ಕೇಂದ್ರದಲ್ಲಿ ಮತ್ತೆ ಬಿಜೆಪಿ ಸರ್ಕಾರ : ತಿಪ್ಪಾರೆಡ್ಡಿ

ಚಿತ್ರದುರ್ಗ:

       ನಮ್ಮ ಪರಿವಾರ್ ಬಿಜೆಪಿ.ಪರಿವಾರ್ ಅಭಿಯಾನದ ಅಂಗವಾಗಿ ದೇಶಾದ್ಯಂತ ಸುಮಾರು ಹದಿನೈದು ಕೋಟಿ ಕಾರ್ಯಕರ್ತರು ಹಾಗೂ ಮುಖಂಡರುಗಳ ಮನೆಗಳ ಮೇಲೆ ಬಿಜೆಪಿ.ಭಾವುಟ ಹಾರಾಡುತ್ತಿದೆ ಎಂದು ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ತಿಳಿಸಿದರು.

       ತಮ್ಮ ಮನೆಯ ಮೇಲೆ ಶನಿವಾರ ಬಿಜೆಪಿ.ಭಾವುಟ ಹಾರಿಸಿ ಮಾತನಾಡಿದ ಶಾಸಕರು ನರೇಂದ್ರಮೋದಿ ಮತ್ತೊಮ್ಮೆ ಭಾರತದ ಪ್ರಧಾನಿಯಾಗಬೇಕಾಗಿರುವುದರಿಂದ ಫೆ.12 ರಿಂದ ಆರಂಭವಾಗಿರುವ ನಮ್ಮ ಪರಿವಾರ್ ಬಿಜೆಪಿ.ಪರಿವಾರ್ ಅಭಿಯಾನ ಮಾ.2ರವರೆಗೆ ದೇಶಾದ್ಯಂತ ನಡೆಯಲಿದೆ.

        ಜಿಲ್ಲೆಯಾದ್ಯಂತ ಪ್ರತಿಯೊಬ್ಬ ಬಿಜೆಪಿ.ಕಾರ್ಯಕರ್ತರು ಹಾಗೂ ಮುಖಂಡರುಗಳು ನಿಮ್ಮ ನಿಮ್ಮ ಮನೆಗಳ ಮೇಲೆ ಬಿಜೆಪಿ.ಭಾವುಟವನ್ನು ಹಾರಿಸಿ ನರೇಂದ್ರಮೋದಿಯನ್ನು ಮತ್ತೊಮ್ಮೆ ದೇಶದ ಪ್ರಧಾನಿಯನ್ನಾಗಿ ಮಾಡಿ ಎಂದು ವಿನಂತಿಸಿದರು.ಮನೆ ಮನೆಗೆ ಸ್ಟಿಕರ್‍ಗಳನ್ನು ಅಂಟಿಸುವ ಕೆಲಸವನ್ನು ಕಾರ್ಯಕರ್ತರು ಮಾಡಬೇಕು. ದೇಶಾದ್ಯಂತ ನಾಲ್ಕುವರೆ ಸಾವಿರ ಕ್ಷೇತ್ರಗಳಲ್ಲಿ ಫೆ.28 ರಂದು ಮೋದಿ ನೇರ ಸಂವಾದವಿರುತ್ತದೆ. 27 ರಂದು ಶಕ್ತಿ ಕೇಂದ್ರದ ಕಾರ್ಯಕ್ರಮ. ಮಾ.2 ರಂದು ದೇಶಾದ್ಯಂತ ಏಕಕಾಲಕ್ಕೆ ಬೈಕ್‍ರ್ಯಾಲಿ ನಡೆಸಲಾಗುವುದು. 27 ರಂದು ಶಕ್ತಿ ಕೇಂದ್ರದ ಪ್ರಮುಖರ ಸಭೆ ನಡೆಸುವ ಸಂಬಂಧ 25 ರಂದು ಚಿತ್ರದುರ್ಗದಲ್ಲಿ ಪೂರ್ವಭಾವಿಯಾಗಿ ಸಭೆ ಕರೆಯಲಾಗಿದೆ. ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ಕೋರಿದರು.

