ಬೆಳಗಾವಿ :
ಎರಡು ಬೈಕ್ ಗಳ ನಡುವೆ ಮುಖಾಮುಖಿಯಾಗಿ ಡಿಕ್ಕಿ ಹೊಡೆದು ಮೂವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಚಿಕ್ಕೋಡಿ ತಾಲೂಕಿನ ಮಜಲಟ್ಟಿ ಗ್ರಾಮದ ಬಳಿ ನಡೆದಿದೆ.
ಶಂಕರ್ ಘಾಟಗೆ (32), ಬೀರಪ್ಪ ಖೋತ (52), ಪ್ರವೀಣ್ ಪಾಟೀಲ್ (32) ಮೃತ ದುರ್ದೈವಿಗಳು. ಮೃತಪಟ್ಟ ಮೂವರು ಚಿಕ್ಕೋಡಿ ತಾಲೂಕಿನ ವಡರಾಳ ಹಾಗೂ ಹಾಗೂ ಚಿಂಚಣಿ ಗ್ರಾಮದ ನಿವಾಸಿಗಳು.
ಅಪಘಾತದಲ್ಲಿ ಜಾನವ್ವಾ ಬಬಲೇಶ್ವರ (9) ಹಾಗೂ ಲಕ್ಷ್ಮೀ ಬಬಲೇಶ್ವರ (32) ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಬೆಳಗಾವಿ ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗಿದೆ.
ಸ್ಥಳಕ್ಕೆ ಚಿಕ್ಕೋಡಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಘಟನೆ ಸಂಬಂಧ ಚಿಕ್ಕೋಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
