ರೆಸಾರ್ಟ್ ನಲ್ಲಿ ಗಲಾಟೆಯಾಗಿರುವುದು ನಿಜ!!

ಬೆಳಗಾವಿ:

      ಕಾಂಗ್ರೆಸ್​​ ಶಾಸಕರ ನಡುವೆ ಹೊಡೆದಾಟ ನಡೆದಿರುವುದು ನಿಜ ಎಂದು ಮಾಜಿ ಸಿಎಂ, ಕಾಂಗ್ರೆಸ್ ಶಾಸಕಾಂಗ ಪಕ್ಷದ ಅಧ್ಯಕ್ಷ ಸಿದ್ದರಾಮಯ್ಯ ಅವರು ಒಪ್ಪಿಕೊಂಡಿದ್ದಾರೆ.

      ಇಂದು ಕೊಪ್ಪಳದ ಗಂಗಾವತಿಯಲ್ಲಿ ಪ್ರತಿಕ್ರಿಯಿಸಿರುವ ಮಾಜಿ ಸಿಎಂ ಸಿದ್ದರಾಮಯ್ಯ ಅವರು, ಶಾಸಕರಾದ ಜೆ.ಎನ್. ಗಣೇಶ್​ ಹಾಗೂ ಆನಂದ್ ಸಿಂಗ್ ನಡುವೆ ಗಲಾಟೆ ಆಗಿದೆಯಂತೆ. ನಿನ್ನೆ ರಾತ್ರಿಯೇ ಮಾಹಿತಿ ಬಂದಿದೆ, ಮಾಧ್ಯಮಗಳ ಮೂಲಕವೂ ತಿಳಿಯಿತು ಎಂದು ಈಗಲ್​​ಟನ್ ರೆಸಾರ್ಟ್​​​​ನಲ್ಲಿ ತಮ್ಮ ಶಾಸಕರಿಬ್ಬರ ಮಧ್ಯೆ ನಡೆದ ಗಲಾಟೆಯನ್ನು ಒಪ್ಪಿಕೊಂಡಿದ್ದಾರೆ.

      ಇನ್ನು ಯಾರದು ತಪ್ಪು? ಎನಾಯಿತು? ಎಂದು ಅಲ್ಲಿಗೆ ಹೋಗಿ ವಿಚಾರಿಸುತ್ತೇನೆ ಎಂದು ಹೇಳಿಕೆ ನೀಡಿದ್ದಾರೆ. 

  ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link