       ವಿಭಾಗೀಯ ಸಹ ಪ್ರಭಾರಿ ಜಿ.ಎಂ.ಸುರೇಶ್ ಮಾತನಾಡಿ ದೇಶಾದ್ಯಂತ ಬಿಜೆಪಿ.ಅಲೆ ಎದ್ದಿರುವುದರಿಂದ ನಮ್ಮ ಪರಿವಾರ್ ಬಿಜೆಪಿ.ಪರಿವಾರ್ ಅಭಿಯಾನದ ಅಂಗವಾಗಿ ಪಕ್ಷದ ಕಾರ್ಯಕರ್ತರು ಮುಖಂಡರುಗಳು ತಮ್ಮ ತಮ್ಮ ಮನೆಗಳ ಮೇಲೆ ಬಿಜೆಪಿ.ಭಾವುಟವನ್ನು ಹಾರಿಸುವ ಮೂಲಕ ಮತ್ತೊಮ್ಮೆ ನರೇಂದ್ರಮೋದಿರವರನ್ನು ದೇಶದ ಪ್ರಧಾನಿಯನ್ನಾಗಿಸಬೇಕೆಂದು ವಿನಂತಿಸಿದರು.

        ನಾಳೆ ಪ್ರಧಾನಿ ನರೇಂದ್ರಮೋದಿರವರ ಮನ್‍ಕಿಬಾತ್ ಕೊನೆಯ ಕಾರ್ಯಕ್ರಮ ಪ್ರಸಾರವಾಗಲಿದೆ. ನಿಮ್ಮ ನಿಮ್ಮ ಗ್ರಾ.ಪಂ., ವಾರ್ಡ್‍ಗಳಲ್ಲಿ ಮನ್‍ಕಿ ಬಾತ್ ಭಾಷಣವನ್ನು ತಪ್ಪದೆ ಕೇಳಿಸಿಕೊಳ್ಳಿ. 26 ರಂದು ಕಮಲಜ್ಯೋತಿ, ಪ್ರಧಾನಿ ಮೋದಿರವರಿಂದ ಹದಿನೆಂಟು ಸಾವಿರ ಹಳ್ಳಿಗಳಿಗೆ ವಿದ್ಯುತ್, ಉಜ್ವಲ ಯೋಜನೆಯಡಿ ಗ್ಯಾಸ್ ವಿತರಣೆ ಮಾಡಿದ್ದಾರೆ.

       ಇನ್ನು ಅನೇಕ ಕಾರ್ಯಕ್ರಮಗಳನ್ನು ಮಾಡುವ ಅವಕಾಶವಿರುವುದರಿಂದ ಮೋದಿಗೆ ಮತ್ತೊಮ್ಮೆ ಕಾರ್ಯಕರ್ತರು ಆಶೀರ್ವದಿಸಿ ದೇಶದ ಪ್ರಧಾನಿಯನ್ನಾಗಿ ಮಾಡಬೇಕಿದೆ ಎಂದು ಹೇಳಿದರು.ಪ್ರಧಾನ ಕಾರ್ಯದರ್ಶಿ ಮುರಳಿ, ರತ್ನಮ್ಮ, ನಾಗರಾಜ್‍ಬೇದ್ರೆ, ದಗ್ಗೆಶಿವಪ್ರಕಾಶ್, ನರೇಂದ್ರ, ಶಿವಣ್ಣಾಚಾರ್, ನವೀನ್ ಚಾಲುಕ್ಯ, ಜಿತೇಂದ್ರ, ನಗರಾಧ್ಯಕ್ಷ ತಿಪ್ಪೇಸ್ವಾಮಿ, ಸುರೇಶ್‍ಸಿದ್ದಾಪುರ, ರೇಖ, ನಗರಸಭೆ ಸದಸ್ಯರುಗಳಾದ ಸುರೇಶ್, ರೋಹಿಣಿ ನವೀನ್, ಹರೀಶ್, ಶಶಿಧರ, ಅನುರಾಧ ರವಿಶಂಕರ್, ಯಶವಂತ್, ಶಂಭು, ಅನಿಲ್, ಸತ್ಯನಾರಾಯಣ, ಕಲ್ಲೇಶಯ್ಯ, ಸಾಗರ್, ಅಭಿಲೇಶ್, ನಗರಸಭೆ ಮಾಜಿ ಸದಸ್ಯ ಮಹೇಶ್, ಗುತ್ತಿಗೆದಾರ ಈ.ಶಿವಕುಮಾರ್ ಸೇರಿದಂತೆ ನೂರಾರು ಕಾರ್ಯಕರ್ತರು ಈ ಸಂದರ್ಭದಲ್ಲಿ ಹಾಜರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap