ಹೊಸದಿಲ್ಲಿ:
17 ವರ್ಷದ ಬಾಲಕನೊಬ್ಬ ಮೂರು ವರ್ಷದ ಹಿಂದೆ ಮಾಡಿದ್ದ ಅಪಮಾನಕ್ಕೆ ಹತ್ಯೆ ಮೂಲಕ ಸೇಡು ತೀರಿಸಿಕೊಂಡ ಕರಾಳ ಘಟನೆ ನಡೆದಿದ್ದು, ಕೃತ್ಯ ನಡೆದ ಕೆಲವೇ ಗಂಟೆಗಳಲ್ಲಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಮೂರು ವರ್ಷದ ಹಿಂದೆ 14 ವರ್ಷದವನಿದ್ದ ಬಾಲಕ ಟ್ಯೂಷನ್ ಕ್ಲಾಸ್ನಲ್ಲಿ 11 ವರ್ಷದ ಹುಡುಗಿಯೊಬ್ಬಳ ಮುಂದೆ ಪ್ರೇಮಿಸುವುದಾಗಿ ಹೇಳಿಕೊಂಡಿದ್ದಾನೆ. ಅದಕ್ಕೊಪ್ಪದ ಬಾಲಕಿ ಶಿಕ್ಷಕಿ ಬಳಿ ದೂರು ನೀಡಿದ್ದಳು. ಶಿಕ್ಷಕಿ ಬಾಲಕನಿಗೆ ಇನ್ನು ಹೀಗೆ ಮಾಡಬೇಡ ಎಂದು ಬೈದಿದ್ದರು. ಇದು ಆತನಿಗೆ ಬಹಳ ಅವಮಾನ ಮಾಡಿತು. ಪ್ರತೀಕಾರ ತೀರಿಸಿಕೊಳ್ಳಬೇಕು ಎಂದು ನಿರ್ಧರಿಸಿದ ಆತ ಆಕೆ ಬಳಿ ಕ್ಷಮೆಯ ಕೇಳುವ ನಾಟಕವಾಡಿದನು. ಕೊನೆಗೊಂದು ದಿನ ಬಾಲಕಿ ಅವನನ್ನು ಕ್ಷಮಿಸಿದಳು. ಬಳಿಕ ಆಕೆ ಅವನೊಂದಿಗೆ ಸ್ನೇಹದಿಂದಿದ್ದಳು.
ಮತ್ತೀಗ ಬಾಲಕಿ 14 ವರ್ಷದವಳಾಗಿದ್ದು ಅವರಿಬ್ಬರು ಆಗಾಗ ಭೇಟಿಯಾಗುತ್ತಿದ್ದರು. ಬಾಲಕಿ ದೊಡ್ಡ ಉದ್ಯಮಿಯ ಮಗಳಾಗಿದ್ದು ಆಕೆಯನ್ನು ಅಪಹರಿಸಿ, ಅವಳ ತಂದೆಯಿಂದ ಹಣ ದೋಚಲು ಆತ ಸಂಚು ಮಾಡಿದ್ದ
ಶನಿವಾರ ಸಂಜೆ ಅವರಿಬ್ಬರು ಭೇಟಿಯಾಗಿದ್ದು ಸಿನಿಮಾಗೆ ಹೋಗಲು ನಿರ್ಧರಿಸಿದರು. ಮೆಟ್ರೊ ಇಳಿದು ಸಿನಿಮಾ ನೋಡಲು ಹೋಗುತ್ತಿದ್ದಾಗ ಸ್ವಲ್ಪ ಹೊತ್ತು ಅಡ್ಡಾಡಿಕೊಂಡು ಹೋಗೋಣ ಎಂದು ಪುಸಲಾಯಿಸಿದ ಆತ ಹಳೆಯ ಕಟ್ಟಟವೊಂದಕ್ಕೆ ಕರೆದೊಯ್ದು ಮತ್ತು ತರಿಸುವ ತಂಪು ಪಾನೀಯ ಕುಡಿಸಿದ.
ಆಕೆ ಪ್ರಜ್ಞೆ ಕಳೆದುಕೊಳ್ಳುತ್ತಿದ್ದಂತೆ ಆಕೆಯನ್ನು ಹಗ್ಗದಿಂದ ಕಟ್ಟಿ ಹಾಕಿ ತಲೆಯನ್ನು ಜಜ್ಜಿ ಕುತ್ತಿಗೆ ಹಿಸುಕಿ ಕೊಂದು ಹಾಕಿದ. ಬಳಿಕ ಏನೂ ಆಗದವನಂತೆ ಮನೆಗೆ ಹಿಂತಿರುಗಿದ. ಮಗಳು ಮನೆಗೆ ಹಿಂತಿರುಗದಿದ್ದಾಗ ಭಯಗೊಂಡ ಪೋಷಕರು ಪೊಲೀಸರಲ್ಲಿ ದೂರು ನೀಡಿದ್ದಾರೆ. ಆಕೆಯ ಮೊಬೈಲ್ ಕೂಡ ಸ್ವಿಚ್ಡ್ ಆಫ್ ಆಗಿತ್ತು.
ಸಿಸಿ ಟಿವಿ ದೃಶ್ಯಾವಳಿ ಮತ್ತು ಆಕೆಯ ಮೊಬೈಲ್ ಕಾಲ್ ವಿವರಗಳನ್ನು ಪಡೆದುಕೊಂಡು ತನಿಖೆಗಿಲಿದ ಪೊಲೀಸರಿಗೆ ಆರೋಪಿ ಆಕೆಯ ಜತೆ ಮೊಬೈಲ್ ಸಂಭಾಷಣೆ ನಡೆಸಿದ್ದು ತಿಳಿದು ಬಂತು. ಆತನನ್ನು ಪ್ರಶ್ನಿಸಿದಾಗ ಭೇಟಿಯಾಗಿದ್ದು ಹೌದು ice cream ತಿಂದುಕೊಂಡು ನಾನು ಮನೆಗೆ ಹೋದೆ. ಅವಳು ಕೂಡ ತನ್ನ ಮನೆ ಕಡೆ ಹೋದಳೆಂದು ಹೇಳಿದ್ದ.
ಆದರೆ ಆತನ ಫೋನ್ ಲೋಕೇಷನ್ ವಿವರ ಪರಿಶೀಲಿಸಿದಾಗ ಆತ ನಾಟಕವಾಡುತ್ತಿರುವುದು ಪೊಲೀಸರಿಗೆ ಸ್ಪಷ್ಟವಾಯ್ತು. ಆತನನ್ನು ಬಿಡದೆ ವಿಚಾರಣೆಗೊಳಪಡಿಸಿದಾಗ ಸತ್ಯ ಬಾಯ್ಬಿಟ್ಟಿದ್ದಾನೆ.
ಶವವನ್ನು ವಶಪಡಿಸಿಕೊಂಡಿರುವ ಪೊಲೀಸರು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಲೈಂಗಿಕ ದೌರ್ಜನ್ಯವಾಗಿದೆಯೇ ಎಂಬುದು ವೈದ್ಯಕೀಯ ವರದಿ ಇನ್ನು ತಿಳಿಸುಬಂದಿಲ್ಲಲ.. ಎಂದು ಪೊಲೀಸರು ತಿಳಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
