ಎಂಎಸ್‍ಬಿಯಲ್ಲಿ ಪಾರಂಪರಿಕ ಜಾಗೃತಿ ಜಾಥಾ

ದಾವಣಗೆರೆ:

        ಇಲ್ಲಿನ ಎಂಎಸ್‍ಬಿ ಪದವಿ ಕಾಲೇಜಿನಲ್ಲಿ ಶುಕ್ರವಾರ ಪಾರಂಪರಿಕ ಜಾಗೃತಿ ಜಾಥಾ ಕಾರ್ಯಕ್ರಮ ನಡೆಯಿತು.ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದ ಪ್ರಾಚಾರ್ಯ ಡಾ.ಕೆ.ಹನುಮಂತಪ್ಪ, ಇತ್ತೀಚಿನ ದಿನಗಳಲ್ಲಿ ಯುವಕರ ಆಸಕ್ತಿ ಆಧುನಿಕ ಜೀವನ ಶೈಲಿಯತ್ತ ಹೊರಳುತ್ತಿದೆ. ನಮ್ಮ ಸಂಸ್ಕೃತಿ, ಪರಂಪರೆ, ಚರಿತ್ರೆ, ಸ್ಮಾರಕಗಳ ಅರಿವು ಕಡಿಮೆ ಆಗುತ್ತಿದೆ. ಹೀಗಾಗಿ ವಿದ್ಯಾರ್ಥಿಗಳಿಗೆ ಇವುಗಳ ಬಗ್ಗೆ ತಿಳಿಸಿಕೊಡುವ ಮತ್ತು ಮುಂದಿನ ಪೀಳಿಗೆಗೆ ತಲುಪಿಸುವ ಕಾರ್ಯ ಆಗಬೇಕಿದೆ. ಈ ನಿಟ್ಟಿನಲ್ಲಿ ಜಾಗೃತಿ ಜಾಥಾ ಏರ್ಪಡಿಸಲಾಗಿದೆ ಎಂದು ಹೇಳಿದರು.

        ಈ ದೇಶದ ಸಂಸ್ಕೃತಿ, ಆಡಳಿತ, ಧರ್ಮ, ಆರ್ಥಿಕತೆ, ರಾಜರ ಆಡಳಿತ ಮೂಲ ಆಧಾರ. ನಮ್ಮ ಸುತ್ತಲಿನ ಐತಿಹಾಸಿಕ ಕೆರೆ, ಕಟ್ಟೆಗಳು, ಸ್ಮಾರಕ, ದೇಗುಲಗಳು ಅವಸಾನವಾಗುತ್ತಿವೆ. ಇವುಗಳನ್ನು ರಕ್ಷಿಸಿ ಮುಂದಿನ ಪೀಳಿಗೆಗೆ ಉಳಿಸಿ ಕೊಡಬೇಕಾಗಿದೆ ಎಂದರು.
ಜಾಥಾದ ಸಂಚಾಲಕ ಡಾ. ಪರಮೇಶಿ, ಉಪನ್ಯಾಸಕರಾದ ರಾಘವೇಂದ್ರ, ಶಿವಕುಮಾರ್, ರಂಗಸ್ವಾಮಿ, ನಾರಾಯಣರಾವ್, ಶಂಕರಯ್ಯ, ಮೈಲಾರಪ್ಪ ಮತ್ತಿತರರು ಹಾಜರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link