ಶ್ರೀ ಗುರು ಪುಟ್ಟರಾಜ ಪುರಸ್ಕಾರ-2019

ಹಾವೇರಿ :

       ಗಾನ ಗಂಧರ್ವ ಕಲಾ ಟ್ರಸ್ಟ್ ಗದಗ ಹಾಗೂ ಡಾ. ಪಂ. ಪುಟ್ಟರಾಜ ಗವಾಯಿಗಳವರ ಆಶ್ರಮ ದೇವಗಿರಿಯವರ ಸಹಯೋಗದಲ್ಲಿ ಪದ್ಮಭೂಷಣ ಡಾ. ಪಂ. ಪುಟ್ಟರಾಜ ಕವಿ ಗವಾಯಿಗಳವರ 105ನೇ ಜಯಂತ್ಯೋತ್ಸವ ಹಾಗೂ ಶ್ರೀ ಗುರು ಪುಟ್ಟರಾಜ ಪುರಸ್ಕಾರ-2019, ಪ್ರಸಿದ್ಧ ಸಂಗೀತ ಕಲಾವಿದರಿಂದ ಗಾನ ಗಂಧರ್ವನಿಗೆ ನುಡಿನಮನ ಸಂಗೀತ ಸಮಾರೋಹ, ಸಾಮೂಹಿಕ ವಿವಾಹ ದಿ, 03 ರಂದು ನಡೆಯಲಿದೆ.

       ಬೆಳಿಗ್ಗೆ 08 ಘಂಟೆಗೆ ದೇವಗಿರಿಯ ಪ್ರಮುಖ ಬಿದಿಗಳಲ್ಲಿ ಪೂಜ್ಯರ ಭಾವಚಿತ್ರ ಮೆರವಣಿಗೆ, ಮಹಿಳೆಯರಿಂದ ಕುಂಭೋತ್ಸವ, ಜನಪದ ತಂಡಗಳು, ಹಲವಾರು ಬಗೆಯ ಪ್ರದರ್ಶನಗಳೊಂದಿಗೆ ಮೆರವಣಿಗೆ. 10-00 ಘಂಟೆಗೆ ದೇವಗಿರಿಯ ಶ್ರೀ ಪುಟ್ಟರಾಜ ಗವಾಯಿಗಳವರ ಆಶ್ರಮದಲ್ಲಿ ರಾಷ್ಟ್ರಮಟ್ಟದ ಮತ್ತು ನಾಡಿನ ಸುಪ್ರಸಿದ್ಧ ಸಂಗೀತ ಕಲಾವಿದರಿಂದ ಗಾನ ಗಾರುಡಿಗನಿಗೆ ನುಡಿನಮನ ಸಂಗೀತ ಮತ್ತು ಸಂಸ್ಕತ ಕಾರ್ಯಕ್ರಮಗಳು ಪ್ರಾರಂಭಗೊಳ್ಳಲಿವೆ.

       ಸಾನಿಧ್ಯವನ್ನು ಷ. ಬ್ರ. ಶಂಭುಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು, ಹೋತನಹಳ್ಳಿ ವಹಿಸುವರು, ಮಾಲತೇಶ ತಿರಕಣ್ಣವರ ಅಧ್ಯಕ್ಷತೆಯಲ್ಲಿ ಡಾ. ಪುಟ್ಟರಾಜ ಗವಾಯಿಗಳವರ ದೇವಗಿರಿ ಆಶ್ರಮದ ಅಧ್ಯಕ್ಷರಾದ ಕುಮಾರಸ್ವಾಮಿ ಗಡ್ಡದಮಠರ ಉಪಸ್ಥಿತಿಯಲ್ಲಿ ಕರ್ನಾಟಕ ಸಂಗೀತ ಮತ್ತು ನೃತ್ಯ ಅಕಾಡಮಿಯ ಅಧ್ಯಕ್ಷ ಉಸ್ತಾದ ಫಯಾಜಖಾನ ಇವರು ದೀಪ ಬೆಳಗಿಸುವರೊಂದಿಗೆ ಸಂಗೀತ ಕಾರ್ಯಕ್ರಮದ ಉದ್ಘಾಟನೆ ಮಾಡುವರು.

