ಇಂದಿನಿಂದ ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ

ದಾವಣಗೆರೆ :

        ಪಾರದರ್ಶಕ ಲೋಕಸಭಾ ಚುನಾವಣೆ ನಡೆಸಲು ಜಿಲ್ಲಾಡಳಿತ ಸಜ್ಜಾಗಿದ್ದು, ಇಂದಿನಿಂದ (ಮಾ.28ರಿಂದ) ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ ಎಂದು ಜಿಲ್ಲಾಧಿಕಾರಿಯು, ಜಿಲ್ಲಾ ಚುನಾವಣಾಧಿಕಾರಿ ಜಿ.ಎನ್.ಶಿವಮೂರ್ತಿ ತಿಳಿಸಿದರು.ಬುಧವಾರ ಸಂಜೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಂದಿನಿಂದ (ಮಾ.28ರಿಂದ) ಏ.4ರ ವರೆಗೆ ನಗರದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ನಡೆಯಲಿದೆ. ಏ.5ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು, ಏ.8 ನಾಮಪತ್ರ ಹಿಂಪಡೆಯಲು ಕೊನೆಯ ದಿನಾಂಕವಾಗಿದ್ದು, ಏ.23ರಂದು ಮತದಾನ ನಡೆಯಲಿದೆ, ಮೇ 23ರಂದು ಮತಗಳ ಏಣಿಕೆ ಹಾಗೂ ಮೇ 27ರಂದು ಚುನಾವಣಾ ಪ್ರಕ್ರಿಯೆ ಮುಕ್ತಾಯಗೊಳ್ಳಲಿದೆ ಎಂದು ಮಾಹಿತಿ ನೀಡಿದರು.

        ಜಿಲ್ಲಾಡಳಿತ ಭವನದಲ್ಲಿರುವ ಚುನಾವಣಾಕಾಧಿಕಾರಿಗಳ ಕಚೇರಿಯಲ್ಲಿ ಬೆಳಿಗ್ಗೆ 10 ರಿಂದ ಮಧ್ಯಾಹ್ನ 3ರ ವರೆಗೆ ನಾಮಪತ್ರ ಸಲ್ಲಿಕೆಗೆ ವ್ಯವಸ್ಥೆ ಮಾಡಲಿದ್ದು, ಒಬ್ಬ ಅಭ್ಯರ್ಥಿಯು ಗರಿಷ್ಠ ನಾಲ್ಕು ನಾಮಪತ್ರಗಳನ್ನು ಸಲ್ಲಿಸಬಹುದಾಗಿದೆ. ಠೇವಣಿ ಮೊತ್ತ ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ 25 ಸಾವಿರ ಹಾಗೂ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ 12,500 ರೂ. ನಿಗದಿ ಮಾಡಲಾಗಿದೆ. ಅಭ್ಯರ್ಥಿಯು ಎರಡು ಲೋಕಸಭಾ ಕ್ಷೇತ್ರಗಳಿಗಿಂತ ಹೆಚ್ಚಿನ ಚುನಾವಣಾ ಕ್ಷೇತ್ರಗಳಿಂದ ಕಣಕ್ಕಿಳಿಯುವಂತಿಲ್ಲ ಎಂದು ಹೇಳಿದರು.

         ಜಿಲ್ಲೆಯಲ್ಲಿ ಒಟ್ಟು 19,49,497 ಜನಸಂಖ್ಯೆಯಿದ್ದು, 8,14,413 ಪುರುಷ ಹಾಗೂ 7,96,874 ಮಹಿಳಾ ಮತದಾರರು ಸೇರಿ ಒಟ್ಟು 16,11,965 ಮತದಾರರು ಮತ ಚಲಾಯಿಸುವ ಅರ್ಹತೆ ಪಡೆದಿದ್ದು, ಸುಗಮ ಮತದಾನಕ್ಕಾಗಿ 1949 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಈ ಪೈಕಿ 561 ಅತಿಸೂಕ್ಷ್ಮ ಮತಗಟ್ಟೆಗಳನ್ನು ಗುರುತಿಸಲಾಗಿದೆ ಎಂದರು.

         ಜಿಲ್ಲೆಯಲ್ಲಿ ಇವಿಎಂ, ವಿವಿಪ್ಯಾಟ್ ಹಾಗೂ ಸ್ವೀಪ್ ಕಾರ್ಯಕ್ರಮಗಳ ಮೂಲಕ ಮೊದಲನೇ ರೌಂಡನಲ್ಲಿ 716000 ಮತದಾರರಿಗೆ ಹಾಗೂ ಎರಡನೇ ರೌಂಡನಲ್ಲಿ 218250 ಮತದಾರರಿಗೆ ಜಾಗೃತಿ ಮೂಡಿಸಲಾಗಿದೆ ಎಂದ ಅವರು, ಚುನಾವಣಾ ಅಕ್ರಮ ತಡೆಯುವ ಉದ್ದೇಶದಿಂದ ಜಿಲ್ಲೆಯಲ್ಲಿ ಒಟ್ಟು 43 ಚೆಕ್‍ಪೋಸ್ಟ್‍ಗಳಿದ್ದು, ಪ್ರತಿಯೊಂದು ಚೆಕ್‍ಪೋಸ್ಟ್‍ಗಳಲ್ಲಿ 3 ಪಾಳಿಯಲ್ಲಿ ಕಾರ್ಯನಿರ್ವಹಿಸುತ್ತೀವೆ ಎಂದು ತಿಳಿಸಿದರು.

