ಪುಲ್ವಾಮಾ ದಾಳಿಗೆ ಕಾರು ನೀಡಿದ್ದ ಉಗ್ರ ಫಿನಿಷ್!!

ಶ್ರೀನಗರ :

      ಪುಲ್ವಾಮಾ ದಾಳಿಗೆ ಕಾರು ವ್ಯವಸ್ಥೆ ಮಾಡಿಕೊಟ್ಟಿದ್ದ ಜೈನ್ ಎ ಮೊಹಮ್ಮದ್ ಸಂಘಟನೆಯ ಉಗ್ರನನ್ನು ಭಾರತೀಯ ಸೇನೆ ಹೊಡೆದುರುಳಿಸಿದೆ.

      ಇಂದು ಜಮ್ಮು ಮತ್ತು ಕಾಶ್ಮೀರದ ಅನಂತನಾಗ್​ನಲ್ಲಿ ಉಗ್ರರು ಮತ್ತು ಸೇನಾ ಪಡೆ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಸೈನಿಕರೊಬ್ಬರು ಹುತಾತ್ಮರಾಗಿದ್ದಾರೆ. ಸೈನಿಕರು ಇಬ್ಬರು ಉಗ್ರರನ್ನು ಸದೆಬಡಿದಿದ್ದಾರೆ.

      ಮೃತರಲ್ಲಿ ಒಬ್ಬನನ್ನು ಸಜ್ಜದ್​ ಮಖ್ಬಾಲ್​ ಭಟ್​ ಹಾಗೂ ಮತ್ತೊಬ್ಬನನ್ನು ಆತ್ಮಾಹುತಿ ಬಾಂಬ್​ ದಾಳಿಕೋರ ತವಸೀಫ್​ ಭಟ್​ ಎಂದು ಮೂಲಗಳು ತಿಳಿಸಿವೆ.

      ಕಳೆದ ಫೆಬ್ರವರಿಯಲ್ಲಿ ಸಿಆರ್​ಪಿಎಫ್​ ವಾಹನದ ಮೇಲೆ ಆತ್ಮಾಹುತಿ ದಾಳಿಕೋರ ಬಾಂಬ್​ ದಾಳಿ ನಡೆಸಲು ವಾಹನದ ವ್ಯವಸ್ಥೆ ಮಾಡಿಕೊಟ್ಟವನು ಸಜ್ಜದ್​ ಮಖ್ಬಾಲ್​ ಭಟ್​ ಎಂದು ತಿಳಿದುಬಂದಿದ್ದು, ದಾಳಿಯಲ್ಲಿ ಈತನ ಕಾರನ್ನೇ ಬಳಕೆ ಮಾಡಲಾಗಿತ್ತು ಎನ್ನಲಾಗಿದೆ.

     
      ಮನೆಯೊಂದರಲ್ಲಿ ಉಗ್ರರು ಅಡಗಿಕೊಂಡಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಭದ್ರತಾಪಡೆಗಳ ಸಿಬ್ಬಂದಿ ಮಂಗಳವಾರ ಮುಂಜಾನೆ ಆ ಮನೆಯನ್ನು ಸುತ್ತುವರಿದಿದ್ದರು. ಇವರನ್ನು ಕಂಡ ಕೂಡಲೇ ಉಗ್ರರು ಅಂಡರ್​ ಬ್ಯಾರಲ್​ ಗ್ರನೇಡ್​ ಲಾಂಚರ್​ (ಯುಬಿಜಿಎಲ್​) ಮೂಲಕ ಗ್ರನೇಡ್​ ದಾಳಿ ಆರಂಭಿಸಿದ್ದರು. ಇದಕ್ಕೆ ಪ್ರತಿಯಾಗಿ ಯೋಧರು ದಾಳಿ ನಡೆಸಿದರು ಆಗ ಸಜ್ಜದ್‌ನನ್ನು ಹತ್ಯೆ ಮಾಡಲಾಗಿದೆ.
      ಪುಲ್ವಾಮಾ ದಾಳಿಗೆ ಈತ ತನ್ನ ಕಾರು ನೀಡಿದ್ದ ಸಜ್ಜದ್ ಖಾನ್ ಭಟ್ ಹಾಗೂ ದಾಳಿಗೂ ನೇರ ನಂಟಿತ್ತು ಎನ್ನಲಾಗಿದೆ.
 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ  

   

Recent Articles

spot_img

Related Stories

Share via
Copy link