ಪ್ರಧಾನಿ ನರೇಂದ್ರ ಮೋದಿಯವರ ಬಗ್ಗೆ ಏಕವಚನದ ಸಂಭೋದನೆ ತರವಲ್ಲ: ಶಾಸಕ ಜಿಕೆಆರ್

ಹರಪನಹಳ್ಳಿ:

       ಪ್ರಧಾನಿ ನರೇಂದ್ರ ಮೋದಿಜೀಯವರ ಬಗ್ಗೆ ಹಗುರವಾಗಿ ಮಾತನಾಡುವುದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಹಾಲಿ ಮುಖ್ಯಮಂತ್ರಿ ಕುಮಾರಸ್ವಾಮಿಯವರಿಗೆ ಶೋಭೆ ತರುವಂತದ್ದಲ್ಲ. ಇನ್ನಾದರೂ ಇಂತಹ ಸಣ್ಣತನವನ್ನು ಬಿಟ್ಟರೆ ಅವರಿಗೇ ಗೌರವ ಎಂದು ಶಾಸಕ ಜಿ.ಕರುಣಾಕರರೆಡ್ಡಿ ಅಭಿಪ್ರಾಯ ವ್ಯಕ್ತಪಡಿಸಿದರು.

        ಪಟ್ಟಣದ ಬಿಜೆಪಿ ಪಕ್ಷದ ಕಚೇರಿಯಲ್ಲಿ ಕರೆಯಲಾಗಿದ್ದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು. ನರೇಂದ್ರ ಮೋದಿಯವರು ದೇಶಕ್ಕೆ ಚೌಕಿದಾರ ಎನ್ನುವುದನ್ನು ದೇಶದ ಪ್ರತಿಯೊಬ್ಬ ಪ್ರಜೆಯೂ ಅರಿತಿದ್ದಾನೆ. ಅವರನ್ನು ಚೌಕಿದಾರ ಅಲ್ಲ ಚೋರ ಎನ್ನುವುದು ನಿಮ್ಮ ಘನತೆಗೆ ತಕ್ಕ ಮಾತಲ್ಲ. ದೇಶದ ಪ್ರಧಾನಿಗಳನ್ನು ಹಿಯಾಳಿಸುವಂತಹ ಏಕವಚನದಲ್ಲಿ ಮಾತನಾಡಿಸುವಷ್ಟು ಸಮರ್ಥರು ನಿವಲ್ಲ ಎನ್ನುವುದನ್ನು ಮನಗಾಣಬೇಕಿದೆ ಎಂದರು.

        ದೇಶದ ಗಡಿಕಾಯುವ ಯೋಧರು ಎರಡೊತ್ತಿನ ಊಟಕ್ಕೆ ಗತಿಯಿಲ್ಲದವರು ಎಂದು ಹೇಳುವ ಮುಖ್ಯಮಂತ್ರಿ ಕುಮಾರಸ್ವಾಮಿಯವರ ಮಾತು ದೇಶಕ್ಕೆ ಅವಮಾನ ಮಾಡಿದಂತೆ. ಭ್ರಮನಿರಸತನದದಿಂದ ನೀವು ಈ ರೀತಿ ಮಾತನಾಡುತ್ತಿದ್ದೀರಿ. ಇನ್ನಾದರು ನಿಮ್ಮ ನಿಲುವುಗಳನ್ನು ಬದಲಿಸಿಕೊಳ್ಳಿ ಇಲ್ಲವಾದರೆ ತಕ್ಕ ಬೆಲೆ ತೆರಬೇಕಾದೀತು ಎಂದು ಎಚ್ಚರಿಸಿದರು.

       ರಾಜ್ಯದ ಚುಕ್ಕಾಣಿ ಹಿಡಿದ ಮುಖ್ಯಮಂತ್ರಿಗಳು ಇರುವಾಗಲೇ 7 ಕೆಜಿ ಅಕ್ಕಿಯನ್ನು 10 ಕೆಜಿಗೆ ಏರಿಸುವೆ ಎಂದು ಹೇಳಿಕೆ ನೀಡುತ್ತಿರುವ ಸಿದ್ದರಾಮಯ್ಯನವರು ಮೈತ್ರಿ ಪಕ್ಷದಲ್ಲಿದ್ದೇವೆ ಎಂದು ಮರೆತಂತಿದೆ. ಚುನಾವಣೆ ನಂತರ ನಿಮ್ಮ ಭಿನ್ನಮತದಿಂದ ಮೈತ್ರಿ ಸರ್ಕಾರ ಗಟ್ಟಿಯಾಗಿರಲು ಸಾದ್ಯವೆ ಎಂದು ಯೋಚಿಸಿ ಉತ್ತಮ ಆಡಳಿತ ನೀಡುವ ಕಡೆ ಗಮನ ಹರಿಸಿ. ನಿಮ್ಮ ಭಿನ್ನಾಭಿಪ್ರಾಯ ವಿರೋಧ ಪಕ್ಷಕ್ಕೆ ವರ್ಕೌಟ್ ಆಗಲಿದೆ ಎಂದರು.

