ಮೈತ್ರಿ ಸರ್ಕಾರ ಸುಭದ್ರ : ಪರಮೇಶ್ವರ್

ತುಮಕೂರು

        ಡಿ.ಕೆ.‌ಶಿವಕುಮಾರ್‌ ಅವರ ವಿರುದ್ಧ ಕೆಲ ‌ಶಾಸಕರು ಬೇಸರ ವ್ಯಕ್ತಪಡಿಸಿರುವ ವಿಚಾರ ತಿಳಿದಿಲ್ಲ.‌ ಆದರೆ ಬೆಳಗಾವಿಯಲ್ಲಿ ಡಿ.ಕೆ.‌ ಶಿವಕುಮಾರ್ ಅವರ ಹಸ್ತಕ್ಷೇಪ ಬೇಡ ಎಂಬುದು ಅವರ ಒತ್ತಾಯ. ಅದು ಏನೇ ಇದ್ದರೂ ಸಮಸ್ಯೆಯನ್ನು ಆಂತರಿಕವಾಗಿ ಸರಿಪಡಿಸಿಕೊಳ್ಳಲಿದ್ದೇವೆ. ನಮ್ಮ ಸರಕಾರ ಸುಭದ್ರವಾಗಿದೆ ಎಂದರು.

        ತುಮಕೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಧಾನಿ ನೇತೃತ್ವದ ಸಭೆ ಇಂದು ನಡೆಯುತ್ತಿದೆ. ದೇಶದ ಭದ್ರತೆ ದೃಷ್ಟಿಯಿಂದ ಕಠಿಣ ನಿರ್ಧಾರ ತೆಗೆದುಕೊಳ್ಳಬಹುದು ಎಂಬ ನಿರೀಕ್ಷೆ ಇದೆ ಎಂದು ಹೇಳಿದರು.ಲೋಕಸಭೆ ಸೀಟು ಹಂಚಿಕೆ ವಿಚಾರವಾಗಿ ಇನ್ನು ಸಭೆ ನಡೆದಿಲ್ಲ. ಹಾಲಿ ಸಂಸದರಿಗೆ ಸೀಟು ನೀಡಬೇಕೆಂಬುದು ಕೆಲವರ ಅಭಿಪ್ರಾಯವಿದೆ. ತುಮಕೂರಿನಲ್ಲಿ ಸಂಸದ ಮುದ್ದಹನುಮೇಗೌಡ ಅವರಿಗೇ ನೀಡಬೇಕು ಎಂಬುದು‌ ನನ್ನ ಒತ್ತಾಯ ಎಂದು ಹೇಳಿದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link