ದಾವಣಗೆರೆ:![](http://prajapragathi.com/wp-content/uploads/2019/01/28_dvg_02.gif)
![](http://prajapragathi.com/wp-content/uploads/2019/01/28_dvg_02.gif)
ನಗರದ ಪ್ರೌಢಶಾಲಾ ಮೈದಾನದಲ್ಲಿ ಫೆ.3ರಂದು ಸಂಜೆ 6.30ರಿಂದ ನಟ ಉಪೇಂದ್ರ ಅಭಿನಯದ “ಐ ಲವ್ ಯು” ಚಿತ್ರದ ಧ್ವನಿ ಸುರುಳಿ ಬಿಡುಗಡೆ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ಚಿತ್ರದ ನಿರ್ದೇಶಕ ಆರ್.ಚಂದ್ರು ತಿಳಿಸಿದರು.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಸಂಜೆ 6.30ರಿಂದ ರಾತ್ರಿ 11.30ರ ವರೆಗೆ ನಡೆಯುವ ಕಾರ್ಯಕ್ರಮದಲ್ಲಿ ನಟ ಉಪೇಂದ್ರ, ನಟಿಯರಾದ ರಚಿತ ರಾಮ್, ಸೋನುಗೌಡ, ಸಂಗೀತ ನಿರ್ದೇಶಕ ಗುರುಕಿರಣ, ಚಿತ್ರದ ಸಂಗೀತ ನಿರ್ದೇಶಕ ಕಿರಣ ತೋಟ ಎಲೆಬೈಲು, ಕಿರುತೆರೆಯ ನಟ-ನಟಿಯರು ಮತ್ತಿತರರು ಭಾಗವಹಿಸಿ ಸಂಗೀತ ರಸದೌತಣ ನೀಡಲಿದ್ದಾರೆಂದು ಹೇಳಿದರು.
ಚಿತ್ರದಲ್ಲಿ ಒಟ್ಟು ಆರು ಹಾಡುಗಳಿದ್ದು, ಆರ್ಮನ್ ಮಲ್ಲಿಕ್, ಸೋನು ನೀಗಮ್, ಬಿನ್ನಿ ದಯಾಳ್, ಹೇಮಂತ್ ಮತ್ತಿತರರು ಹಾಡುಗಳನ್ನು ಹಾಡಿದ್ದಾರೆ. ಹಿರಿಯ ನಟ ವಿ.ರವಿಚಂದ್ರನ್ ಸಹ ಒಂದು ಹಾಡು ಬರೆದುಕೊಟ್ಟಿದ್ದಾರೆ. ಹೊಸ ಪ್ರಯತ್ನದ ಮೂಲಕ ಐ ಲವ್ ಯು ಚಿತ್ರ ನಿರ್ಮಾಣ ಮಾಡಿದ್ದು, ಫೆಬ್ರವರಿ ತಿಂಗಳ ಕೊನೆಯ ವಾರದಲ್ಲಿ ಚಿತ್ರ ತೆರೆ ಕಾಣಲಿದೆ ಎಂದು ಮಾಹಿತಿ ನೀಡಿದರು.
ತಾವು ತಾಜ್ಮಹಾಲ್ನಿಂದ ಹಿಡಿದು ಕನಕದ ವರೆಗೂ ಮಾಡಿರುವ 10 ಸಿನೆಮಾ ನಿರ್ದೇಶನ ಮಾಡಿದ್ದೇನೆ. ಈ ಎಲ್ಲಾ ಚಿತ್ರಗಳಿಗಿಂತ ಹನ್ನೊಂದನೇ ಚಿತ್ರವಾಗಿರುವ ಐ ಲವ್ ಯು ಚಿತ್ರ ವಿಭಿನ್ನವಾಗಿ ಮೂಡಿ ಬಂದಿದ್ದು, ಈ ಚಿತ್ರವು ತೆಲುಗು ಹಾಗೂ ಕನ್ನಡ ಭಾಷೆಯಲ್ಲಿ ನಿರ್ಮಾಣವಾಗಿದೆ ಎಂದರು.ಸುದ್ದಿಗೋಷ್ಠಿಯಲ್ಲಿ ಚಿತ್ರ ನಿರ್ಮಾಣ ಮುನಿಂದ್ರ ಕೆ. ಪುರ, ಸೂರ್ಯ, ಮಂಜುನಾಥ್ ಮತ್ತಿತರರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
![](https://prajapragathi.com/wp-content/uploads/2019/01/28_dvg_02.gif)