ಲೇಹ್ ನಲ್ಲಿ ಭಾರಿ ಹಿಮಪಾತ : 10 ಮಂದಿ ಕಣ್ಮರೆ..

ಶ್ರೀನಗರ:

      ಲಡಾಖ್ ಬಳಿಯ ಲೇಹ್ ಜಿಲ್ಲೆಯಲ್ಲಿ ಇದ್ದಕ್ಕಿದಂತೆ ಭಾರಿ ಹಿಮಪಾತ ಸಂಭವಿಸಿದ್ದು ಈ ಹಿಮಪಾತದಲ್ಲಿ ಇದರಲ್ಲಿ ಸುಮಾರು 0 ಮಂದಿ ನಾಪತ್ತೆಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

    ಖಾರ್ ದುಂಗ್ ಲಾ ಪಾಸ್ ಮೂಲಕ ಟ್ರಕ್ ನಲ್ಲಿ ತೆರಳುತ್ತಿದ್ದ ನಾಗರೀಕರು ನಾಪತ್ತೆಯಾಗಿದ್ದಾರೆ ಎಂದು ತಿಳಿಸಿದ್ದಾರೆ ಜಮ್ಮು ಮತ್ತು ಕಾಶ್ಮೀರದ ವಿಪತ್ತು ನಿರ್ವಹಣಾ ಕಾರ್ಯಾಚರಣಾ ಪಡೆ ಹಾಗೂ ರಕ್ಷಣಾ ಪಡೆಗಳ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯ ಕೈಗೊಂಡಿದ್ದಾರೆ,

     ಕೆಲವು ದಿನಗಳಿಂದ ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರೀ ಹಿಮಪಾತವಾಗುತ್ತಿದ್ದು ,ಈ ಬಗ್ಗೆ ನಿನ್ನೆಯೇ ಹವಾಮಾನ ಇಲಾಖೆಯಿಂದ ಮುನ್ಸೂಚನೆ ನೀಡಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

       ಸದ್ಯ ಲಡಾಕ್ ಸೇರಿದಂತೆ ಅನಂತ್ ನಾಗ್, ಬುದ್ ಗಂ, ಬಾರಮುಲ್ಲಾ, ಬಂಡಿಪೊರಾ, ಗಂಡೆರ್ ಬಲ್,  ಕಾರ್ಗಿಲ್, ಕುಲ್ಗಾಂ, ಕುಪ್ವಾರ ಮತ್ತು ಲೇಹ್ ಜಿಲ್ಲೆಯಲ್ಲಿ ಭಾರೀ ಹಿಮಾಪಾತವಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ ಎಂದು ತಿಳಿದು ಬಂದಿದೆ. 

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link