          ಭಾರತ ಚುನಾವಣಾ ಆಯೋಗವು ಮೊದಲ ಬಾರಿ   ಎಂಬ ಹೊಸ ಮೊಬೈಲ್ ಅಪ್ಲಿಕೇಶನ್ ಬಿಡುಗಡೆ ಮಾಡಿದ್ದು ಸಾರ್ವಜನಿಕರು ಯಾವುದೇ ಅಭ್ಯರ್ಥಿ ಅಥವಾ ರಾಜಕೀಯ ಪಕ್ಷಗಳ ಮುಖಂಡರು ಮತದಾನ ಮಾಡಲು ಯಾವುದೇ ಆಮಿಷ/ಲಂಚ/ಉಡುಗೊರೆ ಕೊಟ್ಟರೆ ಸಾರ್ವಜನಿಕರು ಪೋಟೊ ಅಥವಾ ವಿಡಿಯೋ ತೆಗೆದು ದೂರು ಸಲ್ಲಿಸಬಹುದಾಗಿರುತ್ತದೆ. ಈ ಮೊಬೈಲ್ ಅಪ್ಲೀಕೇಶನ್ ಅನ್ನು ಸಾರ್ವಜನಿಕರು ಗೂಗಲ್ ಪ್ಲೇ ಸ್ಟೋರ್ ನಿಂದ ಹಾಗೂ  ಡೌನ್ ಲೋಡ್ ಮಾಡಿಕೊಳ್ಳಬಹುದಾಗಿದೆ. ಈ ತಂತ್ರಾಶದಲ್ಲಿ ದಾವಣಗೆರೆ ಜಿಲ್ಲೆಯಲ್ಲಿ 17 ದೂರುಗಳು ದಾಖಲಾಗಿದ್ದು ಅವುಗಳೆಲ್ಲವನ್ನು ಇತ್ಯರ್ಥಪಡಿಸಲಾಗಿದೆ ಎಂದರು. ಚುನಾವಣಾ ಆಯೋಗವು ಎಲ್ಲಾ ಮತದಾರರಿಗೂ ಅನುಕೂಲವಾಗುವಂತೆ ಉಚಿತ ಸಹಾಯವಾಣಿ ಕೇಂದ್ರವನ್ನು ತೆರೆಯಲಾಗಿದ್ದು, ದೂರವಾಣಿ ಸಂಖ್ಯೆ 1950 ಕರೆ ಮಾಡಿ ಚುನಾವಣೆಗೆ ಸಂಬಂಧಿಸಿದ ಎಲ್ಲಾ ಮಾಹಿತಿಗಳನ್ನು ಪಡೆಯಬಹುದಾಗಿದೆ ಎಂದು ಮಾಹಿತಿ ನೀಡಿದರು.

ಮಸ್ಟರಿಂಗ್ ಹಾಗೂ ಡಿಮಸ್ಟರಿಂಗ ಸ್ಥಳಗಳು:

        ಜಗಳೂರು (103) ಸರ್ಕಾರಿ ಪದವಿ ಪೂರ್ವ ಕಾಲೇಜು ಜಗಳೂರು, ಹರಪನಹಳ್ಳಿ (104) ಶ್ರೀ ತರಳಬಾಳು ಜಗದ್ಗುರು ಆಂಗ್ಲ ಮಾಧ್ಯಮ ಪ್ರೌಢಶಾಲೆ ಹರಪನಹಳ್ಳಿ, ಹರಿಹರ (105) ಸೆಂಟ್ ಮೇರಿಸ್ ಕಾನ್ವೇಂಟ್ ಹರಪನಹಳ್ಳಿ ರಸ್ತೆ ಹರಿಹರ, ದಾವಣಗೆರೆ ಉತ್ತರ (106), ದಾವಣÀಗೆರೆ ದಕ್ಷಿಣ (107) ಶ್ರೀ ತರಳಬಾಳು ವಿದ್ಯಾ ಸಂಸ್ಥೆ ಅನುಭವ ಮಂಟಪ ದಾವಣಗೆರೆ, ಮಾಯಕೊಂಡ(108) ಶ್ರೀ ಮೋತಿ ವೀರಪ್ಪ ಪ್ರೌಢಶಾಲೆ ಮತ್ತು ಪದವಿ ಪೂರ್ವ ಕಾಲೇಜು ದಾವಣಗೆರೆ, ಚನ್ನಗಿರಿ (109) ಸರ್ಕಾರಿ ಪದವಿ ಪೂರ್ವ ಕಾಲೇಜು ಚನ್ನಗಿರಿ, ಹೊನ್ನಾಳಿ (110) ಶ್ರೀಮತಿ ಗಂಗಮ್ಮ ವೀರಭದ್ರ ಶಾಸ್ತ್ರಿ ಐಟಿಐ ಕಾಲೇಜು ಹಿರೇಕಲ್ಮಠ ಹೊನ್ನಾಳಿ ಯಲ್ಲಿ ಮಸ್ಟರಿಂಗ್ ಹಾಗೂ ಡಿಮಸ್ಟರಿಂಗ್ ಕಾರ್ಯನಡೆಯಲಿದೆ ಎಂದು ಅವರು ವಿವರಿಸಿದರು.

