ಬ್ಯಾಡಗಿ:
ಬರುವ ಜ.28 ರಂದು ಹಾವೇರಿ ಮುನ್ಸಿಪಲ್ ಆವರಣದಲ್ಲಿ ಜರುಗಲಿರುವ ರಾಜ್ಯ ರೈತ ಸಂಘದ (ಪುಟ್ಟಣ್ಣಯ್ಯಬಣ) ಬೃಹತ್ ರೈತ ಸಮಾವೇಶದ ಹಿನ್ನೆಲೆಯಲ್ಲಿ ತಾಲೂಕಿನಲ್ಲಿ ಪ್ರಚಾರ ಕಾರ್ಯಕ್ಕೆ ಸಂಘದ ತಾಲೂಕಾಧ್ಯಕ್ಷ ರುದ್ರನಗೌಡ ಕಾಡನಗೌಡ್ರ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು, ಸಮ್ಮೇಳನದ ಸಿದ್ಧತೆಗಾಗಿ ಕಳೆದೊಂದು ತಿಂಗಳಿನಿಂದ ಸಂಘದ ಕಾರ್ಯಕರ್ತರು ಹಗಲಿರುಳು ಶ್ರಮಿಸುತ್ತಿದ್ದಾರೆ, ಜಿಲ್ಲೆಯ ಪ್ರತಿಯೊಂದು ಗ್ರಾಮದಲ್ಲಿಯೂ ಈಗಾಗಲೇ ಸಮ್ಮೇಳನದ ಬ್ಯಾನರ್ಗಳು ಹಾಗೂ ಆಹ್ವಾನ ಪತ್ರಿಕೆ ಭಿತ್ತಿ ಪತ್ರ ಅಂಟಿಸಲಾಗಿದ್ದು, ಎಲ್ಲ ರೈತ ಬಾಂಧವರಿಗೂ ಸಮಾವೇಶದ ವಿಷಯ ತಲುಪುವಂತೆ ಮಾಡ ಲಾಗಿದೆ, ಇದೀಗ ಕೊನೆಯದಾಗಿ ಆಟೋಗಳಲ್ಲಿ ಧ್ವನಿವರ್ಧಕದ ಮೂಲಕ ಸಮ್ಮೇಳನಕ್ಕೆ ಆಹ್ವಾನಿಸುವ ಕಾರ್ಯದಲ್ಲಿ ಕಾರ್ಯಕರ್ತರು ತೊಡಗಿದ್ದಾರೆ, ಅದಾಗ್ಯೂ ವಿಷಯ ತಿಳಿಯದ ಸಮಸ್ತ ರೈತ ಬಾಂಧವರು ಇದನ್ನೇ ಆಹ್ವಾನವೆಂದು ಮನ್ನಿಸಿ ಸಮಾವೇಶದಲ್ಲಿ ತಪ್ಪದೇ ಪಾಲ್ಗೊಳ್ಳುವಂತೆ ಮನವಿ ಮಾಡಿದರು.
ಸಮ್ಮೇಳನಕ್ಕೆ 50 ಸಾವಿರ ರೈತರು:ಮುಖಂಡ ಗಂಗಣ್ಣ ಎಲಿ ಮಾತನಾಡಿ, ಜ.28 ರಂದು ಸಮ್ಮೇಳನದಲ್ಲಿ ಕನಿಷ್ಟ 50 ಸಾವಿರ ರೈತರು ಪಾಲ್ಗೊಳ್ಳುವ ನಿರೀಕ್ಷೆಯಿದೆ ಅದಕ್ಕಾಗಿ ಎಲ್ಲ ಪೂರ್ವ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದ್ದು ಸಮ್ಮೇಳನಕ್ಕೆ ಬರುವವರಿಗೆ ವಾಹನದ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ, ಹೆಚ್ಚಿನ ಸಂಖ್ಯೆ ಯಲ್ಲಿ ರೈತರು ಸಮಾವೇಶದಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಮನವಿ ಮಾಡಿದರು.
ನಮ್ಮ ಅಸ್ತಿತ್ವದ ಪ್ರಶ್ನೆ: ಕೃಷಿ ಸರಣಿ ವೈಫಲ್ಯದಿಂದಾಗಿ ರೈತರ ಅಸ್ತಿತ್ವದ ಪ್ರಶ್ನೆ ಎದುರಾಗಿದೆ, ಆಳುತ್ತಿರುವ ಸರ್ಕಾರಗಳಿಗೆ ನಮ್ಮ ಸಂಕಷ್ಟವನ್ನು ಕೇಳು ವಂತಹ ಸ್ಥಿತಿಯಲ್ಲಿಲ್ಲ ರೈತ ವಿರೋಧಿ ಧೋರಣೆಯನ್ನು ಸಮಾವೇಶದಲ್ಲಿ ಪ್ರತಿಧ್ವನಿಸಿ ರೈತರ ಸಂಕಷ್ಟಗಳಿಗೆ ಸ್ಪಂದನೆ ನೀಡುವಂತೆ ಜನಪ್ರತಿನಿಧಿಗಳ ಗಮನ ಸೆಳೆಯುವುದು ಸೇರಿದಂತೆ ರೈತರ ಒಗ್ಗಟ್ಟಿನ ಬೃಹತ್ ಸಮಾವೇಶ ಮತ್ತು ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಇದು ನಿಮ್ಮ ಕಾರ್ಯಕ್ರಮ ಕಡ್ಡಾ ಯವಾಗಿ ಎಲ್ಲ ರೈತರು ಪಾಲ್ಗೊಳ್ಳುವಂತೆ ಮನವಿ ಮಾಡಿದರು. ಈ ಸಂದರ್ಭದಲ್ಲಿ ಕಿರಣಕುಮಾರ ಗಡೀಗೋಳ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
