಚೇತರಿಸಿಕೊಂಡಿದ್ದು , ಅವರಿಗೆ ಮುಂದೇನಾದರೂ ಚಿಕಿತ್ಸೆ ಅಗತ್ಯವಿದೆ ಎಂದಾದರೆ ವೈದ್ಯರು ತಿಳಿಸುತ್ತಾರೆ. ಅವರ ಆರೋಗ್ಯದ ವರದಿಯನ್ನು ಚೆನ್ನೈ ವೈದ್ಯರಿಗೆ ತೋರಿಸಲು ತೆಗೆದುಕೊಂಡು ಹೋಗಲಾಗಿದೆ. ಅವರು ಸಲಹೆ ನೀಡಿದ ಬಳಿಕ ಮುಂದಿನ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ ಎಂದು ಹೇಳಿದರು.
ಈಗಾಗಲೇ ಶ್ರೀಗಳಿಗೆ 11 ಸ್ಟಂಟ್ಗಳನ್ನು ಅಳವಡಿಸಲಾಗಿದ್ದು ಕೆಲ ಸ್ಟಂಟ್ಗಳನ್ನು ತೆಗೆದು ಹೊಸ ಸ್ಟಂಟ್ಗಳನ್ನು ಅಳವಡಿಸುವ ಬಗ್ಗೆ ಬಿಜಿಎಸ್ ಆಸ್ಪತ್ರೆಯ ವೈದ್ಯರ ತಂಡ ಸಿದ್ಧತೆ ನಡೆಸಿದೆ. ಶ್ರೀಗಳ ಸ್ಟಂಟ್ ವರದಿ, ರಕ್ತದ ಮಾದರಿ, ಸ್ಕ್ಯಾನಿಂಗ್ ವರದಿ ಸಹಿತ ಮೂವರು ವೈದ್ಯರು ಚೆನ್ನೈಗೆ ತೆರಳಿ ನುರಿತ ವೈದ್ಯರ ಸಲಹೆ ಪಡೆಯಲು ತೆರಳಿದ್ದಾರೆ.ಸ್ಟಂಟ್ ತಜ್ಞರಾದ ಡಾ.ಮೊಹಮ್ಮದ್ ಮತ್ತು ಡಾ.ಪಳನಿವೇಲು ಅವರ ಸಲಹೆ ಪಡೆಯಲು ವೈದ್ಯರು ತೆರಳಿದ್ದಾರೆ.
ಪ್ರತಿ ದಿವಸದ ಹಾಗೇ ಇಂದು ಕೂಡ ಶ್ರೀಗಳು ಶಿವಪೂಜೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡರು. ಶಿವಪೂಜೆಯನ್ನೂ ನೆರವೇರಿಸಿದ್ದಾರೆ. ಭಕ್ತರು ಆತಂಕ ಪಡುವುದು ಬೇಡ ಎಂದು ಸಿದ್ಧಗಂಗಾ ಮಠದ ಕಿರಿಯ ಶ್ರೀಗಳು ತಿಳಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
