ಮೈದಾಳ ಕೆರೆಗೆ ಹೇಮಾವತಿ: ಕ್ರಿಯಾ ಯೋಜನೆ ಸಿದ್ಧ

ತುಮಕೂರು

       ಬುಗುಡನಹಳ್ಳಿ ಕೆರೆಯಿಂದ ದೇವರಾಯನಪಟ್ಟಣದ ಮೂಲಕ ಮೈದಾಳ ಕೆರೆಗೆ ಹೇಮಾವತಿ ನೀರು ಹರಿಸಲು 145 ಕೋಟಿ ರೂಗಳ ಕ್ರಿಯಾ ಯೋಜನೆ ಸಿದ್ದಪಡಿಸಿ ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗು ಸರ್ಕಾರಕ್ಕೆ ಅನುಮೋದನೆಗಾಗಿ ಸಲ್ಲಿಸಲಾಗಿದೆ ಎಂದು ಶಾಸಕ ಡಿ ಸಿ ಗೌರೀಶಂಕರ್ ತಿಳಿಸಿದರು

     ಊರ್ಡಿಗೆರೆ ಜಿಲ್ಲಾ ಪಂಚಾಯ್ತಿ ವ್ಯಾಪ್ತಿಯಲ್ಲಿ ಏಳು ಕೋಟಿ ವೆಚ್ಚದ ವಿವಿಧ ಅಭಿವೃದ್ದಿ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದರು.
ಬುಗುಡನಹಳ್ಳಿ ಕೆರೆಯಿಂದ ದೇವರಾಯ ಪಟ್ಟಣ ಮಾರ್ಗವಾಗಿ ಮೈದಾಳ ಕೆರೆಗೆ ಹೇಮಾವತಿ ನೀರು ಹರಿಸಲು ಯೋಜನೆ ಸಿದ್ದಪಡಿಸಲಾಗಿದೆ ,ಮೈದಾಳ ಕೆರೆಯಿಂದ ಬೆಳಗುಂಬ ಹಾಗೂ ಊರ್ಡಿಗೆ ಜಿಲ್ಲಾ ಪಂಚಾಯ್ತಿ ವ್ಯಾಪ್ತಿಗೋಳಪಡುವ 120 ಹಳ್ಳಿಗಳಿಗೆ ಶುದ್ದ ಕುಡಿಯುವ ನೀರು ನೀಡುವುದು ಈ ಯೋಜನೆ ಉದ್ದೇಶ ,

      ಈ ಯೋಜನೆ ಸಂಬಂಧ ಕ್ರಿಯಾಯೋಜನೆ ಸಿದ್ದಪಡಿಸಿ ಅನುಮೋಧನೆ ಗಾಗಿ ಸರ್ಕಾರಕ್ಕೆ ಸಲ್ಲಿಸಲಾಗಿದೆ ಅತೀ ಶೀಘ್ರವಾಗಿ ಈ ಯೋಜನೆಗೆ ಮುಖ್ಯಮಂತ್ರಿ ಕುಮಾರಸ್ವಾಮಿಯವರಿಂದ ಶಂಕುಸ್ತಾಪನೆ ಮಾಡಿಸಲಾಗುವುದು ಎಂದರು ಊರ್ಡಿಗೆರೆ ಹೋಬಳಿ ಅಭಿವೃದ್ದಿಗಾಗಿ ಮುಖ್ಯಮಂತ್ರಿಗಳ ವಿಶೇಷ ಅನುಧಾನದಡಿ 10 ಕೋಟಿ ಬಿಡುಗಡೆಗೊಳಿಸಿದ್ದಾರೆ,ಎಲ್ಲಾ ಹಳ್ಳಿಗಳಲ್ಲಿ ಸಿಸಿ,ರಸ್ತೆ ಡಾಂಬರೀಕರಣ ಸೇರಿದಂತೆ 9 ಕೋಟಿ ಹಣವನ್ನು ಗ್ರಾಮಗಳ ಅಭಿವೃದ್ದಿಗೆ ಮೀಸಲಿಡಲಾಗುವುದು ಎಂದರು

