ಹುಳಿಯಾರು:
ಮಕ್ಕಳಲ್ಲಿ ಬೇಧಿ ನಿಯಂತ್ರಣಕ್ಕಾಗಿ ಜೂನ್ 3 ರಿಂದ 17 ರವರೆಗೆ ಅತಿಸಾರ ಬೇಧಿ ನಿಯಂತ್ರಣ ಪಾಕ್ಷಿಕ ಆಚರಿಸಲಾಗುತ್ತದೆ ಎಂದು ಆರೋಗ್ಯ ಕೇಂದ್ರದ ಆಡಳಿತಾಧಿಕಾರಿಗಳಾದ ಡಾ.ಎನ್. ರಾಧಿಕಾ ತಿಳಿಸಿದರು. ಹುಳಿಯಾರು ಸಮೀಪದ ಗೂಬೇಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಅತಿಸಾರ ಬೇಧಿ ನಿಯಂತ್ರಣ ಪಾಕ್ಷಿಕ 2019 ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಬೇಸಿಗೆ ಮತ್ತು ಪೂರ್ವ ಮುಂಗಾರು ತಿಂಗಳಲ್ಲಿ ಅಪೌಷ್ಟಿಕತೆಯಿಂದ 5 ವರ್ಷದೊಳಗಿನ ಮಕ್ಕಳು ಸಾವನ್ನಪ್ಪುವ ಸಂಭವ ಹೆಚ್ಚು ಎಂದು ಹೇಳಿದ ಅವರು ಓಆರ್ಎಸ್ ಮತ್ತು ಜಿಂಕ್ ಮಾತ್ರೆಗಳನ್ನು ಶಿಶುಗಳಿಗೆ ನೀಡುವುದರಿಂದ ಬೇಧಿಯಿಂದ ಉಂಟಾಗುವ ಸಾವಿನ ಪ್ರಮಾಣವನ್ನು ನಿಯಂತ್ರಿಸಬಹುದಾಗಿದೆ ಎಂದರು.ಕೇವಲ ಓ.ಆರ್.ಎಸ್ ಮತ್ತು ಜಿಂಕ್ ಮಾತ್ರೆಯ ಚಿಕಿತ್ಸೆ ನೀಡುವುದಷ್ಟೇ ಸಾಲದು ಪರಿಸರ ಸ್ವಚ್ಛತೆ ಹಾಗೂ ಊಟಕ್ಕಿಂತ ಮುಂಚೆ, ಶೌಚದ ನಂತರ ಕೈಗಳನ್ನು ಸಾಬೂನಿನಿಂದ ತೊಳೆದುಕೊಳ್ಳುವುದು ಕೂಡಾ ಮುಖ್ಯ ಎಂದರು.
ಆಶಾ ಕಾರ್ಯಕರ್ತೆಯರು ಅಂಗನವಾಡಿಗಳಲ್ಲಿ ತಾಯಂದಿರನ್ನು ಸೇರಿಸಿಕೊಂಡು ಹಾಗೂ ಮನೆ ಮನೆಗೆ ಭೇಟಿ ನೀಡಿ ಅತಿಸಾರ ಬೇಧಿಯಿಂದ ಬಳಲುವ ಮಕ್ಕಳಿಗೆ ಓ.ಆರ್.ಎಸ್ ಹಾಗೂ ಜಿಂಕ್ ಮಾತ್ರೆಯನ್ನು ನೀಡುವುದರ ಜತೆಗೆ ತಾಯಂದಿರಿಗೆ ಒಆರ್ಎಸ್ ತಯಾರಿಕೆ ಹಾಗೂ ಶಾಲಾ ಮಕ್ಕಳಿಗೆ ಕೈ ತೊಳೆಯುವ
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
