ಹರಪನಹಳ್ಳಿ
ಶತಮಾನದ ಸಂತ, ಕಾಯಕ ಯೋಗಿ ಸಿದ್ದಗಂಗಾ ಮಠದ ಡಾ.ಶಿವಕುಮಾರ ಶಿವಾಚಾರ್ಯ ಸ್ವಾಮೀಜಿಗಳು ಎಂದಿಗೂ ಪದವಿ, ಪ್ರಶಸ್ತಿಗಳಿಗೆ ಆಶೆ ಪಟ್ಟವರಲ್ಲ ಎಂದು ತರಳ ಬಾಳು ಶಾಖಾಮಠ ಸಾಣೇಹಳ್ಳಿ ಯ ಡಾ.ಪಂಡಿತಾರಾದ್ಯ ಶಿವಾಚಾರ್ಯ ಮಹಾಸ್ವಾಮಿಗಳು ಅಭಿಪ್ರಾಯ ಪಟ್ಟಿದ್ದಾರೆ.
ಅವರು ಪಟ್ಟಣದ ಎಚ್ ಪಿ ಎಸ್ ಕಾಲೇಜಿನ ಮೈದಾನದಲ್ಲಿ ನೀನಲ್ಲದೆ ಮತ್ತಾರು ಇಲ್ಲವಯ್ಯ ಎಂಬ ವಚನ ನೃತ್ಯ ರೂಪಕ ಕಾರ್ಯಕ್ರಮ ಉದ್ಘಾಟಿಸಿ ಬುಧವಾರ ರಾತ್ರಿ ಮಾತನಾಡಿದರು.
ಸಿದ್ದಗಂಗಾ ಶ್ರೀಗಳ ಬಗ್ಗೆ ನಿಜವಾದ ಗೌರವ ಸರ್ಕಾರಕ್ಕಿದ್ದರೆ ಮದ್ಯ ಪಾನ ನಿಷೇಧ ಮಾಡಿದರೆ ಭಾರತ ರತ್ನ ಪ್ರಶಸ್ತಿ ನೀಡಿದಂತೆ ಎಂದು ಅವರು ಹೇಳಿದರು. ಕೇವಲ ಆರ್ಥಿಕ ಪ್ರಗತಿ ಪ್ರಗತಿಯಲ್ಲ, ಅದರ ಜೊತೆಗೆ ಶೈಕ್ಷಣಿಕ ಪ್ರಗತಿಯಾಗಬೇಕು, ಆಗ ಮಾತ್ರ ತಲೆ ಎತ್ತಿ ಬದುಕಬಹುದು ಎಂದ ಅವರು ಸಿರಿಗೇರಿ ಹಿಂದಿನ ಶ್ರೀಗಳು ದುಗ್ಗಾಣಿ ಮಠವಾಗಿದ್ದ ಸಿರಿಗೇರಿ ಮಠವನ್ನು ದುಡಿಯುವ ಮಠವನ್ನಾಗಿ ಮಾಡಿದರು ಎಂದು ಅವರು ಹೇಳಿದರು.
ದುಶ್ಟಟಗಳಿಗೆ ನಮ್ಮನ್ನು ನಾವು ಮಾರಿಕೊಂಡಿದ್ದೇವೆ, ನಮ್ಮನ್ನು ಆಳುವ ನೇತಾರರ ಸ್ಥಿತಿ ಹೇಗಾಗಿದೆ ಎಂದು ನೋಡಿದರೆ ಉಳಿದವರ ಸ್ಥಿತಿ ಹೇಗಾಗಬಹುದು ಎಂದು ಶಾಸಕರಿಬ್ಬರ ರೇಸಾರ್ಟ ಗಲಾಟೆಯನ್ನು ಪರೋಕ್ಷವಾಗಿ ಪ್ರಸ್ಥಾಪಿಸಿದರು.ಸಹಜ ಹಾಗೂ ಸಾವಯವ ಕೃಷಿಗೆ ಒತ್ತು ನೀಡಬೇಕು ಎಂದು ಹೇಳಿದ ಶ್ರೀಗಳು ಮನೋರಂಜನೆ ಮನೋವಿಕಾಸವಾಗಬೇಕು ಹೊರತು ಮನೋವಿಕಾರವಾಗಬಾರದು ಎಂದರು. ವಚನಗಳ ಸಂಸ್ಕಾರ ವನ್ನು ಮಕ್ಕಳಿಗೆ ಕಲಿಸಬೇಕು ಎಂದು ಅವರು ತಿಳಿಸಿದರು.
ಬಿಜೆಪಿ ಮಾಜಿ ಅಧ್ಯಕ್ಷ ಜಿ.ನಂಜನಗೌಡ ಅವರು ಮಾತನಾಡಿ ಸಮಾಜಮುಖಿ ಕಾರ್ಯಗಳನ್ನು ಕೇವಲ ಸರ್ಕಾರಗಳು ಮಾಡಲು ಸಾದ್ಯವಿಲ್ಲ, ಸಂಘ ಸಂಸ್ಥೆಗಳು ಮಾಡಬೇಕಾಗುವುದು, ಇಂದು ಆರಂಭವಾಗಿರುವ ವಿಶ್ವಬಂಧು ಮರುಳ ಸಿದ್ದ ಸೌಹಾರ್ಧ ಸಹಕಾರ ಬ್ಯಾಂಕು ಯಶಸ್ವಿಯಾಗಲಿ ಎಂದು ಶುಭಕೋರಿದರು.
ವೀರಶೈವ ಪಂಚಮಸಾಲಿ ಸಮಾಜದ ತಾಲೂಕು ಅಧ್ಯಕ್ಷ ಪಟೇಲ್ ಬೆಟ್ಟನಗೌಡ ಅವರು ಮಾತನಾಡಿದರು. ಸಾಧುವೀರಶೈವ ಸಮಾಜದ ಅಧ್ಯಕ್ಷ ಬಂದೋಳು ಮಂಜುನಾಥ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಸಾಣೇಹಳ್ಳಿಯ ಗುರುಪಾದೇಶ್ವರ ಪ್ರೌಢ ಶಾಲೆ ಹಾಗೂ ಶಿವಕುಮಾರ ಸ್ವಾಮೀಜಿ ಹಿರಿಯ ಪ್ರಾಥಮಿಕ ಶಾಲೆಯ 100 ಮಕ್ಕಳು 40 ವಚನಗಳಿಗೆ ನೃತ್ಯ ಮಾಡಿ ಗಮನ ಸೆಳೆದರು. ನಿವೃತ್ತ ಪ್ರಾಚಾ.ರ್ಯ ಎ., ಪ್ರಸ್ಥಾವಿಕವಾಗಿ ಮಾತನಾಡಿದರು.ಬಿ.ಕೆ.ಪ್ರಕಾಶ, ಕೆ.ರವೀಂದ್ರನಾಥ, ಡಾ.ಹರ್ಷ, ಪ್ರಕಾಶ ಹುಣ್ಸಿಹಳ್ಳಿ, ಪ್ರೇಮಕುಮಾರ,, ರಾಮನಗೌಡರು, ಕುಸುಮಾ, ಇತರರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