      ಐದು ವರ್ಷಗಳಲ್ಲಿ ಗ್ರಾಮಾಂತರ ಭಾಗದಲ್ಲಿ ಜೆಡಿಎಸ್ ಕಾರ್ಯಕರ್ತರು ಹೆಮ್ಮೆಯಿಂದ ಹೇಳುವಂತ ಕೆಲಸ ಮಾಡುತ್ತೇನೆ, ಎಸ್ ಸಿಪಿ ಯೋಜನೆಯಡಿ ಸಾತಘಟ್ಟ ಕಾಲೋನಿಗೆ 25 ಲಕ್ಷ ಅನುದಾನ ಮಂಜೂರಾಗಿದ್ದು ರಸ್ತೆ ಅಭಿವೃದ್ದಿಪಡಿಸಲಾಗುವುದು ಮುಸ್ಲಿಂ ಕಾಲೋನಿ ಅಬೀವೃದ್ದಿಪಡಿಸಲು ಒಂದು ಕೋಟಿ ಅನುದಾನ ನೀಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ,ಸರ್ಕಾರ ಒಪ್ಪಿದೆ ಮೊದಲನೆ ಕಂತಿನಲ್ಲಿ ಮಾರ್ಚಿ ಅಥವಾ ಏಪ್ರಿಲ್ ತಿಂಗಳಲ್ಲಿ 50ಲಕ್ಷ ಮಂಜೂರಾಗಲಿದೆ ನನ್ನ ಅವಧಿಯಲ್ಲಿ ಈಗ್ರಾಮವನ್ನು ಸಂಪೂರ್ಣವಾಗಿ ಅಭಿವೃದ್ದಿ ಪಡಿಸುವುದಾಗಿ ಭರವಸೆ ನೀಡಿದರು

      ದೇವರಾಯನ ದುರ್ಗದಲ್ಲಿ ರಸ್ತೆ ಅಭಿವೃದ್ದಿಕಾಮಗಾರಿಗಳಿಗೆ 11 ಕೋಟಿ ಮೀಸಲಿಡಲಾಗಿದೆ , ದೇವಸ್ತಾನದ ಸುತ್ತಮುತ್ತಲಿನ ರಸ್ತೆಗಳು,ನಾಮದ ಚಿಲುಮೆಯಿಂದ ದೇವರಾಯನ ದುರ್ಗದ ಬೆಟ್ಟದವರೆಗಿನ ಸಿಸಿ ರಸ್ತೆ ಹಾಗು ಚರಂಡಿ ಕಾಮಗಾರಿ, ದೇವರಾಯನ ದುರ್ಗದ ತೇರು ಬೀದಿ ಸಿ ಸಿ ರಸ್ತಯೆಗೆ 1 ಕೋಟಿ ಹಣ ಅನುದಾನ ಮಂಜೂರಾಗಿದೆ , ಜಾತ್ರೆ ಅಂಗವಾಗಿ ಅಧಿಕಾರಿಗಳ ಜೊತೆ ಸಮಾಲೋಚಿಸಿದ ಶಾಸಕರು ಕುಡಿಯುವ ನೀರಿನ ಸಮಸ್ಯೆ ತಲೆದೋರದಂತೆ ಎಚ್ಚರಿಕೆ ವಹಿಸುವಂತೆ ತಾಕೀತು ಮಾಡಿದ್ದಲ್ಲದೆ ದೇವರಾಯನದುರ್ಗದಲ್ಲಿ ಶೌಚಾಲಯ ಹಾಗು ಸ್ನಾನ ಗೃಹ ನಿರ್ಮಾಣಕ್ಕೆ 35 ಲಕ್ಷಮಂಜೂರಾಗಿದ್ದು ಕಾಮಗಾರಿ ಆರಂಬಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು,ಬಯಲಾಂಜನೇಯಸ್ವಾಮಿ ದೇವಸ್ತಾನ ನಿರ್ಮಾಣಕ್ಕೆ 35 ಲಕ್ಷ ಅನುದಾನ ಮಂಜೂರಾಗಿದ್ದು ಸ್ತಳೀಯ ಮುಖಂಡರ ಜತೆ ಶಂಕುಸ್ಥಾಪನೆ ನೆರವೇರಿಸಿದರು

         ಸಮಾರಂಭದಲ್ಲಿ ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಹಾಲನೂರು ಅನಂತಕುಮಾರ್,ತಾಲ್ಲೂಕು ಯುವ ಅಧ್ಯಕ್ಷ ಸುವರ್ಣಗಿರಿಕುಮಾರ್,ಎಸ್ ಸಿ ಘಟಕದ ಜಿಲ್ಲಾಪ್ರಧಾನ ಕಾರ್ಯದರ್ಶಿ ಬೆಳಗುಂಬವೆಂಕಟೇಶ್, ಊರ್ಡಿಗೆರೆ ಹೋಬಳಿ ಅಧ್ಯಕ್ಷ ವಿಷ್ಣುವರ್ಧನ್, ತಾಲ್ಲುಕು ಕಾರ್ಯಾಧ್ಯಕ್ಷ ನಾರಾಯಣ ಗೌಡ್ರು, ಜೆಡಿಎಸ್ ಮಹಿಳಾಧ್ಯಕ್ಷೆ ಶಾಂತಸುರೇಶ್, ಗ್ರಾಮ ಪಂಚಾಯ್ತಿ ಸದಸ್ಯರಾದ ವರಲಕ್ಷ್ಮಿಯಲ್ಲಪ್ಪ, ಚಂದ್ರಕಲಾಮಂಜಣ್ಣ, ವೇಂಕಟೇಶ್,ಶಿವಣ್ಣ,ಲಕ್ಷ್ಮಿ ಇತರರು ಉಪಸ್ಥಿತರಿದ್ದರು

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link