ಪೊಲೀಸ್ ಠಾಣೆಯಲ್ಲಿ ಶೈಕ್ಷಣಿಕ ಕ್ಷೇತ್ರ ಅಧ್ಯಯನ ಪ್ರವಾಸ

ಹರಿಹರ:

        ಶ್ರೀ ಕಾಗಿನೆಲೆ ಮಹಾಸಂಸ್ಥಾನ ಕನಕ ಗುರು ಪೀಠ, ಬೆಳ್ಳೂಡಿ ಶಾಖಾ ಮಠದ ಆವರಣದಲ್ಲಿರುವ ಚಂದ್ರಗುಪ್ತ ಮೌರ್ಯ ಪಬ್ಲಿಕ್ ಶಾಲೆಯಿಂದ ಶನಿವಾರ ಹರಿಹರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಶೈಕ್ಷಣಿಕ ಕ್ಷೇತ್ರ ಅಧ್ಯಯನ ಪ್ರವಾಸ ನಿಮಿತ್ತ ಭೇಟಿ ನೀಡಲಾಯಿತು.

         ಶ್ರೀ ಕ್ಷೇತ್ರ ಕಾಗಿನೆಲೆಯ ಪೀಠಾಧ್ಯಕ್ಷರಾದ ಶ್ರೀ ನಿರಂಜನಾನಂದಪುರಿ ಮಹಾಸ್ವಾಮೀಜಿಗಳ ಕೃಪಾರ್ಶೀವಾದ ಮತ್ತು ಮಾರ್ಗದರ್ಶನದೊಂದಿಗೆ 11:30 ಗಂಟೆಗೆ ಚಂದ್ರಗುಪ್ತ ಮೌರ್ಯ ಪಬ್ಲಿಕ್ ಶಾಲೆಯ 6ನೇ, 7ನೇ ಮತ್ತು 8ನೇ ತರಗತಿ ವಿದ್ಯಾರ್ಥಿಗಳನ್ನು ಹರಿಹರದ ಗ್ರಾಮಾಂತರ ಆರಕ್ಷಕ ಠಾಣೆಗೆ, ಶಾಲೆಯ ಕಾರ್ಯದರ್ಶಿಯವರಾದ ಎಸ್.ನಿಂಗಪ್ಪ ಅವರ ನೇತೃತ್ವದಲ್ಲಿ, ನಾಲ್ವರು ಶಿಕ್ಷಕರು ಭೇಟಿ ನೀಡಲಾಯಿತು.

         ಭೇಟಿಯ ಸಂದರ್ಭದಲ್ಲಿ ಗ್ರಾಮಾಂತರ ಠಾಣೆಯ ಪಿಎಸ್‍ಐ ಸಿದ್ದೇಗೌಡ ಅವರು ಹಾಜರಿದ್ದು ವಿದ್ಯಾರ್ಥಿಗಳಿಗೆ ಠಾಣೆಯ ಕಾರ್ಯ ವ್ಯಾಪ್ತಿ, ಅಪರಾದಗಳ ಅಂಕಿಅಂಶಗಳು, ಆಯುಧಗಳ ಪರಿಚಯ ಮತ್ತು ಉಪಯೋಗಿಸುವ ರೀತಿ ಅದರ ಉಪಯೋಗಗಳು, ಅಪರಾದಗಳ ನೊಂದಣಿ ವಿಧಗಳು, ನೊಂದಣಿ ವಿಧಾನ, ಸಾಮಾನ್ಯ ನಾಗರೀಕರು ವಹಿಸಬೇಕಾದ ಎಚ್ಚರಿಕೆ, ಬಾಲಪರಾಧ ಎಂದರೇನು ಅದಕ್ಕೆ ಶಿಕ್ಷೆ ಏನು ಮತ್ತು ಬಾಲ ಕಾರ್ಮಿಕರು ಅಂದರೆ ಯಾರು ಎಂಬುದರ ಬಗ್ಗೆ ಮಾಹಿತಿ. ಬಂದಿಖಾನೆಗಳ ಪರಿಚಯ, ಪಾಸ್ ಪೋರ್ಟ್, ವೀಸಾ ಬಗ್ಗೆ ಮಾಹಿತಿ ನೀಡಿದರು.

         ಒಟ್ಟಾರೆ ಶೈಕ್ಷಣಿಕ ಕ್ಷೇತ್ರ ಅಧ್ಯಯನ ಪ್ರವಾಸದಲ್ಲಿ ಕಾನೂನು ಅರಿವು ಮತ್ತು ಪರಿಪಾಲನೆ ಬಗ್ಗೆ ವಿದ್ಯಾರ್ಥಿಗಳು ಹೆಚ್ಚಿನ ಮಾಹಿತಿಯನ್ನು ಪಡೆದರು. ಈ ಕಾರ್ಯಕ್ರಮ ವಿದ್ಯಾರ್ಥಿಗಳಿಗೆ ಹೆಚ್ಚಿನ ಜ್ಞಾನಕ್ಕೆ ಅನುಕೂಲವಾಯಿತು ಎಂದು ಶಾಲೆಯ ಕಾರ್ಯದರ್ಶಿ ಅವರಾದ ಎಸ್.ನಿಂಗಪ್ಪ ಹೇಳಿದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link