       ಮುಖ್ಯ ಅತಿಥಿಗಳಾಗಿ ಉದ್ಯಮಿ ಆರ್ ಪ್ರತಾಪ, ಎಂ. ಎಸ್. ಹಿರೇಮಠ, ಸೊಂಡೂರು, ದೇವಗಿರಿ ಗ್ರಾ. ಪಂ. ಅಧ್ಯಕ್ಷೆ ಶ್ರೀಮತಿ ಅನಸೂಯಾ ಚನ್ನವೀರಪ್ಪನವರ, ದೇವಗಿರಿ ಗ್ರಾ. ಪಂ. ಉ. ಅಧ್ಯಕ್ಷ ಸಿದ್ರಾಮೇಶ ಪುರದ, ಹಾವೇರಿ ಎ. ಪಿ. ಎಂ. ಸಿ. ಉ ಅಧ್ಯಕ್ಷ ಸಣ್ಣಪ್ಪ ಮಾಳಿ, ಸಂಕನಗೌಡ ಜೇಕನಕಟ್ಟಿ, ಹೊಳಿಯಪ್ಪ ಕಲ್ಲೆದೇವರ, ದುಂಡಪ್ಪ ಪುರದ, ಪ್ರಭಾಕರರಾವ್ ಮಂಗಳೂರು, ಗಾನ ಗಂಧರ್ವ ಕಲಾ ಟ್ರಸ್ಟ್ ಅಧ್ಯಕ್ಷ ಎಂ. ಎಂ. ಶಿರೋಳಮಠ ಭಾಗವಹಿಸುವರು.

        ಬೆಳಿಗ್ಗೆ 10-00 ಘಂಟೆಗೆ ಸಂಗೀತ ಕಾರ್ಯಕ್ರಮದಲ್ಲಿ ನಾಡಿನ ಪ್ರಸಿದ್ದ ಸಂಗೀತಗಾರ ಉಸ್ತಾದ ಫಯಾಜಖಾನ ಗಾಯನ, ಪಂ. ಸದಾಶಿವ ಪಾಟೀಲ ಸುಗಮ ಸಂಗೀತ, ಗುಜರಾತಿನ ಗುರುನಾಥ ಮುಜುಮದಾರ, ಪಂ. ಹುಮಾಯುನ ಹರ್ಲಾಪೂರ, ಪಂ. ಸದಾಶಿವ ಐಹೋಳಿ, ಶಿವಬಸಯ್ಯ ಗಡ್ಡದಮಠ, ಗಾಯನ ಕಾರ್ಯಕ್ರಮ ನೀಡುವರು, ನಾರಾಯಣ ಹಿರೇಕೊಳಚಿ ವಾಯೋಲೀನ್, ಯುವ ಗಾಯಕ ಅಯ್ಯಪ್ಪಯ್ಯ ಹಲಗಲಿಮಠ ಗಾಯನ ವೆಂಕಟೇಶ ಹಾನಗಲ್ಲ ಗಾಯನ, ಇಂಗ್ಲೆಂಡಿನ ಮಾರ್ಕಸ್ ಗಿಟಾರ, ರಾಮಾಂಜನೇಯಲು ಕ್ಲಾರಿಯೋನೆಟ್, ವೀಣಾ ಬಡಗೇರ ಗಾಯನ, ಶ್ರೀಮತಿ ಎ. ಎಂ. ಆರ್. ಮಹೇಶ್ವರಿ ಸುಗಮ ಸಂಗೀತ, ರಮೇಶ ಕೊಲಕುಂದ, ರವಿಕುಮಾರ ಢಗೆ, ಶರದಿ ಕುಣೇಕಲ್ಲ ಗಾಯನ, ಮಲ್ಲಿಕಾರ್ಜುನ ಹರ್ತಿ ಶಹನಾಯಿ, ಮಹೇಶ ಪೂಜಾರಿ ಗಾಯನ, ಅರವಿಂದ ಎಸ್. ಕೆ. ಸಿತಾರ, ವೀರಭದ್ರ ಬೆನಕನಾಳ, ನಾಗಯ್ಯ ಹಿರೇಮಠ ಸುಗಮ ಸಂಗೀತ ಕಾರ್ಯಕ್ರಮ ನೀಡುವರು. ಗದುಗಿನ ಶರಣಕುಮಾರ ಗುತ್ತರಗಿ, ಮೃತ್ಯುಂಜಯ ಮಠದ, ಹನುಮಂತ ಕೊಡಗಾನೂರ, ಸೋಮಶೇಖರ ಸಾಖೆ, ಸದಾಶಿವ ಸಪ್ಪಡ್ಲ ತಬಲಾಸಾಥ ನಿಡುವರು, ಶ್ರೀಶೈಲ ಚಿಕ್ಕಮಠ, ಧಾರವಾಡದ ಬಸವರಾಜ ಹಿರೇಮಠ ಹಾರ್ಮೋನಿಯಂ ಸಾಥ ನೀಡುವರು, ಶ್ರೀ ಶರಣಬಸವಶಾಸ್ತ್ರಿ ಇಲಕಲ್ಲ ಶಿವಕೀರ್ತನೆ, ರಾಘವೇಂದ್ರ ಮಿಶನ್ನವರ ಮಿಮಿಕ್ರಿ, ಕೃತಿಕಾ ಮಂಗಳೂರ ಮತ್ತು ಲಕ್ಷ್ಮಿ ಹುರಳಿಕುಪ್ಪಿ ಭರತನಾಟ್ಯ ಕಾರ್ಯಕ್ರಮ ನೀಡುವರು.