        ಬಿಜೆಪಿ ಲೋಕಸಭಾ ಅಭ್ಯರ್ಥಿ ಸತತ ನಾಲ್ಕನೇ ಬಾರಿಯೂ ಜಯಭೇರಿ ಬಾರಿಸುವ ನಿರೀಕ್ಷೆ ಹಾಗೂ ನರೇಂದ್ರ ಮೋದಿಯವರು ಮತ್ತೊಮ್ಮೆ ಪ್ರಧಾನಿಯಾಗುವುದುದ ನಿಶ್ಚಿತ ದಾವಣಗೆರೆ ಜಿಲ್ಲೆಯ ಸರಳ ಮತ್ತು ಸಜ್ಜನಿಕೆಯ ರಾಜಕಾರಣಿ ಜನಸಂಪರ್ಕ ಕಚೇರಿಯಲ್ಲಿ ಜನರಿಗೆ ನೇರವಾಗಿ ಕಾಣಸಿಗುವ ಸಮಸ್ಯೆಗಳಿಗೆ ಸ್ಪಂಧಿಸುವ ಗುಣಗಳನ್ನು ಹೊಂದಿರುವ ಅಭ್ಯರ್ಥಿಯೂ ಈ ಬಾರಿಯೂ ಬಹುಮತದಿಂದ ಗೆಲ್ಲುವ ಎಲ್ಲಾ ಲಕ್ಷಣಗಳು ಗೋಚರವಾಗಿವೆ. ಬಹುತೇಕ ತಾಲೂಕಿನ ಎಲ್ಲಾ ಗ್ರಾಮಗಳಿಗೂ ಬೇಟಿ ನೀಡಿದ್ದು ಮತದಾರರು ಉತ್ತಮ ಪ್ರತಿಕ್ರಿಯೆ ನೀಡಿದ್ದು, ಉತ್ತಮ ವಾತಾವರಣ ಗೋಚರವಾಗಿದೆ ಎಂದರು.

       ಮೋದೀಜಿಯವರ ಆಡಳಿತ ವೈಖರಿ, ದೇಶದ ರಕ್ಷಣೆಗೆ ಅವರ ನಿಲುವು ಲೋಕಸಭಾ ಚುನಾವಣೆಗೆ ಪೂರಕವಾಗಲಿದೆ. ರಾಜ್ಯದಲ್ಲಿ ಈ ಬಾರಿ 18 ರಿಂದ 22 ಸ್ಥಾನ ಹೆಚ್ಚಿನ ಮತಗಳಲ್ಲಿ ಗೆಲ್ಲುವ ಎಲ್ಲಾ ಲಕ್ಷಣಗಳು ಕಾಣುತ್ತಿವೆ ಎಂದರು.

       ಹರಪನಹಳ್ಳಿ ಕ್ಷೇತ್ರದಲ್ಲಿ ಬಿಜೆಪಿ ಭಿನ್ನಬಣಗಳಿಲ್ಲ. ನಮ್ಮೊಂದಿಗೆ ಅವರು ಬೆರೆಯುತ್ತಿಲ್ಲ ಎಂದರೆ ನಮಗದು ಸಂಬಂಧವಿಲ್ಲದ ವಿಷಯ, ಪಕ್ಷಕ್ಕೆ ಅಭಿಮಾನಿಗಳು ಸಾವಿರಾರು. ಪಕ್ಷಕ್ಕಾಗಿ ಪ್ರಚಾರ ಮಾಡುತ್ತಾರೆಯೇ ಹೊರತು ಪ್ರತ್ಯೇಕ ಬಣ ಎನ್ನುವ ಮಾತಿಲ್ಲ ಎಂದರು.
ತಾಲೂಕಿನ ಕುಡಿವ ನೀರಿನ ಸಮಸ್ಯೆಯನ್ನು ಟ್ಯಾಂಕರ್ ಮೂಲಕ ಸರಬರಾಜು ಮಾಡುತ್ತಿದ್ದೇವೆ. ಹೊಸ ಬೋರ್‍ವೆಲ್ ಗಳನ್ನು ಕೊರೆಸಲಾಗಿದೆ. 100 ಗ್ರಾಮ ಯೋಜನೆಯಲ್ಲಿರುವ ಲೋಪದೋಶಗಳನ್ನು ಸರಿಪಡಿಸಲು ಕ್ರಮ ಕೈಗೊಂಡಿದ್ದೇನೆ.

        ಪಟ್ಟಣಕ್ಕೆ ನೀರಿನ ಸಮಸ್ಯೆ ಬಾರದಂತೆ ಭದ್ರ ನದಿಯಿಂದ 5 ಟಿಎಂಸಿ ನೀರು ಬಿಡುಗಡೆ ಮಾಡಿಸಲು ನಮ್ಮ ಮನವಿ ಯಶಸ್ವಿಯಾಗಿದೆ ಎಂದರು. ಸುದ್ದಿಗೋಷ್ಟಿಯಲ್ಲಿ ಜಿಲ್ಲಾ ಉಪಾಧ್ಯಕ್ಷ ಎಂ.ಪಿ.ನಾಯ್ಕ್, ತಾಲೂಕು ಅಧ್ಯಕ್ಷ ಸತ್ತೂರು ಹಾಲೇಶ್, ಯಡಿಹಳ್ಳಿ ಶೇಖರಪ್ಪ, ಮತ್ತಿಹಳ್ಳಿ ಶಿವಣ್ಣ, ಡಾ.ಮಲ್ಕಪ್ಪ ಅಧಿಕಾರ್, ಯು.ಪಿ.ನಾಗರಾಜ್, ಸಂತೋಷ್, ಕೃಷ್ಣ ಹಾಗೂ ಇತರರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link