ರಮ್ಯಾಗೆ ಚಳಿಬಿಡಿಸಿದ ನೆಟ್ಟಿಗರು..!!!

ಬೆಂಗಳೂರು:

       ನರೇಂದ್ರ ಮೋದಿಯನ್ನು ಹಿಂಬಾಲಿಸುವವರು ಮೂರ್ಖರು ಎಂದು ಹೇಳಿ ವಿವಾದ ಸೃಷ್ಠಿಸಿದ್ದ ಮಾಜಿ ಸಂಸದೆ ರಮ್ಯಾಗೆ  ಬಿಜೆಪಿ ಮುಖಂಡ ಜಗ್ಗೇಶ್ ಮತದಾನವನ್ನೇ ಮಾಡದವರು ಮತದಾನದ ಜಾಗೃತಿ ಮೂಡಿಸುತ್ತಿರುವುದು ಎಂತಹ ವಿಪರ್ಯಾಸ ಎಂದು ಟಾಂಗ್ ನೀಡಿದ್ದಾರೆ.

 
      ಲೋಕಸಭೆ ಚುನಾವಣೆ ಸಮೀಸುತ್ತಿರುವ ಬೆನ್ನಲೇ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಸಕ್ರಿಯವಾಗಿರುವ ರಮ್ಯಾ ಅಂಡ್ ಟೀಂ ದಿನದ 24 ಗಂಟೆ ದುಡಿಯುತ್ತಿದ್ದಾರೆ ಅದರ ಭಾಗವಾಗಿ  ಹೊಸ ಮತದಾರರಿಗೆ ಜಾಗೃತಿ ಮೂಡಿಸುವ ಸಲುವಾಗಿ ಟ್ಮಾವೀಟ್ಡು ಮಾಡಿದ ರಮ್ಯ  ನಿಮ್ಮ ಹೆಸರು ನೊಂದಾಯಿಸಿ ಎಂದು ತಮ್ಮ ಟ್ವೀಟರ್ ನಲ್ಲಿ ಜಾಗೃತಿ ಮೂಡಿಸಿದ್ದರು. ಈ ವಿಚಾರವಾಗಿ ಭಾರೀ ಟೀಕೆಗಳು ವ್ಯಕ್ತವಾಗುತ್ತಿವೆ.
       ಜಗ್ಗೇಶ್ ಅವರು ಕಳೆದ ವಿಧಾನಸಭೆ ಹಾಗೂ ಲೋಕಸಭೆಯ ಉಪಚುನಾವಣೆಯಲ್ಲಿ ಮತದಾನ ಮಾಡದ ನೀವು, ಈಗ ಯಾವ ಮುಖ ಇಟ್ಟುಕೊಂಡು ಮತದಾನದ ಜಾಗೃತಿ ಮೂಡಿಸುತ್ತಿದ್ದೀರಾ ಎಂದು ರಮ್ಯ ಅವರನ್ನು ತರಾಟೆ ತೆಗೆದುಕೊಂಡಿದ್ದಾರೆ.
      ಜಗ್ಗೇಶ್ ಕೂಡ ಸಾಮಾಜಿಕ ಜಾಲತಾಣ ಟ್ರೋಲಿಗರಿಗರ ಪರ ನಿಂತು ರಮ್ಯಾ ಅವರಿಗೆ ಮಾತಿನ ಚಾಟಿ ಬೀಸಿದ್ದಾರೆ. ಆಕೆ ಮಾನಸಿಕ ಅಸ್ವಸ್ಥೆ . ಯಾರಿಗೆ ವಂಶವಾಹಿನಿ ಅರಿವಿರುತ್ತದೋ ಅವರು ಜವಾಬ್ದಾರಿಯುತ ಮನುಷ್ಯರಾಗಿರುತ್ತಾರೆ, ಮನುಷ್ಯರಿಗೆ ಬುದ್ಧಿ ಹೇಳಬಹುದೆ ಹೊರತು ಮೃಗಕ್ಕಲ್ಲ ಎಂದು ಟ್ವೀಟ್ ನಲ್ಲಿ ಹೇಳುವ ಮೂಲಕ ಟೀಕಿಸಿದ್ದಾರೆ .
   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link