        ಸಾಯಂಕಾಲ 5-30 ಘಂಟೆಗೆ ಶ್ರೀ ಗುರು ಪುಟ್ಟರಾಜ ಪುರಸ್ಕಾರ – 2019 ಸಮಾರಂಭದ ದಿವ್ಯಸಾನಿಧ್ಯವನ್ನು ನಿರಂಜನ ಪ್ರಭು ಡಾ. ಚನ್ನಮಲ್ಲ ಮಹಾಸ್ವಾಮಿಗಳು ಸುವರ್ಣಗಿರಿ ಸಂಸ್ಥಾನ ವಿರಕ್ತಮಠ (ಕಲ್ಮಠ) ಕನಕಗಿರಿ ವಹಿಸುವರು. ಸಾನಿಧ್ಯವನ್ನು ಹೊಸರಿತ್ತಿ ಗುದ್ದಲೀಶ್ವರ ಮಠದ ಶ್ರೀ ಮ.ನಿ.ಪ್ರ. ಗುದ್ದಲೀಶಿವಯೋಗೀಶ್ವರ ಮಹಾಸ್ವಾಮಿಗಳು ಸಮು್ಮುಖ ಶ್ರೀ ಷ. ಬ್ರ. ಶಂಭುಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ವಹಿಸುವರು ಸಮಾರಂಭದ ಉದ್ಘಾಟನೆಯನ್ನು ಹಾನಗಲ್ಲಿನ ಜನಪ್ರಿಯ ಶಾಸಕರಾದ ಹಿರಿಯ ರಾಜಕಾರಣಿ ಸಿ. ಎಂ. ಉದಾಸಿಯವರು ಮಾಡುವರು ಅಧ್ಯಕ್ಷತೆಯನ್ನು ದೇವಗಿರಿಯ ಪುಟ್ಟರಾಜ ಗವಾಯಿಗಳ ಆಶ್ರಮದ ರೂವಾರಿಗಳು ಹಾಗೂ ಮಾಜಿ ಶಾಸಕರಾದಶಿವರಾಜ ಸಜ್ಜನರ ಮತ್ತು ಟ್ರಸ್ಟಿನ ಅಧ್ಯಕ್ಷರಾದ ಬಿ. ಎಂ. ಜಿತೇಂದ್ರನಾಥ ವಹಿಸುವರು ಮುಖ್ಯ ಅತಿಥಿಗಳಾಗಿ ಸಚಿವರಾದ ಸನ್ಮಾನ್ಯ ಜಮೀರ ಅಹ್ಮದ, ಹಾವೇರಿ ಸಂಸದರಾದ ಶಿವುಕುಮಾರ ಉದಾಸಿ, ಬ್ಯಾಡಗಿ ಶಾಸಕರಾದ ವಿರುಪಾಕ್ಷಪ್ಪ ಬಳ್ಳಾರಿ, ಹಾವೇರಿ ಜಿ. ಪಂ. ಅಧ್ಯಕ್ಷ ಎಸ್. ಕೆ. ಕರಿಯಣ್ಣವರ, ಜಿ. ಪಂ. ಸದಸ್ಯ ವಿರುಪಕ್ಷ ಕಡ್ಲಿ, ತಾಲೂಕ ಪಂಚಾಯತ ಸದಸ್ಯ ಸತೀಶ ಸಂದಿಮನಿ, ಹಾವೇರಿ ಜಿಲ್ಲಾ ಕನ್ನಡ ಮತ್ತು ಸಂಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಆರ್. ವಿ. ಚಿನ್ನಿಕಟ್ಟಿ, ಗದುಗಿನ ಉದ್ಯಮಿಗಳಾದ ರಾಜು ಗುಡಿಮನಿ, ಸದು ಮದರಿಮಠ, ಸಿದ್ಧಲಿಂಗೇಶ ಮೂರಶಿಳ್ಳಿನ, ವಿನಾಯಕ ಪಾಟೀಲ, ರವಿ ಹೊನ್ನಗುಡಿ, ಆನಂದ ಸರ್ವದೆ ಭಾಗವಹಿಸುವರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link