ಹರಪನಹಳ್ಳಿ:
ತಾಲ್ಲೂಕಿನ ತಾಳೇದಹಳ್ಳಿ ಬಳಿ ಭತ್ತದ ಹುಲ್ಲು ಹೇರಿಕೊಂಡು ಹೋಗುತ್ತಿದ್ದ ಟ್ರ್ಯಾಕ್ಟರಗೆ ವಿದ್ಯುತ್ ಲೈನ್ ತಾಗಿ ಹುಲ್ಲು ಸಮೇತ ಟ್ರ್ಯಾಕ್ಟರ್ ಟ್ರಾಲಿ ಘಟನೆ ಶುಕ್ರವಾರ ಸಂಜೆ ಜರುಗಿದೆ.
ತಾಳೇದಹಳ್ಳಿ ತಾಂಡಾದ ನಿವಾಸಿ ಶಂಕ್ರ್ಯಾನಾಯ್ಕ ಅವರಿಗೆ ಸೇರಿದ ಟ್ರ್ಯಾಕ್ಟರ್ ಲಕ್ಷ್ಮೀ ಪುರ ದಿಂದ ತಾಳೇದಹಳ್ಳಿ ಬರುತ್ತಿತ್ತು.ಅಂದಾಜು 20 ಸಾವಿರ ಮೌಲ್ಯದ ಭತ್ತದ ಹುಲ್ಲು ಭಸ್ಮಗೊಂಡಿದೆ. ಟ್ರ್ಯಾಕ್ಟರ್ ಟ್ರಾಲಿಯ ಟೈರ್ ಸುಟ್ಟಿರುತ್ತದೆ.
ಸುದ್ದಿ ತಿಳಿದ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ತೆರಳಿ ಸಾರ್ವಜನಿಕರ ನೆರವಿನೊಂದಿಗೆ ಹೆಚ್ಚಿನ ಅನಾಹುತ ಆಗದಂತೆ ತಡೆದಿದ್ದಾರೆ. ಕಾರ್ಯಾಚರಣೆಯಲ್ಲಿ ಠಾಣಾಧಿಕಾರಿ ಬಿ.ನಾಗರಾಜ್, ಮುನಿಸ್ವಾಮಿ, ಇಮಾಮಸಾಬ್ ಕಲ್ಬುರ್ಗಿ, ಮುತ್ತೂರು ಜ್ಯೋತಿ ಅವರು ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
![](https://prajapragathi.com/wp-content/uploads/2019/05/24-HRP-2.gif)