         ಸಾರ್ವಜನಿಕ ಸ್ಥಳಗಳಾದ ಮೈದಾನಗಳು, ಹೆಲಿಪ್ಯಾಡ್ ಬಳಕೆಯನ್ನು ಎಲ್ಲಾ ಅಭ್ಯರ್ಥಿಗಳಿಗು ಸಮನಾಗಿ ನೀಡಬೇಕು. ರಾಜಕೀಯ ಭಾಷಣಗಳಲ್ಲಿ ವೈಯುಕ್ತಿಕ ವರ್ಚಸಿಗೆ ಧÀಕ್ಕೆ ಬರದಂತೆ ಕೇವಲ ಅವರ ಸಾಧನೆಗಳನ್ನು ಅಷ್ಟೇ ಹೇಳಿಕೊಳ್ಳಬೇಕು. ಎಲ್ಲಾ ಸಭೆ ಸಮಾರಂಭಗಳಿಗೆ ಅನುಮತಿ ಕಡ್ಡಾಯವಾಗಿದೆ. ಇವುಗಳ ಅನುಮತಿಗೆ ಸುವಿಧ ಅಡಿಯಲ್ಲಿ ಏಕ ಗವಾಕ್ಷಿ ಮೂಲಕ ಅನುಮತಿ ನೀಡಲಾಗುವುದು. ರಾಜಕೀಯ ಪಕ್ಷಗಳ ಸಭೆ, ಮೆರವಣಿಗೆಗಳು, ಸಂಚಾರಕ್ಕೆ ಅಡಚಣೆಯಾಗದಂತೆ ಹಮ್ಮಿಕೊಳ್ಳಬೇಕು.

           ಚುನಾವಣಾ ಕಾರ್ಯಕ್ಕೆ ಉಪಯೋಗಿಸುವ ವಾಹನಗಳಿಗೆ ಅನುಮತಿ ಕಡ್ಡಾಯ. ದೇಶ ಕಾಯುವ ಸೈನಿಕರನ್ನು ಯಾವುದೇ ಪಕ್ಷಗಳು ಜಾಹೀರಾತಿಗೆ ಬಳಸಿಕೊಳ್ಳುವಂತಿಲ್ಲ. ಧ್ವನಿವರ್ಧಕಗಳನ್ನು ಬೆಳಿಗ್ಗೆ 6 ರಿಂದ ರಾತ್ರಿ 10 ರವರೆಗೆ ಮಾತ್ರ ಉಪಯೋಗಿಸಬೇಕು. ನಾಮಪತ್ರ ಸಲ್ಲಿಸುವ ಯಾವುದೇ ವ್ಯಕ್ತಿ ತನ್ನ ಬಗೆಗೆ ಯಾವುದೇ ಕ್ರಿಮಿನಲ್ ಮೊಕದ್ದೆಮೆಗಳಿದ್ದರೆ 3 ಬಾರಿ ಪತ್ರಿಕೆಗಳಿಗೆ ಜಾಹೀರಾತು ನೀಡಬೇಕು. ಯಾವುದೇ ಧಾರ್ಮಿಕ ಕ್ಷೇತ್ರ, ಮಂದಿರ, ಮಸೀದಿ ಗುರುದ್ವಾರಗಳಲ್ಲಿ ಚುನಾವಣಾ ಸಭೆಗಳನ್ನು ಏರ್ಪಡಿಸುವಂತಿಲ್ಲ ಎಂದರು.
ಸಭೆಯಲ್ಲಿ ವಿವಿಧ ಪಕ್ಷಗಳ ಮುಖಂಡರುಗಳು, ಅಪರ ಜಿಲ್ಲಾಧಿಕಾರಿ ಪದ್ಮ ಬಸವಂತಪ್ಪ, ಉಪ ವಿಭಾಗಾಧಿಕಾರಿ ಕುಮಾರ್‍ಸ್ವಾಮಿ, ಜಿಲ್ಲಾ ನಗರಾಭಿವೃದ್ದಿ ಕೋಶದ ಅಧಿಕಾರಿ ನಜ್ಮಾ, ಚುನಾವಣಾ ತಹಶೀಲ್ದಾರ್, ಹಾಗೂ ಚುನಾವಣಾ ಶಾಖೆಯ ಸಿಬ್ಬಂದಿಗಳು ಹಾಜರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link