ಬ್ಯಾಡಗಿ:
ಹೆಲ್ಮೆಟ್ ಕಡ್ಡಾಯ, ಸೇರಿದಂತೆ ವಾಹನ ಸವಾರರ ಸುರಕ್ಷತೆಗೆ ಜಾರಿಗೊಳಿಸಿರುವ ಕಾನೂನು ಹಾಗೂ ರಸ್ತೆ ನಿಯಮ ಗಳನ್ನು ಪ್ರತಿಯೊಬ್ಬರು ಪಾಲಿಸಿದಲ್ಲಿ ಮಾತ್ರ ಅಪಘಾತಗಳಲ್ಲಿ ಹೆಚ್ಚುತ್ತಿರುವ ಸಾವಿನ ಸಂಖ್ಯೆಗೆ ಕಡಿವಾಣ ಹಾಕಬಹುದಾಗಿದೆ ಎಂದು ಪಿಎಸ್ಐ ಮಹಾಂತೇಶ ಹೇಳಿದರು.
ತಾಲೂಕಿನ ಮಾಸಣಗಿ ಗ್ರಾಮದ ಸರಕಾರಿ ಪ್ರೌಢಶಾಲೆಯಲ್ಲಿ ಪೊಲೀಸ್ ಇಲಾಖೆ ವತಿಯಿಂದ ಆಯೋಜಿಸಲಾಗಿದ್ದ ರಸ್ತೆ ಸುರಕ್ಷತಾ ಸಪ್ತಾಹ ಕಾರ್ಯಕ್ರಮ ದಲ್ಲಿ ಮಾತನಾಡಿದ ಅವರು, ದೇಶದಲ್ಲಿ ದಿನದಿನಕ್ಕೆ ಅಪಘಾತ ಹಾಗೂ ಅದರಿಂದಾಗಿ ಪ್ರಾಣಹಾನಿ ಪ್ರಮಾಣ ಹೆಚ್ಚಾಗುತ್ತಿದೆ, ವಾಹನ ಚಾಲನೆಗೆ ಅನೇಕ ಸುರಕ್ಷತಾ ಕ್ರಮಗಳನ್ನು ಕಡ್ಡಾಗೊಳಿಸಿದ್ದರೂ ಸಹ ಸಾರ್ವಜನಿಕರು ಅವುಗಳ ಉಲ್ಲಂಘನೆ ಮಾಡುತ್ತಿರುವುದು ಖೇದದ ಸಂಗತಿ ಎಂದರು.
ಶಾಲಾ ಹಂತದಲ್ಲಿಯೇ ಅರಿವು:ಸಂಚಾರಿ ನಿಯಮಗಳ ಕುರಿತಂತೆ ಮತ್ತು ಅವುಗಳ ಉಲ್ಲಂಘನೆಯಿಂದ ಉಂಟಾಗುವದು ಷ್ಪರಿಣಾಮಗಳ ಬಗ್ಗೆ ಶಾಲಾ ಹಂತದಲ್ಲಿಯೇ ಅರಿವು ಮತ್ತು ಜಾಗೃತಿ ಮೂಡಿಸುವ ಕಾರ್ಯ ಕ್ರಮಗಳಾಗಬೇಕಿದೆ. ಇದರಿಂದ ಮಕ್ಕಳಲ್ಲಿ ರಸ್ತೆ ನಿಯಮಗಳ ಬಗ್ಗೆ ಸ್ವಯಂ ಅರಿವು ಮೂಡಲಿದ್ದು ಅಪಘಾತಗಳ ಸಂಖ್ಯೆ ಕಡಿಮೆಯಾಗಲಿದೆ ಎಂದರು
ಹೆಲ್ಮೆಟ್ ಕಡ್ಡಾಯವಾಗಿ ಬಳಸಿ:ಹೆಚ್ಚಾಗಿ ಯುವ ಜನಾಂಗ ದ್ವಿಚಕ್ರ ವಾಹನ ಅಪಘಾತಕ್ಕೆ ಬಲಿಯಾಗುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಯುವ ಕರೇ ದೇಶದ ಸಂಪತ್ತಾಗಿದ್ದು ಅವರೇ ದುರಂತಗಳಿಗೆ ಹೆಚ್ಚಾಗಿ ಬಲಿಯಾಗುತ್ತಿರುವುದು ದೇಶಕ್ಕೆ ತುಂಬಲಾರದ ನಷ್ಟವಾಗಿದೆ.
ಈ ನಿಟ್ಟಿನಲ್ಲಿ ಹೆಲ್ಮೆಟ್ ಕಡ್ಡಾಯವಾಗಿ ಬಳಸಿ ಮತ್ತು ಎತ್ತಿನಗಾಡಿ, ಚಕ್ಕಡಿ ಸೇರಿದಂತೆ ಇತರೆ ವಾಹನಗಳಿಗೆ ರಾತ್ರಿ ಹೊತ್ತಲ್ಲಿ ಕಾಣುವ ರೀತಿಯಲ್ಲಿ ರೆಡಿಯಂ ಬಳಸಿ ಮತ್ತು ಯಾವು ದೇ ಕಾರಣಕ್ಕೂ ವಾಹನ ಚಲಾಯಿ ಸುವ ಸಂದರ್ಬದಲ್ಲಿ ಮೊಬೈಲ್ ಬಳಸಬೇಡಿ ಮತ್ತು ಮದ್ಯಪಾನ ಮಾಡಿ ವಾಹನ ಚಾಲನೇ ಮಾಡಬೇಡಿ ಎಂದು ಸಲಹೆ ನೀಡಿದರು. ಈದೇ ಸಂದರ್ಬದಲ್ಲಿ ರಸ್ತೆಯಲ್ಲಿ ಸಂಚರಿಸುತ್ತಿದ್ದ ಚಕ್ಕಡಿ, ಟಾಟಾ ಏಸ್ ವಾಹನಗಳಿಗೆ ರೆಡಿಯಂ ಲಗತ್ತಿಸ ಲಾಯಿತು. ಈ ಸಂದರ್ಬದಲ್ಲಿ ಹವಾಲ್ದಾರ ಚಿಕ್ಕಮಠ, ಹನುಮಂತ ಸುಂಕದ, ಸೇರಿದಂತೆ ಶಾಲೆಯ ಶಿಕ್ಷಕ ವರ್ಗ ಉಪಸ್ಥಿ ತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
